AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ನರ್ತನದ ನಡುವೆ ದೇಶದಲ್ಲಿ ಮ್ಯೂಕೋಮೈಕೋಸಿಸ್ Mucormycosis ರೋಗ ಪತ್ತೆ

ಈ ಮ್ಯೂಕೋಮೈಕೋಸಿಸ್ Mucormycosis ರೋಗ ಮೂಗು, ಮೆದುಳು, ಶ್ವಾಸಕೋಶವನ್ನು ದುರ್ಬಲಗೊಳಿಸುವ ಜೊತೆಗೆ ಮೂಗಿನ ಸುತ್ತ ಊತ ಹಾಗೂ ಕಣ್ಣಿನ ನೋವು ಕಾಣಿಸಿಕೊಳ್ಳುತ್ತದೆ.

ಕೊರೊನಾ ನರ್ತನದ ನಡುವೆ ದೇಶದಲ್ಲಿ ಮ್ಯೂಕೋಮೈಕೋಸಿಸ್ Mucormycosis ರೋಗ ಪತ್ತೆ
ಸಾಂದರ್ಭಿಕ ಚಿತ್ರ
sandhya thejappa
| Updated By: ಸಾಧು ಶ್ರೀನಾಥ್​|

Updated on: Dec 16, 2020 | 2:18 PM

Share

ದೆಹಲಿ: ಕೊರೊನಾ ಸೋಂಕಿನ ನರ್ತನದ ನಡುವೆ ಭಾರತದಲ್ಲೂ ಮ್ಯೂಕೋಮೈಕೋಸಿಸ್ Mucormycosis ರೋಗ ಪತ್ತೆಯಾಗಿದೆ. ಹೆಚ್ಚಾಗಿ ಫಂಗಸ್​ನಿಂದ ಬರುವ ರೋಗ ಇದಾಗಿದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರ ಮೇಲೆ ಬೇಗ ಆಕ್ರಮಣ ಮಾಡಿ ಜೀವವನ್ನು ಹಿಂಡುತ್ತದೆ.

ಕೊರೊನಾ ಸೋಂಕಿನಿಂದ ಚೇತರಿಕೆ ಕಂಡವರಿಗೆ ಮತ್ತಷ್ಟು ಅಪಾಯಕ್ಕೆ ಕಾರಣವಾಗುವ ಈ ಭಯಾನಕ ರೋಗ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿದ್ದು. ಈ ಮ್ಯೂಕೋಮೈಕೋಸಿಸ್ ರೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡಾ ಬೆಚ್ಚಿ ಬಿದ್ದಿದೆ. ವಯಸ್ಸಾದವರು, ಕೋಮಾರ್ಬಡಿಟಿಯಿಂದ ಬಳಲುವವರು ಈ ರೋಗದಿಂದ ಎಚ್ಚರವಿರಬೇಕು. ಈಗಾಗಲೇ ಹಲವರ ಜೀವವನ್ನು ಬಲಿ ತೆಗೆದುಕೊಂಡಿರುವ ಈ ರಕ್ಕಸ ರೋಗದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದರೆ ಇದರಿಂದ ಜೀವಕ್ಕೆ ಆಗುವ ಅಪಾಯ ತಪ್ಪಿದ್ದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಮ್ಯೂಕೋಮೈಕೋಸಿಸ್ ರೋಗ ಮೂಗು, ಮೆದುಳು, ಶ್ವಾಸಕೋಶವನ್ನು ದುರ್ಬಲಗೊಳಿಸುವ ಜೊತೆಗೆ ಮೂಗಿನ ಸುತ್ತ ಊತ ಹಾಗೂ ಕಣ್ಣಿನ ನೋವು ಕಾಣಿಸಿಕೊಳ್ಳುತ್ತದೆ. ಹೈಬಿಪಿ, ಶುಗರ್, ಕ್ಯಾನ್ಸರ್, ಕಿಡ್ನಿ, ಶ್ವಾಸಕೋಶ ಸಂಬಂಧಿ ಕಾಯಿಲೆ ಇದ್ದವರ ಮೇಲೆ ಈ ಮ್ಯೂಕೋಮೈಕೋಸಿಸ್ ರೋಗ ಅಟ್ಟಹಾಸ ಮೆರೆಯುವ ಪ್ರಮಾಣ ಹೆಚ್ಚಿದ್ದು, ಇದರ ಬಗ್ಗೆ ಉದಾಸೀನ ತೋರಿದರೆ ಮತ್ತಷ್ಟು ಸಮಸ್ಯೆಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ.

ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರ ಮೇಲೆ ಟಾರ್ಗೆಟ್: ರೋಗ ಹತ್ತಿರ ಸುಳಿಯಬಾರದೆಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ಕೊರೊನಾ ಸೋಂಕು ಹೆಚ್ಚು ಪತ್ತೆಯಾಗವುದು ಕೂಡಾ ಈ ರೋಗ ನಿರೋಧಕ ಶಕ್ತಿ ಕಡಿಮೆಯಾದರಲ್ಲಿ. ಅದರಂತೆ ಈ ಹೆಮ್ಮಾರಿ ಮ್ಯೂಕೋಮೈಕೋಸಿಸ್ ರೋಗವು ಕೂಡಾ ಅಂತವರನ್ನೆ ಟಾರ್ಗೆಟ್ ಮಾಡುತ್ತದೆ. ಅಲ್ಲದೇ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಈ ಮ್ಯೂಕೋಮೈಕೋಸಿಸ್ ಕಡಿಮೆ ಸಮಯದಲ್ಲೇ ದೇಹವನ್ನು ಆವರಿಸಿಕೊಳ್ಳುತ್ತದೆ. ಟ್ರಾನ್ಸಪ್ಲಂಟ್ ರೋಗಿಗಳಲ್ಲಿ ಇದರ ಆಟ ಹೆಚ್ಚಿದ್ದು, ಕೊರೊನಾ ವೈರಸ್​ಗಿಂತಲೂ ಹೆಚ್ಚು ಅಪಾಯಕಾರಿ ಎಂದು ತಿಳಿದುಬಂದಿದೆ.

Corona Vaccine ಅಮೆರಿಕಾದಲ್ಲಿ ಬಳಕೆಗೆ ಲಭ್ಯವಾ ಫೈಜರ್, ಬಯೋಎನ್​ಟೆಕ್ ಲಸಿಕೆ?

ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?