AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯ ವಂಚನೆಯನ್ನು ಅರೆಕ್ಷಣದಲ್ಲಿ ಬಯಲು ಮಾಡಿದ ಪತ್ನಿ; ಪ್ರೇಯಸಿಯೊಂದಿಗೆ ಹೋಟೆಲ್​ಗೆ ಹೋಗಿದ್ದವನ ಪೀಕಲಾಟ !

ಈ ವ್ಯಕ್ತಿ ಗುಜರಾತ್​ ಮೂಲದ ಉದ್ಯಮಿಯಾಗಿದ್ದು, ಈತನ ಪತ್ನಿ ಅದೇ ಕಂಪನಿಯಲ್ಲಿ ಡೈರೆಕ್ಟರ್​. ಉದ್ಯಮಿಯ ಪತ್ನಿಗೆ ಮೊದಲಿನಿಂದಲೂ ಪತಿ ಮೇಲೆ ಅನುಮಾನವಿತ್ತು.

ಪತಿಯ ವಂಚನೆಯನ್ನು ಅರೆಕ್ಷಣದಲ್ಲಿ ಬಯಲು ಮಾಡಿದ ಪತ್ನಿ; ಪ್ರೇಯಸಿಯೊಂದಿಗೆ ಹೋಟೆಲ್​ಗೆ ಹೋಗಿದ್ದವನ ಪೀಕಲಾಟ !
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 05, 2022 | 10:42 AM

Share

ಪುಣೆ: 41 ವರ್ಷದ ವ್ಯಕ್ತಿ ಮತ್ತು ಆತನ ಪ್ರೇಯಸಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿ ಪುಣೆಯ ಹೋಟೆಲ್​​ವೊಂದಕ್ಕೆ ಪ್ರಿಯತಮೆಯೊಂದಿಗೆ ಹೋಗಿದ್ದ. ಅಲ್ಲಿ ತಪಾಸಣೆ ಮಾಡುವಾಗ ತನ್ನ ಪ್ರಿಯತಮೆಯ ಗುರುತು ದೃಢೀಕರಿಸಲು ಪತ್ನಿಯ ಆಧಾರ್ ಕಾರ್ಡ್​ ಕೊಟ್ಟಿದ್ದಾನೆ. ಸದ್ಯ ವ್ಯಕ್ತಿ ಮತ್ತು ಆತನ ಪ್ರೇಯಸಿ ಇಬ್ಬರ ವಿರುದ್ಧವೂ ಹಿಂಜೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ವ್ಯಕ್ತಿ ಗುಜರಾತ್​ ಮೂಲದ ಉದ್ಯಮಿಯಾಗಿದ್ದು, ಈತನ ಪತ್ನಿ ಅದೇ ಕಂಪನಿಯಲ್ಲಿ ಡೈರೆಕ್ಟರ್​. ಉದ್ಯಮಿಯ ಪತ್ನಿಗೆ ಮೊದಲಿನಿಂದಲೂ ಪತಿ ಮೇಲೆ ಅನುಮಾನವಿತ್ತು. ಇದೇ ಕಾರಣಕ್ಕೆ ಪತಿಯ ಕಾರಿನಲ್ಲಿ ಜಿಪಿಎಸ್​ ಕೂಡ ಅಳವಡಿಸಿದ್ದರು.  ಕಳೆದ ನವೆಂಬರ್​​ನಲ್ಲಿ ಈತ ಬೆಂಗಳೂರಿಗೆ ಬಿಜಿನೆಸ್​ ಟ್ರಿಪ್​ಗೆ ಹೋಗುತ್ತೇನೆ ಎಂದು ಹೇಳಿದ್ದ, ಆದರೆ ಆಕೆ ಜಿಪಿಎಸ್ ಟ್ರ್ಯಾಕರ್​​ನಲ್ಲಿ ಚೆಕ್​ ಮಾಡಿದಾಗ ಕಾರು ಪುಣೆಗೆ ಹೋಗಿದ್ದು ಬೆಳಕಿಗೆ ಬಂದಿದೆ.

ಮಹಿಳೆ ಸುಮ್ಮನಿರದೆ ಜಿಪಿಎಸ್​ ಟ್ರ್ಯಾಕರ್​ ತೋರಿಸಿದ ಲೊಕೇಶನ್​​ನ ಹೋಟೆಲ್​ಗೆ ಕರೆ ಮಾಡಿ ಪತಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಹೋಟೆಲ್​ ಸ್ಟಾಪ್​,  ಉದ್ಯಮಿ ತಮ್ಮ ಪತ್ನಿಯೊಂದಿಗೇ ಇಲ್ಲಿಗೆ ಬಂದಿದ್ದಾಗಿ ತಿಳಿಸಿದಾಗ ನಿಜವಾದ ಪತ್ನಿ ಶಾಕ್​ ಆಗಿದ್ದಾರೆ.  ಆದರೆ ಬಳಿಕ ಗೊತ್ತಾದ ಸತ್ಯವೇನೆಂದರೆ, ಈ ಉದ್ಯಮಿ ಪತ್ನಿಯ ಆಧಾರ್​ ಕಾರ್ಡ್ ತೋರಿಸಿ, ಇನ್ನೊಬ್ಬ ಮಹಿಳೆಯೊಂದಿಗೆ ಹೋಟೆಲ್​ ಹೋಗಿದ್ದಾನೆ. ಸದ್ಯ ಆಕೆ ನಾಪತ್ತೆಯಾಗಿದ್ದು, ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Hrithik Roshan: ಮತ್ತೆ ಸಬಾ ಜತೆ ಕಾಣಿಸಿಕೊಂಡ ಹೃತಿಕ್; ಅಭಿಮಾನಿಗಳಿಗೆ ಹೆಚ್ಚಿತು ಅನುಮಾನ

Published On - 9:59 am, Sat, 5 February 22

Follow Us
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?