AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನಿನ್ನು ಡಾ. ರಾಹುಲ್​..’ಎಂದು ಖುಷಿಯಿಂದ ಹೇಳಿಕೊಂಡಿದ್ದ ವೈದ್ಯ ಕೊವಿಡ್​ 19ನಿಂದ ಸಾವು; ಆಸ್ಪತ್ರೆ ಬೆಡ್​ ಮೇಲೆ ಒಂದು ತಿಂಗಳು ಹೋರಾಟ

ಡಾ. ರಾಹುಲ್​ ಮಹಾರಾಷ್ಟ್ರದ ಲಾಥೂರ್​​​ನಲ್ಲಿರುವ ಇನ್​​ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​ ಆ್ಯಂಡ್​ ರಿಸರ್ಚ್​ನಲ್ಲಿ 5ವರ್ಷಗಳ ಎಂಬಿಬಿಎಸ್​ ಪದವಿ ಪೂರ್ಣಗೊಳಿಸಿದ್ದರು. ಹಾಗೇ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಮುಂದಿದ್ದರು.

‘ನಾನಿನ್ನು ಡಾ. ರಾಹುಲ್​..’ಎಂದು ಖುಷಿಯಿಂದ ಹೇಳಿಕೊಂಡಿದ್ದ ವೈದ್ಯ ಕೊವಿಡ್​ 19ನಿಂದ ಸಾವು; ಆಸ್ಪತ್ರೆ ಬೆಡ್​ ಮೇಲೆ ಒಂದು ತಿಂಗಳು ಹೋರಾಟ
ಡಾ.ರಾಹುಲ್​
Lakshmi Hegde
|

Updated on: May 27, 2021 | 3:54 PM

Share

ಇವರು ಆಗತಾನೇ ವೈದ್ಯಕೀಯ ವೃತ್ತಿ ಶುರು ಮಾಡಿದ ಯುವಕ. ಏಪ್ರಿಲ್​ 26ರಂದು ಫೇಸ್​​ಬುಕ್​​ನಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ವೈದ್ಯಕೀಯ ವೃತ್ತಿ ಪ್ರಾರಂಭದ ವಿಷಯವನ್ನು ತಿಳಿಸಿದ್ದರು. ‘ನಾನು ವೈದ್ಯಕೀಯ ಪದವಿಯ ಅಂತಿಮ ವರ್ಷ ಉತ್ತೀರ್ಣನಾದೆ. ಇದೀಗ ಅಧಿಕೃತವಾಗಿ ಡಾ. ರಾಹುಲ್​ ಆಗಿದ್ದೇನೆ..’ಹೀಗೆಂದು ಬರೆದುಕೊಂಡಿದ್ದರು. ರಾಹುಲ್ ಹಾಕಿದ್ದ ಈ ಪೋಸ್ಟ್​​ಗೆ ಸಿಕ್ಕಾಪಟೆ ಲೈಕ್​​ಗಳು, ಶುಭಹಾರೈಕೆಗಳು ಬಂದಿದ್ದವು. ಆದರೇನು? ಈಗ ಅವರ ಸ್ನೇಹಿತರು, ಆಪ್ತರು ರಾಹುಲ್​ ಅವರ ಸಾವಿನ ನೋವನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ರಾಹುಲ್​ ಫೋಟೋ ಹಾಕಿ ಸಂತಾಪ ಸೂಚಿಸುತ್ತಿದ್ದಾರೆ.

ಕಳೆದ ತಿಂಗಳಷ್ಟೇ ವೈದ್ಯಕೀಯ ವೃತ್ತಿ ಶುರು ಮಾಡಿ ಹೊಸದೊಂದು ಹೆಜ್ಜೆ ಇಟ್ಟಿದ್ದ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಆನಂದನಗರ ಗ್ರಾಮದ ಡಾ. ರಾಹುಲ್ ಆಶಾ ವಿಶ್ವನಾಥ್​ ಪವಾರ್​ ಕೊವಿಡ್​ 19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರ ತಂದೆ ಕಬ್ಬು ಕೊಯ್ಲು ಮಾಡುವ ವೃತ್ತಿ ನಡೆಸುತ್ತಿದ್ದು, ತಮ್ಮ ಮಗನನ್ನು ತುಂಬ ಚೆನ್ನಾಗಿ ಓದಿಸಿ, ಭವಿಷ್ಯದ ಕನಸು ಕಂಡಿದ್ದರು. ಹಾಗೇ ಇವರ ಕುಟುಂಬದಲ್ಲಿ ಡಾ. ರಾಹುಲ್​ ಅವರೇ ಮೊದಲ ವೈದ್ಯರೂ ಆಗಿದ್ದರು.

ಡಾ. ರಾಹುಲ್​ ಮಹಾರಾಷ್ಟ್ರದ ಲಾಥೂರ್​​​ನಲ್ಲಿರುವ ಇನ್​​ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​ ಆ್ಯಂಡ್​ ರಿಸರ್ಚ್​ನಲ್ಲಿ 5ವರ್ಷಗಳ ಎಂಬಿಬಿಎಸ್​ ಪದವಿ ಪೂರ್ಣಗೊಳಿಸಿದ್ದರು. ಹಾಗೇ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಮುಂದಿದ್ದರು. ಎಂಬಿಬಿಎಸ್​ ಕೊನೇ ವರ್ಷದ ಪರೀಕ್ಷೆ ಮುಗಿಸಿದ ಕೂಡಲೇ ಡಾ. ರಾಹುಲ್ ಹಳ್ಳಿಗೆ ಬಂದಿದ್ದರು. ಆದರೆ ಕೆಲವು ದಿನಗಳಲ್ಲಿ ಅವರಲ್ಲಿ ಕೊವಿಡ್​ 19 ಸಂಬಂಧಪಟ್ಟ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅದಾದ ಬಳಿಕ ಬೀಡ್​ ಜಿಲ್ಲೆಯ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದರು. ಆದರೆ ರಾಹುಲ್ ಆರೋಗ್ಯ ಸ್ಥಿತಿ ಹದಗೆಡುತ್ತ ಹೋಯಿತು. ಹಾಗಾಗಿ ನಂತರ ಔರಂಗಾಬಾದ್​ನ ಎಂಜಿಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಮೇ 6ರಿಂದ ಅವರ ಇಂಟರ್ನ್​ಶಿಪ್​ ಶುರುವಾಗುವುದಿತ್ತು. ಆದರೆ ರಾಹುಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರಾಹುಲ್​ಗೆ ಯಾವುದೇ ಇತರ ಕಾಯಿಲೆಗಳು ಇಲ್ಲದೆ ಇದ್ದರೂ ಆರೋಗ್ಯ ಸ್ಥಿತಿ ಹದಗೆಡುತ್ತಲೇ ಹೋಯಿತು. ಈ ವೇಳೆ ಹಣಕಾಸಿನ ತೊಂದೆಯೂ ಉಂಟಾಗಿ ರಾಹುಲ್ ಸ್ನೇಹಿತರು ಮೇ 20ರಿಂದ ಸಾಮಾಜಿಕ ಜಾಲತಾಣಗಳ ಮೂಲಕ ದೇಣಿಗೆ, ಹಣಕಾಸು ನೆರವು ಕೇಳಲು ಶುರು ಮಾಡಿದರು. ಅದೇ ವೇಳೆ, ರಾಹುಲ್​ಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆಯೂ ನಿರ್ಧಾರ ಮಾಡಿತ್ತು ಎಂದು ರಾಹುಲ್​ ಸಹೋದ್ಯೋಗಿ ಡಾ.ಅಮರನಾಥ್ ಗುಟ್ಟೆ ತಿಳಿಸಿದ್ದಾರೆ.

ಇನ್ನು ಎಷ್ಟೆಲ್ಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಅಷ್ಟರಲ್ಲಿ ಡಾ. ರಾಹುಲ್​ಗೆ ಬ್ಲ್ಯಾಕ್ ಫಂಗಸ್​ ಕೂಡ ತಗುಲಿತ್ತು. ಕ್ಷೀಣಿಸುತ್ತಿರುವ ಆರೋಗ್ಯದೊಂದಿಗೆ ಸುಮಾರು ತಿಂಗಳ ಕಾಲ ಹೋರಾಟ ಮಾಡಿದ ರಾಹುಲ್​ ನಿನ್ನೆ (ಬುಧವಾರ) ಮೃತಪಟ್ಟಿದ್ದಾರೆ. ನಾವು ನಮ್ಮ ಅತ್ಯುತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ ಎಂದು ಡಾ. ಗುಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಸತ್ತ ವ್ಯಕ್ತಿಯ ಮೃತದೇಹವನ್ನ ಕಸದ ವಾಹನದಲ್ಲಿ ಅಂತ್ಯಕ್ರಿಯೆಗಾಗಿ ಸಾಗಿಸಲಾಗಿದೆ…

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ