AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಯಾಣ: ಸೋದರ ಸೊಸೆ ಮದುವೆಗೆ 1.11 ಕೋಟಿ ರೂ. ಕೊಟ್ಟ ಮಾವ, 500 ರೂ. ನೋಟುಗಳ ಬಂಡಲ್​ ನೋಡಿ ಬೆಚ್ಚಿಬಿದ್ದ ಜನ

ಮದುವೆಯಲ್ಲಿ ಸಂಬಂಧಿಕರು ಉಡುಗೊರೆಯಾಗಿ ಮದುಮಕ್ಕಳಿಗೆ ಬಟ್ಟೆ, ಇತರೆ ಗೃಹಬಳಕೆಯ ವಸ್ತುಗಳು ಇನ್ನೂ ಕೆಲವರು ನೂರೋ ಇನ್ನೂರೋ ಕೊಡುವುದು ಸಾಮಾನ್ಯ. ಆದರೆ ಯಾರಾದರೂ ಕೋಟಿಗಟ್ಟಲೆ ಹಣ ಕೊಟ್ಟಿದ್ದು ನೋಡಿದ್ದೀರಾ.. ಈ ಸುದ್ದಿ ಓದಿ.

ಹರ್ಯಾಣ: ಸೋದರ ಸೊಸೆ ಮದುವೆಗೆ 1.11 ಕೋಟಿ ರೂ. ಕೊಟ್ಟ ಮಾವ, 500 ರೂ. ನೋಟುಗಳ ಬಂಡಲ್​ ನೋಡಿ ಬೆಚ್ಚಿಬಿದ್ದ ಜನ
ನಯನಾ ರಾಜೀವ್
|

Updated on: Mar 08, 2024 | 11:33 AM

Share

ಹರ್ಯಾಣದಲ್ಲಿ ನಡೆದ ಮದುವೆಯ ವಿಡಿಯೋ ಸಕತ್ ವೈರಲ್​ ಆಗುತ್ತಿದೆ. ಸೋದರ ಸೊಸೆಯ ಮದುವೆಯಲ್ಲಿ ಮಾವ 1.11 ಕೋಟಿ ರೂ. ನೀಡಿದ್ದಾರೆ. 500 ರೂ.ಗಳ ಬಂಡನ್​ ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ. ಸದ್ಗುರುದಾಸ್ ಅವರ ಪುತ್ರಿ ಶಿವಾನಿ ಮತ್ತು ಶೀತಲ್ ಅವರ ವಿವಾಹವು ಜಜ್ಜರ್ ಜಿಲ್ಲೆಯ ಸಿಕಂದರಪುರ ಗ್ರಾಮದಲ್ಲಿ ನಡೆಯಿತು. ಇವರ ಮದುವೆ ಪಾಣಿಪತ್‌ನ ಬಾಪೌಲಿ ಗ್ರಾಮದಲ್ಲಿ ನಡೆದಿದೆ.

ಮದುವೆಗೆ ಕೆಲವು ಗಂಟೆಗಳ ಮೊದಲು ಕಾರ್ಯಕ್ರಮ ನಡೆದಿತ್ತು, ದರಲ್ಲಿ, ರೇವಾರಿ ಜಿಲ್ಲೆಯ ಕೈಗಾರಿಕಾ ಪಟ್ಟಣ ಬವಾಲ್‌ನ ಮುಂಡಾವಾಸ್ ಗ್ರಾಮದ ನಿವಾಸಿ, ಹೆಣ್ಣುಮಕ್ಕಳ ತಾಯಿಯ ಚಿಕ್ಕಪ್ಪ, ಓಂಪ್ರಕಾಶ್ ಅವರು ಆಗಮಿಸಿದ್ದರು. ಆಗ ಸೊಸೆಗೆ ದುಡ್ಡಿನ ಬಂಡಲ್​ಗಳನ್ನು ತೆಗೆದು ಕೊಡುತ್ತಿದ್ದಂತೆ ಎಲ್ಲರೂ ಆಶ್ಚರ್ಯಚಕಿತರಾದರು. ಉಡುಗೊರೆಯಾಗಿ ಬರೋಬ್ಬರಿ 1.11 ಕೋಟಿ ರೂ. ನೀಡಿದ್ದಾರೆ.

ಓಂ ಪ್ರಕಾಶ್ ಅವರು ತನ್ನ ಇಬ್ಬರು ಸೊಸೆಯರ ಮದುವೆಯಲ್ಲಿ 15 ತೊಲ ಚಿನ್ನ ಹಾಗೂ ಅರ್ಧ ಕೆಜಿ ಬೆಳ್ಳಿಯನ್ನು ನೀಡಿದ್ದರು. ಈ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಿವಾನಿ ಮತ್ತು ಶೀತಲ್ ಅವರ ತಾಯಿಯ ತಮ್ಮ ಓಂಪ್ರಕಾಶ್ ಜಮೀನುದಾರ ಮತ್ತು ಅವರದ್ದು ಶ್ರೀಮಂತ ಕುಟುಂಬ.

ಮತ್ತಷ್ಟು ಓದಿ: Video Viral: ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಮೊದಲ ಪುರುಷ ರೋಬೋಟ್

ಅಕ್ಕನ ಮದುವೆಯನ್ನೂ ಅದ್ಧೂರಿಯಾಗಿ ಏರ್ಪಡಿಸಿದ್ದ ಅವರು ಇದೀಗ ಸೊಸೆಯಂದಿರ ಮದುವೆಯನ್ನೂ ಅದ್ಧೂರಿಯಾಗಿ ನಡೆಸಿಕೊಟ್ಟಿದ್ದಾರೆ.

ಮತ್ತೊಂದು ಘಟನೆ ನಡೆದಿತ್ತು ಹರ್ಯಾಣದ ರೇವಾರಿ ನಗರದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಇಲ್ಲೂ ಕೂಡ ತಾಯಿಯ ತಮ್ಮ ಸೊಸೆ ಮದುವೆಯಲ್ಲಿ ಉಡುಗೊರೆಯಾಗಿ 1 ಕೋಟಿ 1 ಲಕ್ಷ, 11 ಸಾವಿರದ 101ರೂಪಾಯಿ ನಗದು ನೀಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ