ಛತ್ತೀಸ್​ಗಢ್​​ನಲ್ಲಿ ಎನ್​ಕೌಂಟರ್​; ಪ್ರಮುಖ ಮಾವೋವಾದಿ ನಾಯಕನೊಬ್ಬನ ಹತ್ಯೆ

| Updated By: Lakshmi Hegde

Updated on: Nov 06, 2021 | 2:54 PM

ಭಾರತದಲ್ಲಿ ಗಡಿಯಲ್ಲಿ ಉಗ್ರರ ದಾಳಿ ಸಮಸ್ಯೆಯಾದರೆ ದೇಶದೊಳಗೆ ನಕ್ಸಲರು, ಮಾವೋವಾದಿಗಳ ಕಾಟ ಯಾವಾಗಲೂ ಇರುತ್ತದೆ. ಅದರಲ್ಲೂ ಛತ್ತೀಸಗಢ ನಕ್ಸಲ್​ ಪೀಡಿತ ರಾಜ್ಯ. 

ಛತ್ತೀಸ್​ಗಢ್​​ನಲ್ಲಿ ಎನ್​ಕೌಂಟರ್​; ಪ್ರಮುಖ ಮಾವೋವಾದಿ ನಾಯಕನೊಬ್ಬನ ಹತ್ಯೆ
ಮೃತ ಮಾವೋವಾದಿಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು
Follow us on

ಛತ್ತೀಸ್​ಗಡ್​​ನ ದಂತೇವಾಡಾ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ಪ್ರಮುಖ ಮಾವೋವಾದಿ ನಾಯಕನೊಬ್ಬನನ್ನು ಹತ್ಯೆ ಮಾಡಿದ್ದಾರೆ. ಈ ಮಾವೋವಾದಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನು ಆಗಿದ್ದ. ಈತನ ತಲೆಗೆ 5 ಲಕ್ಷ ರೂಪಾಯಿ ಬಹುಮಾನ ಕಟ್ಟಲಾಗಿತ್ತು. ಅಂದರೆ ಈ ಮಾವೋವಾದಿಯ ಪತ್ತೆಗೆ ಸಹಾಯ ಮಾಡಿದವರಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆಯಾಗಿತ್ತು. ಅಂಥವನನ್ನು ಶುಕ್ರವಾರ ಭದ್ರತಾ ಪಡೆ ಸಿಬ್ಬಂದಿ ಕೊಂದುಹಾಕಿದ್ದಾರೆ.

ಭಾರತದಲ್ಲಿ ಗಡಿಯಲ್ಲಿ ಉಗ್ರರ ದಾಳಿ ಸಮಸ್ಯೆಯಾದರೆ ದೇಶದೊಳಗೆ ನಕ್ಸಲರು, ಮಾವೋವಾದಿಗಳ ಕಾಟ ಯಾವಾಗಲೂ ಇರುತ್ತದೆ. ಅದರಲ್ಲೂ ಛತ್ತೀಸಗಢ ನಕ್ಸಲ್​ ಪೀಡಿತ ರಾಜ್ಯ.  ಹಾಗೇ, ಶುಕ್ರವಾರ ಸಂಜೆ 4ಗಂಟೆ ಹೊತ್ತಿಗೆ ಕೂಡ ಗೀಡಂ ಪೊಲೀಸ್​ ಠಾಣೆ ವ್ಯಾಪ್ತಿಯ ಅರಣ್ಯವೊಂದರಲ್ಲಿ ಜಿಲ್ಲಾ ಮೀಸಲು ಗಾರ್ಡ್​​ ಪೊಲೀಸರು ಮತ್ತು ಮಾವೋವಾದಿಗಳ ಮಧ್ಯೆ ಎನ್​ಕೌಂಟರ್​ ನಡೆದಿತ್ತು.  ಗುಂಡಿನ ಚಕಮಕಿ ನಂತರ ರಾಮ್ಸು ಕೊರಮ್​ ಎಂಬ ಮಾವೋವಾದಿಯ ಶವ ಸಿಕ್ಕಿದೆ. ಈತ ಹಲವು ಪ್ರಕರಣಗಳಲ್ಲಿ ಬೇಕಾದವನಾಗಿದ್ದ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈತನಿಂದ 7.62 ಎಂಎಂ ಪಿಸ್ತೂಲ್​, 5 ಕೆಜಿ ಐಇಡಿ ಸೇರಿ ಮತ್ತಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Puneeth Rajkumar: ಪುನೀತ್ ಕಾಣಿಸಿಕೊಂಡಿದ್ದ ‘ಗಂಧದ ಗುಡಿ’ ಬಿಡುಗಡೆ ಯಾವಾಗ?; ಇಲ್ಲಿದೆ ಮಾಹಿತಿ

Published On - 1:32 pm, Sat, 6 November 21