AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯ ವಂಚನೆಯನ್ನು ಅರೆಕ್ಷಣದಲ್ಲಿ ಬಯಲು ಮಾಡಿದ ಪತ್ನಿ; ಪ್ರೇಯಸಿಯೊಂದಿಗೆ ಹೋಟೆಲ್​ಗೆ ಹೋಗಿದ್ದವನ ಪೀಕಲಾಟ !

ಈ ವ್ಯಕ್ತಿ ಗುಜರಾತ್​ ಮೂಲದ ಉದ್ಯಮಿಯಾಗಿದ್ದು, ಈತನ ಪತ್ನಿ ಅದೇ ಕಂಪನಿಯಲ್ಲಿ ಡೈರೆಕ್ಟರ್​. ಉದ್ಯಮಿಯ ಪತ್ನಿಗೆ ಮೊದಲಿನಿಂದಲೂ ಪತಿ ಮೇಲೆ ಅನುಮಾನವಿತ್ತು.

ಪತಿಯ ವಂಚನೆಯನ್ನು ಅರೆಕ್ಷಣದಲ್ಲಿ ಬಯಲು ಮಾಡಿದ ಪತ್ನಿ; ಪ್ರೇಯಸಿಯೊಂದಿಗೆ ಹೋಟೆಲ್​ಗೆ ಹೋಗಿದ್ದವನ ಪೀಕಲಾಟ !
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 05, 2022 | 10:42 AM

Share

ಪುಣೆ: 41 ವರ್ಷದ ವ್ಯಕ್ತಿ ಮತ್ತು ಆತನ ಪ್ರೇಯಸಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿ ಪುಣೆಯ ಹೋಟೆಲ್​​ವೊಂದಕ್ಕೆ ಪ್ರಿಯತಮೆಯೊಂದಿಗೆ ಹೋಗಿದ್ದ. ಅಲ್ಲಿ ತಪಾಸಣೆ ಮಾಡುವಾಗ ತನ್ನ ಪ್ರಿಯತಮೆಯ ಗುರುತು ದೃಢೀಕರಿಸಲು ಪತ್ನಿಯ ಆಧಾರ್ ಕಾರ್ಡ್​ ಕೊಟ್ಟಿದ್ದಾನೆ. ಸದ್ಯ ವ್ಯಕ್ತಿ ಮತ್ತು ಆತನ ಪ್ರೇಯಸಿ ಇಬ್ಬರ ವಿರುದ್ಧವೂ ಹಿಂಜೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ವ್ಯಕ್ತಿ ಗುಜರಾತ್​ ಮೂಲದ ಉದ್ಯಮಿಯಾಗಿದ್ದು, ಈತನ ಪತ್ನಿ ಅದೇ ಕಂಪನಿಯಲ್ಲಿ ಡೈರೆಕ್ಟರ್​. ಉದ್ಯಮಿಯ ಪತ್ನಿಗೆ ಮೊದಲಿನಿಂದಲೂ ಪತಿ ಮೇಲೆ ಅನುಮಾನವಿತ್ತು. ಇದೇ ಕಾರಣಕ್ಕೆ ಪತಿಯ ಕಾರಿನಲ್ಲಿ ಜಿಪಿಎಸ್​ ಕೂಡ ಅಳವಡಿಸಿದ್ದರು.  ಕಳೆದ ನವೆಂಬರ್​​ನಲ್ಲಿ ಈತ ಬೆಂಗಳೂರಿಗೆ ಬಿಜಿನೆಸ್​ ಟ್ರಿಪ್​ಗೆ ಹೋಗುತ್ತೇನೆ ಎಂದು ಹೇಳಿದ್ದ, ಆದರೆ ಆಕೆ ಜಿಪಿಎಸ್ ಟ್ರ್ಯಾಕರ್​​ನಲ್ಲಿ ಚೆಕ್​ ಮಾಡಿದಾಗ ಕಾರು ಪುಣೆಗೆ ಹೋಗಿದ್ದು ಬೆಳಕಿಗೆ ಬಂದಿದೆ.

ಮಹಿಳೆ ಸುಮ್ಮನಿರದೆ ಜಿಪಿಎಸ್​ ಟ್ರ್ಯಾಕರ್​ ತೋರಿಸಿದ ಲೊಕೇಶನ್​​ನ ಹೋಟೆಲ್​ಗೆ ಕರೆ ಮಾಡಿ ಪತಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಹೋಟೆಲ್​ ಸ್ಟಾಪ್​,  ಉದ್ಯಮಿ ತಮ್ಮ ಪತ್ನಿಯೊಂದಿಗೇ ಇಲ್ಲಿಗೆ ಬಂದಿದ್ದಾಗಿ ತಿಳಿಸಿದಾಗ ನಿಜವಾದ ಪತ್ನಿ ಶಾಕ್​ ಆಗಿದ್ದಾರೆ.  ಆದರೆ ಬಳಿಕ ಗೊತ್ತಾದ ಸತ್ಯವೇನೆಂದರೆ, ಈ ಉದ್ಯಮಿ ಪತ್ನಿಯ ಆಧಾರ್​ ಕಾರ್ಡ್ ತೋರಿಸಿ, ಇನ್ನೊಬ್ಬ ಮಹಿಳೆಯೊಂದಿಗೆ ಹೋಟೆಲ್​ ಹೋಗಿದ್ದಾನೆ. ಸದ್ಯ ಆಕೆ ನಾಪತ್ತೆಯಾಗಿದ್ದು, ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Hrithik Roshan: ಮತ್ತೆ ಸಬಾ ಜತೆ ಕಾಣಿಸಿಕೊಂಡ ಹೃತಿಕ್; ಅಭಿಮಾನಿಗಳಿಗೆ ಹೆಚ್ಚಿತು ಅನುಮಾನ

Published On - 9:59 am, Sat, 5 February 22

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!