AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕೆಜಿಗೆ 99,999ರೂಗೆ ಮಾರಾಟವಾದ ಅಸ್ಸಾಂನ ಮನೋಹರಿ ಗೋಲ್ಡ್​ ಟೀ ಪೌಡರ್

ಒಂದು ಕೆಜಿ ಮನೋಹರಿ ಗೋಲ್ಡ್​ ಟೀ ಪೌಡರ್ ಬರೋಬ್ಬರಿ 99,999ರೂ ಗೆ ಮಾರಾಟವಾಗುವ ಮೂಲಕ ತನ್ನದೇ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.

ಒಂದು ಕೆಜಿಗೆ 99,999ರೂಗೆ ಮಾರಾಟವಾದ ಅಸ್ಸಾಂನ ಮನೋಹರಿ ಗೋಲ್ಡ್​ ಟೀ ಪೌಡರ್
ಮನೋಹರಿ ಗೋಲ್ಡ್​ ಟೀ
TV9 Web
| Edited By: |

Updated on: Dec 14, 2021 | 4:32 PM

Share

ಗುಹಾವಟಿ: ಅಸ್ಸಾಂನ ಅಪರೂಪದ ಹಾಗೂ ಪ್ರಸಿದ್ಧ ಮನೋಹರಿ ಗೋಲ್ಡ್​ ಟೀ ಪೌಡರ್​ ಈ ಬಾರಿಯೂ ಮಾರಾಟದಲ್ಲಿ ಇತಿಹಾಸ ಸೃಷ್ಟಿಸಿದೆ. ಅಸ್ಸಾಂನಲ್ಲಿ ಮನೋಹರಿ ಗೋಲ್ಡ್​ ಚಹಾ ಪುಡಿ ಸ್ವಾದಿಷ್ಟ ಭರಿತ ಚಹಾಪುಡಿಯೆಂದೇ ಪ್ರಸಿದ್ಧಿ ಪಡೆದಿದೆ. ಈ ಬಾರಿ ಒಂದು ಕೆಜಿ ಮನೋಹರಿ ಗೋಲ್ಡ್​ ಟೀ ಪೌಡರ್ ಬರೋಬ್ಬರಿ 99,999ರೂ ಗೆ ಮಾರಾಟವಾಗುವ ಮೂಲಕ ತನ್ನದೇ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ. ಹರಾಜಿನಲ್ಲಿ ಸೌರವ್​ ಟೀ ಟ್ರೇಡರ್ಸ್​ ಕಂಪನಿ 99,999ರೂ ಗೆ ಬಿಡ್​ ಮಾಡಿದೆ. ಚಹಾಪುಡಿಯನ್ನು ಗುಹಾವಟಿ ಮೂಲದ ವಿಷ್ಣು ಟೀ ಕಂಪನಿ ಖರೀದಿಸಿದೆ. ಈ ಕಂಪನಿ ಆನ್ಲೈನಲ್ಲಿ ತಮ್ಮ ವೆಬ್ಸೈಟ್​ ಮೂಲಕ ವಿದೇಶಗಳಿಗೂ ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಮಾರಾಟ ಮಾಡುತ್ತದೆ.

ಕಳೆದ ವರ್ಷ ಇದೇ ಮನೋಹರಿ ಗೋಲ್ಡ್​ ಟೀ ಪುಡಿ ಕಂಟೆಂಪರರಿ ಬ್ರೋಕರ್ಸ್ ಪ್ರೈವೇಟ್​ ಲಿಮಿಟೆಡ್​ನಿಂದ ಹರಾಜಿಗಿಟ್ಟಿದ್ದ ಒಂದು ಕಿಲೋ ಗ್ರಾಮ್​ಗೆ ಚಹಾಪುಡಿ75,000ರೂಗೆ ಮಾರಾಟವಾಗುವ ಮೂಲಕ ದಾಖಲೆ ಮಾಡಿತ್ತು. ಈ ಬಾರಿ 99,999ರೂ. ಮಾರಾಟವಾಗಿ ತನ್ನದೇ ದಾಖಲೆಯನ್ನು ಮುರಿದು, ತನ್ನ ಉತ್ಕೃಷ್ಟತೆಯನ್ನು ಸಾಬೀತುಪಡಿಸಿಕೊಂಡಿದೆ. ಗುಹಾವಟಿ ಟೀ ಮಾರಾಟ ಕೇಂದ್ರದಲ್ಲಿ ನಡೆದ ಹರಾಜಿನಲ್ಲಿ ಮನೋಹರಿ ಗೋಲ್ಡ್​ ಚಹಾಪುಡಿ ಭಾರೀ ಮೊತ್ತಕ್ಕೆ ಮಾರಟವಾಗಿದೆ.

ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಎಳೆಯ ಎಲೆಗಳಿಂದ ಉತ್ಕೃಷ್ಟ ರೀತಿಯಲ್ಲಿ ತಯಾರಿಸಲಾಗುತ್ತದೆ. ಈ ಮಾದರಿಯ ಟೀ ಎಲೆಗಳು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೊರೆಯುತ್ತದೆ. ಹೀಗಾಗಿ ಅಸ್ಸಾಂನ ಮನೋಹರಿ ಗೋಲ್ಡ್​ ಚಹಾಪುಡಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಭಾರೀ ಬೇಡಿಕೆಯಿದೆ. ಅಲ್ಲದೆ ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಭಾರತದ ಅತ್ಯಂತ ದುಬಾರಿ ಟೀ ಪೌಡರ್​ ಎಂದು ಹೇಳಲಾಗಿದೆ.

Follow Us
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್