AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದ ಚಿತ್ರಕೂಟ ಜೈಲಿನಲ್ಲಿ ರಕ್ತಪಾತ; ಮೂವರು ಕುಖ್ಯಾತ ಪಾತಕಿಗಳು ಗುಂಡಿಗೆ ಆಹುತಿ

ಹತ್ಯೆಗೀಡಾದ  ಪಾತಕಿ ಮುಕೀಂ ಕಾಲಾ ಪಶ್ಚಿಮ  ಉತ್ತರ ಪ್ರದೇಶದಲ್ಲಿ ತನ್ನ ಪಾತಕ ಕೋಟೆ ಕಟ್ಟಿಕೊಂಡಿದ್ದ. ಇನ್ನು  ಮಿರಾಜುದ್ದೀನ್ ಎಂಬುವವನು ಜೈಲುಪಾಲಾಗಿರುವ ವಿವಾದಿತ ಶಾಸಕ ಮುಕ್ತಾರ್​ ಅನ್ಸಾರಿಯ ಆಪ್ತ ಎನ್ನಲಾಗಿದೆ. ಮೃತಪಟ್ಟ ಮೂವರೂ ಅತ್ಯಧಿಕ ಭದ್ರತೆಯ ಜೈಲು ಕೋಣೆಯಲ್ಲಿ ಇದ್ದರು.

ಉತ್ತರ ಪ್ರದೇಶದ ಚಿತ್ರಕೂಟ ಜೈಲಿನಲ್ಲಿ ರಕ್ತಪಾತ; ಮೂವರು ಕುಖ್ಯಾತ ಪಾತಕಿಗಳು ಗುಂಡಿಗೆ ಆಹುತಿ
ಉತ್ತರ ಪ್ರದೇಶದ ಚಿತ್ರಕೂಟ ಜೈಲಿನಲ್ಲಿ ರಕ್ತಪಾತ; ಮೂವರು ಕುಖ್ಯಾತ ಪಾತಕಿಗಳು ಗುಂಡಿಗೆ ಆಹುತಿ
Follow us
ಸಾಧು ಶ್ರೀನಾಥ್​
|

Updated on: May 14, 2021 | 5:42 PM

ಪವಿತ್ರ ಗಂಗಾ ನದಿ ಹರಿಯುವ, ಕಾಶಿಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು  ರಕ್ತಸಿಕ್ತ ಅಧ್ಯಾಯ ತೆರೆದುಕೊಂಡಿದೆ. ಅಲಹಾಬಾದ್​ ವಲಯದ ಚಿತ್ರಕೂಟ ಜೈಲಿನಲ್ಲಿ ರಕ್ತಪಾತ ನಡೆದಿದ್ದು, ಮೂವರು ಗ್ಯಾಂಗ್​​ಸ್ಟರ್​ಗಳು ಗುಂಡಿಗೆ ಆಹುತಿಯಾಗಿದ್ದಾರೆ. ​​ ಜೈಲು ಅಧಿಕಾರಿಗಳ ಪ್ರಕಾರ ಇಂದು ಶುಕ್ರವಾರ ಬೆಳಗ್ಗೆ 10 ಗಂಟೆಯಲ್ಲಿ ಅನ್ಷುಲ್​ ದೀಕ್ಷಿತ್​ ಎಂಬ ಪಾತಕಿ ಮುಕೀಂ ಕಾಲಾ (61) ಮತ್ತು ಮಿರಾಜುದ್ದೀನ್ ಎಂಬ ಇಬ್ಬರು ಪಾತಕಿಗಳನ್ನು ನಾಡ ಪಿಸ್ತೂಲಿನಿಂದ ಗುಂಡಿಟ್ಟು ಸಾಯಿಸಿದ್ದಾನೆ. ಆ ನಂತರ ಮತ್ತಷ್ಟು ಬಿಗಿಭದ್ರತೆಯ ಬ್ಯಾರೆಕ್​ನಲ್ಲಿ ಐದು ಕೈದಿಗಳನ್ನು ತನ್ನ ಬಂಧಿಯಾಗಿಸಿಕೊಂಡು, ಅವರ ಹತ್ಯೆಗೆ ಬೆದರಿಕೆಯೊಡ್ಡಿದ್ದ.  ಆ ವೇಳೆ ಜೈಲು ಅಧಿಕಾರಿಗಳು  ದೀಕ್ಷಿತ್​ನನ್ನು ಗುಂಡಿಟ್ಟು ಸಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಭಾರೀ ಭದ್ರತೆಯ ಜೈಲಿನಲ್ಲಿ ಕೈದಿಯೊಬ್ಬ ಹೀಗೆ ತನ್ನ ಆಟಾಟೋಪ ಹೇಗೆ ಮೆರೆದ, ಭದ್ರತಾ ಲೋಪ ಹೇಗಾಯಿತು ಎಂಬುದು ಚರ್ಚೆಗೆ ಗ್ರಾಸವಾಗಿದೆ.  

ಹತ್ಯೆಗೀಡಾದ ಪಾತಕಿ ಮುಕೀಂ ಕಾಲಾ ಪಶ್ಚಿಮ  ಉತ್ತರ ಪ್ರದೇಶದಲ್ಲಿ ತನ್ನ ಪಾತಕ ಕೋಟೆ ಕಟ್ಟಿಕೊಂಡಿದ್ದ. ಇನ್ನು  ಮಿರಾಜುದ್ದೀನ್ ಎಂಬುವವನು ಜೈಲುಪಾಲಾಗಿರುವ ವಿವಾದಿತ ಶಾಸಕ ಮುಕ್ತಾರ್​ ಅನ್ಸಾರಿಯ ಆಪ್ತ ಎನ್ನಲಾಗಿದೆ. ಮೃತಪಟ್ಟ ಮೂವರೂ ಅತ್ಯಧಿಕ ಭದ್ರತೆಯ ಜೈಲು ಕೋಣೆಯಲ್ಲಿ ಇದ್ದರು. ಇದೀಗ ಜೈಲು ಪೊಲೀಸರು ಜೈಲಿನಲ್ಲಿ ಇರಬಹುದಾದ ಶಸ್ತ್ರಾಸ್ತ್ರಗಳಿಗಾಗಿ ಶೋಧ ನಡೆಸಿದ್ದಾರೆ.  5 ದಿನಗಳ ಹಿಂದೆಯಷ್ಟೇ ಪಾತಕಿ ಮುಕೀಂ ಕಾಲಾನನ್ನು ಸಹರಾನಾಪುರ ಜೈಲಿನಿಂದ ಚಿತ್ರಕೂಟ ಜೈಲಿಗೆ ಬಂದಿದ್ದ. 

ಮಿರಾಜುದ್ದೀನ್​ನನ್ನು ವಾರಾಣಾಸಿ ಜೈಲಿಂದ ಮಾರ್ಚ್​ 20ರಂದು ಶಿಫ್ಟ್​ ಮಾಡಲಾಗಿತ್ತು.  ಪಾತಕಿಗಿಬ್ಬರ ವಿರುದ್ಧ ಕೊಲೆ, ಸುಲಿಗೆ, ನಕಲು ಮುಂತಾದ ಪ್ರಕರಣಗಳು ದಾಖಲಾಗಿದ್ದವು.  ಇನ್ನು ಸೀತಾಪುರದ ಅನ್ಷುಲ್​ ದೀಕ್ಷಿತ್​ನನ್ನು ಡಬಲ್ ಮರ್ಡರ್​​ ಕೇಸ್​ನಲ್ಲಿ 2014ರಲ್ಲಿ ಬಂಧಿತನಾಗಿದ್ದ. 2019ರ ಡಿಸೆಂಬರ್​ ನಿಂದ  ​ಚಿತ್ರಕೂಟ ಜೈಲಿನಲ್ಲಿದ್ದ. 

(Major security breach inside UP Chitrakoot jail, 3 gangsters Anshul Dixit, Anshul Dixit and Mirajudeen shot dead)

ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ