AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ 17ರ ನಂತ್ರ ಲಾಕ್ ಡೌನ್ 4.O ಜಾರಿ, ಅಧಿಕಾರಿಗಳ ಜತೆ ಮೋದಿ ಚರ್ಚೆ

ದೆಹಲಿ: 3ನೇ ಹಂತದ ಲಾಕ್​ಡೌನ್ ಮುಗಿಯೋಕೆ ಜಸ್ಟ್ ಮೂರೇ ದಿನ ಬಾಕಿ ಉಳಿದಿದೆ. ಇನ್ನೇನ್ 4ನೇ ಹಂತದ ಲಾಕ್​ಡೌನ್ ಕೂಡ ವಿಭಿನ್ನ ರೂಪದಲ್ಲಿ ಬರುತ್ತೆ ಅಂತಾ ಮೋದಿ ಹೇಳಿದ್ದಾರೆ. ನಿನ್ನೆ ಏನೇನ್ ರೂಲ್ಸ್ ಮಾಡ್ಬೇಕು, ಯಾವೆಲ್ಲಾ ಬದಲಾವಣೆಗಳನ್ನ ಜಾರಿಗೆ ತರಬೇಕು ಅಂತಾ ಮೋದಿ ಸಚಿವರೊಂದಿಗೆ ಮೀಟಿಂಗ್ ಮಾಡಿದ್ದಾರೆ. ಲಾಕ್​ಡೌನ್ 3.O ಮುಗೀತಾ ಬಂತು.. 4ನೇ ಹಂತದ ಲಾಕ್​ಡೌನ್​ಗೆ ಇಡೀ ದೇಶವೇ ಸಜ್ಜಾಗ್ತಿದೆ. ಹೊಸ ರೂಪದ ಲಾಕ್​ಡೌನ್ ಹೇಗಿರಲಿದೆ ಅನ್ನೋ ಕುತೂಹಲ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಹೊಸ ಮಾರ್ಗಸೂಚಿ ಬಗ್ಗೆ […]

ಮೇ 17ರ ನಂತ್ರ ಲಾಕ್ ಡೌನ್ 4.O ಜಾರಿ, ಅಧಿಕಾರಿಗಳ ಜತೆ ಮೋದಿ ಚರ್ಚೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 14, 2020 | 6:42 AM

Share

ದೆಹಲಿ: 3ನೇ ಹಂತದ ಲಾಕ್​ಡೌನ್ ಮುಗಿಯೋಕೆ ಜಸ್ಟ್ ಮೂರೇ ದಿನ ಬಾಕಿ ಉಳಿದಿದೆ. ಇನ್ನೇನ್ 4ನೇ ಹಂತದ ಲಾಕ್​ಡೌನ್ ಕೂಡ ವಿಭಿನ್ನ ರೂಪದಲ್ಲಿ ಬರುತ್ತೆ ಅಂತಾ ಮೋದಿ ಹೇಳಿದ್ದಾರೆ. ನಿನ್ನೆ ಏನೇನ್ ರೂಲ್ಸ್ ಮಾಡ್ಬೇಕು, ಯಾವೆಲ್ಲಾ ಬದಲಾವಣೆಗಳನ್ನ ಜಾರಿಗೆ ತರಬೇಕು ಅಂತಾ ಮೋದಿ ಸಚಿವರೊಂದಿಗೆ ಮೀಟಿಂಗ್ ಮಾಡಿದ್ದಾರೆ.

ಲಾಕ್​ಡೌನ್ 3.O ಮುಗೀತಾ ಬಂತು.. 4ನೇ ಹಂತದ ಲಾಕ್​ಡೌನ್​ಗೆ ಇಡೀ ದೇಶವೇ ಸಜ್ಜಾಗ್ತಿದೆ. ಹೊಸ ರೂಪದ ಲಾಕ್​ಡೌನ್ ಹೇಗಿರಲಿದೆ ಅನ್ನೋ ಕುತೂಹಲ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಹೊಸ ಮಾರ್ಗಸೂಚಿ ಬಗ್ಗೆ ಪ್ರಧಾನಿ ನಿನ್ನೆ ಸಚಿವರೊಂದಿಗೆ ಸುದೀರ್ಘ ಸಭೆ ನಡೆಸಿದ್ರು.

ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸೇರಿದಂತೆ ಕೇಂದ್ರ ಸರ್ಕಾರ ರಚಿಸಿದ್ದ 14 ಟಾಸ್ಕ್​ಫೋರ್ಸ್​ ಮುಖ್ಯಸ್ಥರು ಭಾಗಿಯಾಗಿದ್ರು. ಈ ವೇಳೆ ಲಾಕ್​ಡೌನ್ ಅಂತಿಮ ನಿಯಮಗಳ ರಚನೆ ಬಗ್ಗೆ ಚರ್ಚೆ ನಡೆಸಿದ್ರು. ಅಷ್ಟೇ ಅಲ್ಲದೆ ಹಿರಿಯ ಸಚಿವ್ರ ಅಭಿಪ್ರಾಯ ಪಡೆದಿರೋ ಮೋದಿ, ಲಾಕ್​ಡೌನ್ 4.O ಮಾರ್ಗಸೂಚಿ ರೂಪಿಸುವಂತೆ ಗೃಹ ಇಲಾಖೆಗೆ ಸೂಚಿಸಿದ್ದಾರೆ.

ಇಂದು ಫೈನಲ್ ಆಗುತ್ತಾ ಲಾಕ್​ಡೌನ್ 4.O ರೂಲ್ಸ್? ಇನ್ನು 4ನೇ ಹಂತದ ಲಾಕ್​ಡೌನ್​ನ ಮಾರ್ಗಸೂಚಿ ಇಂದು ಸಂಜೆಯೊಳಗೆ ಫೈನಲ್ ಆಗೋ ಸಾಧ್ಯತೆಯಿದೆ. ಈಗಾಗ್ಲೇ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳ ವರದಿ ತಲುಪಿದ್ದು, ಎಲ್ಲಾ ರಾಜ್ಯಗಳ ಲಾಕ್​ಡೌನ್ ವಿನಾಯಿತಿ, ಜೋನ್​​ಗಳ ಮರುವಿಂಗಡಣೆ ವಿಧಾನಗಳ ಬಗ್ಗೆ ವರದಿ ಪಡೆಯಲಾಗಿದೆ. ರಾಜ್ಯ ಸರ್ಕಾರಗಳ ವರದಿ ಪರಿಶೀಲಿಸಲಿರೋ ಗೃಹ ಇಲಾಖೆ ಅಂತಿಮ ನಿರ್ಧಾರ ಕೈಗೊಳ್ಳುತ್ತೆ.

ಹೊಸ ರೂಲ್ಸ್ ಏನಿರಬಹುದು? ಕಂಟೇನ್ಮೆಂಟ್ ಜೋನ್​ಗಳಲ್ಲಿ ಮಾತ್ರ ಲಾಕ್​ಡೌನ್ ಮುಂದುವರಿಸೋ ಸಾಧ್ಯತೆಯಿದೆ. ಕಂಟೇನ್ಮೆಂಟ್ ಜೋನ್ ಬಿಟ್ಟು ಬೇರೆ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ಸಿಗಬಹುದು. ಕಂಪನಿ, ಕಾರ್ಖಾನೆಗಳಲ್ಲಿ ಶೇ.33ರ ಬದಲು ಶೇ.50ರಷ್ಟು ಕಾರ್ಮಿಕರನ್ನ ಬಳಸಿಕೊಳ್ಳಲು ಸೂಚಿಸಬಹುದು.

ಇನ್ನು ನಗರಗಳಲ್ಲಿ & ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸಂಚಾರ ಆರಂಭಿಸಬಹುದು. ದೊಡ್ಡ ನಗರಗಳಿಗೆ ಆರಂಭವಾದ ರೈಲು ಸಂಚಾರ ಸಣ್ಣ ನಗರಗಳಿಗೂ ವಿಸ್ತರಣೆಯಾಗ್ಬಹುದು. ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ನಗರಗಳಿಗೆ ದೇಶೀಯ ವಿಮಾನ ಸಂಚಾರ ಆರಂಭ ಸಾಧ್ಯತೆಯಿದೆ. ಜೊತೆಗೆ ನಗರಗಳಲ್ಲಿ ಆಟೋ, ಕ್ಯಾಬ್​ಗಳ ಸಂಚಾರಕ್ಕೆ ಅವಕಾಶ ಸಿಗ್ಬಹುದು. ಹಾಗೂ ಬಹುತೇಕ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ.

ಒಟ್ನಲ್ಲಿ ಲಾಕ್​ಡೌನ್ 3.Oನ ಅವಧಿ ಮುಗಿಯೋ ಮುನ್ನವೇ ಲಾಕ್​ಡೌನ್ 4.Oನ ಹೊಸ ರೂಲ್ಸ್ ಘೋಷಣೆ ಮಾಡಲಾಗುತ್ತೆ ಅಂತಾ ಮೋದಿ ಹೇಳಿದ್ದಾರೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಇಂದು ಅಥ್ವಾ ನಾಳೆ ಹೊಸ ಮಾರ್ಗಸೂಚಿ ಘೋಷಿಸೋ ಸಾಧ್ಯತೆಯಿದ್ದು, 4ನೇ ಹಂತದ ಲಾಕ್​​ಡೌನ್​ನ ರೂಪುರೇಷೆ ಅದೇನ್ ವಿಭಿನ್ನವಾಗಿರುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!