ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದರೆ ಉಪರಾಷ್ಟ್ರಪತಿಯಾಗಬಹುದು: ಮೇಘಾಲಯ ರಾಜ್ಯಪಾಲ

ಉಚಿತ ಕೊಡುಗೆಗಳ ಬಗ್ಗೆ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಸರ್ಕಾರದ ವಿರುದ್ಧ ಮಾತನಾಡಬೇಡಿ. ನಿಮ್ಮನ್ನು ಉಪರಾಷ್ಟ್ರಪತಿ ಮಾಡುತ್ತೇನೆ ಎಂಬುದು ಮೋದಿಯವರ ಉಚಿತ ಕೊಡುಗೆ...

ಕೇಂದ್ರ  ಸರ್ಕಾರದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದರೆ ಉಪರಾಷ್ಟ್ರಪತಿಯಾಗಬಹುದು: ಮೇಘಾಲಯ ರಾಜ್ಯಪಾಲ
ಸತ್ಯಪಾಲ್ ಮಲಿಕ್
Updated By: ರಶ್ಮಿ ಕಲ್ಲಕಟ್ಟ

Updated on: Sep 11, 2022 | 2:18 PM

ಮೇಘಾಲಯದ (Meghalaya) ರಾಜ್ಯಪಾಲ ಸತ್ಯಪಾಲ್ ಮಲಿಕ್ (Satya Pal Malik) ಅವರು ಕೇಂದ್ರದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದರೆ ಉಪರಾಷ್ಟ್ರಪತಿಯಾಗಬಹುದು ಎಂದು ಜನರು ನನಗೆ ಸೂಚನೆ ನೀಡಿದ್ದರು ಎಂದಿದ್ದಾರೆ. ರಾಜ್ಯಪಾಲರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಭಾನುವಾರ ಮತ್ತು ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಇದು ಪ್ರಧಾನಿ ಮೋದಿಯವರ ‘ರೇವಡಿ (ಉಚಿತ ಕೊಡುಗೆ) ಸಂಸ್ಕೃತಿ’ ಎಂದು ಹೇಳಿದೆ.  “ವಾಹ್ ಮೋದಿಜಿ ವಾಹ್. ನೀವು ಮಹಾನ್ ಕಲಾವಿದರಾಗಿ ಹೊರಹೊಮ್ಮಿದ್ದೀರಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಉಚಿತ ಕೊಡುಗೆಗಳ ಬಗ್ಗೆ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಸರ್ಕಾರದ ವಿರುದ್ಧ ಮಾತನಾಡಬೇಡಿ. ನಿಮ್ಮನ್ನು ಉಪರಾಷ್ಟ್ರಪತಿ ಮಾಡುತ್ತೇನೆ ಎಂಬುದು ಮೋದಿಯವರ ಉಚಿತ ಕೊಡುಗೆ ಎಂದು ಕಾಂಗ್ರೆಸ್ ಹೇಳಿದೆ. ದೆಹಲಿಯ ರಾಜ್‌ಪಥ್  ಅನ್ನು ಕರ್ತವ್ಯ ಪಥ್‌ ಎಂದು ಮರುನಾಮಕರಣ ಮಾಡಿರುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮೇಘಾಲಯ ರಾಜ್ಯಪಾಲರು ಕೇಂದ್ರವನ್ನು ಟೀಕಿಸಿದ್ದು ಇದು ಅಗತ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ್ ಜೋಡೋ ಯಾತ್ರೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೊಗಳಿದ ಒಂದು ದಿನದ ನಂತರ ಅವರ ರಾಜ್ಯಪಾಲ ಹುದ್ದೆಯ ಆಫರ್ ಬಗ್ಗೆ ಮಲಿಕ್ ಹೇಳಿದ್ದಾರೆ. ರಾಹುಲ್ ಗಾಂಧಿ ಉತ್ತಮ ಲಸ ಮಾಡುತ್ತಿದ್ದಾರೆ ಮತ್ತು ಯಾತ್ರೆಯು ದೇಶಕ್ಕೆ ಕೆಲವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.

ಸಿಖ್ಖರಿಗೆ ಹಕ್ಕಿದೆ: ಸತ್ಯ ಪಾಲ್ ಮಲಿಕ್

ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು 2021 ರ ಜನವರಿ 26 ರಂದು ರೈತ ಪ್ರತಿಭಟನಾಕಾರರು ಕೆಂಪು ಕೋಟೆಗೆ ನುಗ್ಗಿ ಸಿಖ್ ಧಾರ್ಮಿಕ ಧ್ವಜವಾದ ನಿಶಾನ್ ಸಾಹಿಬ್ ಅನ್ನು ಮೊಘಲ್ ಯುಗದ ಸ್ಮಾರಕದ ಮೇಲೆ ಹಾರಿಸಿದ ಘಟನೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ದೆಹಲಿಯು ಪ್ರಧಾನಿ ನರೇಂದ್ರ ಮೋದಿಯವರನ್ನು ಬದಲಾಯಿಸಿದೆ. ರೈತ ವಿರೋಧಿ ಕಾನೂನು ಆಂದೋಲನದ ಸಮಯದಲ್ಲಿ ರೈತರ ಸಾವಿನಿಂದ ಅವರಿಗೆ ಹೆಚ್ಚು ನೋವಾಗಲಿಲ್ಲ ಎಂದು ಮಲಿಕ್ ಹೇಳಿದ್ದಾರೆ. ಮೋದಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಕೆಲವರು ಮಾತ್ರ ಭಾರತದ ವೆಚ್ಚದಲ್ಲಿ ಲಾಭ ಪಡೆಯುತ್ತಿದ್ದಾರೆ ಎಂದು ಮೇಘಾಲಯ ರಾಜ್ಯಪಾಲರು ಆರೋಪಿಸಿದ್ದಾರೆ