AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪವಾಸ ಸತ್ಯಾಗ್ರಹ ಹಿಂಪಡೆದ ಮನೋಜ್ ಜಾರಂಗೆ ಪಾಟೀಲ್: ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ ಶಿಂಧೆ

ಮರಾಠಾ ಮೀಸಲಾತಿ ಆಂದೋಲನದ ಬೇಡಿಕೆಗಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್​ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಇದೀಗ ಹಿಂಪಡೆದಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪವಾಸ ಕೈಬಿಟ್ಟಿದ್ದಕ್ಕೆ ಮನೋಜ ಜಾರಂಗೆ ಪಾಟೀಲ್​ ಹಾಗೂ ಸಕಲ ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಪವಾಸ ಸತ್ಯಾಗ್ರಹ ಹಿಂಪಡೆದ ಮನೋಜ್ ಜಾರಂಗೆ ಪಾಟೀಲ್: ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ ಸಿಎಂ ಶಿಂಧೆ
ಸಿಎಂ ಏಕನಾಥ್ ಶಿಂಧೆ
ಗಂಗಾಧರ​ ಬ. ಸಾಬೋಜಿ
|

Updated on: Nov 02, 2023 | 10:53 PM

Share

ಮುಂಬೈ, ನವೆಂಬರ್​​​​ 02: ಮರಾಠಾ ಮೀಸಲಾತಿ (Maratha reservation) ಆಂದೋಲನದ ಬೇಡಿಕೆಗಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್​ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಇದೀಗ ಹಿಂಪಡೆದಿದ್ದಾರೆ. ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಮನೋಜ ಜಾರಂಗೆ ಪಾಟೀಲ್​ ಹಾಗೂ ಸಕಲ ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಮನೋಜ್ ಜಾರಂಗೆ ಪಾಟೀಲ್​ರನ್ನು ಮನವೊಲಿಸಿದ ಕಾನೂನು ತಜ್ಞರು, ಸಚಿವರು ಹಾಗೂ ಸಾರ್ವಜನಿಕ ಪ್ರತಿನಿಧಿಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಮನೋಜ್ ಜಾರಂಗೆ ಪಾಟೀಲ್​ ಅವರು ತಮ್ಮ ಉಪವಾಸವನ್ನು ಕೈಬಿಟ್ಟದಕ್ಕೆ ಅವರಿಗೆ ಧನ್ಯವಾದಗಳು. ಅವರ ಸಮುದಾಯಕ್ಕೂ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಸರ್ಕಾರದ ಕರೆಗೆ ಓಗೊಟ್ಟು ಉಪವಾಸ ಹಿಂಪಡೆದಿರುವ ಮರಾಠ ಸಮುದಾಯಕ್ಕೆ ಸಕಾಲ ಅಭಿನಂದನೆ ಸಲ್ಲಿಸಿದ್ದಾರೆ. ಜಾರಂಗೆಯವರು ನಮ್ಮ ಸರ್ಕಾರದ ನಿಯೋಗದ ಮುಂದೆ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ನಾನು ನ್ಯಾಯಮೂರ್ತಿ ಮರೋತ್ರಾವ್ ಗಾಯಕ್ವಾಡ್ ಮತ್ತು ನ್ಯಾಯಮೂರ್ತಿ ಸುನಿಲ್ ಶುಕ್ರೆ ಅವರನ್ನು ಸಹ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಮರಾಠ ಮೀಸಲಾತಿ: ದೆಹಲಿಯಲ್ಲಿ ಭೇಟಿಯಾಗಲಿದ್ದಾರೆ ಉನ್ನತ ನಾಯಕರು, ಇಲ್ಲಿವರೆಗೆ ಏನೇನಾಯ್ತು?

ನಾನು ಹಿಂದಿನ ದಿನ ಜಾರಂಗೆ ಜೊತೆ ಚರ್ಚೆ ನಡೆಸಿದ್ದೆ. ಅವರು ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಮತ್ತು ಸೂಕ್ತವಾದ ಮೀಸಲಾತಿಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಕುಂಬಿ ದಾಖಲೆಗಳನ್ನು ಹುಡುಕಲಾಗುತ್ತಿದೆ. ಮರಾಠವಾಡದಲ್ಲಿ ಮೀಸಲಾತಿ ನೀಡುತ್ತಿದ್ದೇವೆ. ಕುಂಬಿ ಪ್ರಮಾಣ ಪತ್ರ ನೀಡುವಲ್ಲಿ ಶಿಂಧೆ ಸಮಿತಿ ಯಶಸ್ವಿಯಾಗಿದೆ. 13 ಸಾವಿರ ದಾಖಲೆಗಳನ್ನು ಹುಡುಕಿದ್ದು ದೊಡ್ಡ ಸಾಧನೆ. ಶಿಂಧೆ ಸಮಿತಿ ಹಗಲಿರುಳು ಕೆಲಸ ಮಾಡಿದೆ. ಇನ್ನಷ್ಟು ಕುಂಬಿ ದಾಖಲೆಗಳು ಪತ್ತೆಯಾಗಲಿವೆ ಎಂದು ಹೇಳಿದ್ದಾರೆ.

ಇದು ಇತಿಹಾಸದಲ್ಲಿ ಮೊದಲ ಘಟನೆ

ಕಾನೂನು ತಜ್ಞರೊಬ್ಬರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಇತಿಹಾಸದಲ್ಲೇ ಮೊದಲ ನಿದರ್ಶನವಾಗಲಿದೆ. ಗಾಯಕ್ವಾಡ್ ಅವರಿಗೆ ಈ ವಿಷಯದ ಸಂಪೂರ್ಣ ಜ್ಞಾನವಿತ್ತು. ನಿವೃತ್ತ ನ್ಯಾಯಾಧೀಶರ ಜತೆ ಮಾತನಾಡಿದ ಬಳಿಕ ಅವರಿಗೆ ಮನವರಿಕೆ ಆಗಿರಬೇಕು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: Maratha Reservation: ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಮೀಸಲಾತಿಗೆ ಸಮ್ಮತಿ: ಏಕನಾಥ್ ಶಿಂಧೆ

ಮರಾಠಾ ಮೀಸಲಾತಿ ಆಂದೋಲನದ ಬೇಡಿಕೆಗಾಗಿ ಜಾಲ್ನಾದ ಅಂತರವಳಿ-ಸಾರತಿಯಲ್ಲಿ ಮನೋಜ್ ಜಾರಂಗೆ ಪಾಟೀಲ್ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಉಪವಾಸ ಸತ್ಯಾಗ್ರಹ ಇಂದಿಗೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ನಿನ್ನೆ ರಾತ್ರಿಯಿಂದ ಮನೋಜ ಜಾರಂಗೆ ಪಾಟೀಲ್ ನೀರು ಕುಡಿಯುವುದನ್ನು ಸಹ ನಿಲ್ಲಿಸಿದ್ದರು. ಆದರೆ ಸದ್ಯ ತಮ್ಮ ಉಪವಾಸ ಸತ್ಯಾಗ್ರಹವನ್ನು ಅವರು ಹಿಂಪಡೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More