AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Chalo ರೈತರನ್ನು ದೆಹಲಿ ಗಡಿಭಾಗದಿಂದ ತೆರವುಗೊಳಿಸಿ, ಅರ್ಜಿ ವಿಚಾರಣೆ ಇಂದು

ದೆಹಲಿ ಚಲೋ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ರಸ್ತೆ ತಡೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣವೊಡ್ಡಿ ರಿಷಭ್ ಶರ್ಮಾ ಸರ್ವೋಚ್ಛ ನ್ಯಾಯಾಲಯಕ್ಕೆ PIL ಸಲ್ಲಿಸಿದ್ದರು.

Delhi Chalo ರೈತರನ್ನು ದೆಹಲಿ ಗಡಿಭಾಗದಿಂದ ತೆರವುಗೊಳಿಸಿ, ಅರ್ಜಿ ವಿಚಾರಣೆ ಇಂದು
ಸುಪ್ರೀಂ ಕೋರ್ಟ್
TV9 Web
| Updated By: ganapathi bhat|

Updated on:Apr 07, 2022 | 10:41 AM

Share

ದೆಹಲಿ: ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರನ್ನು ತಕ್ಷಣ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ಇಂದು ಕೈಗೆತ್ತಿಕೊಳ್ಳಲಿದೆ. ರಿಷಭ್ ಶರ್ಮಾ ಎಂಬ ಕಾನೂನು ವಿದ್ಯಾರ್ಥಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯುನ್ನು ಸುಪ್ರೀಂ ಕೋರ್ಟ್ ಇಂದು ಆಲಿಸಲಿದೆ.

ದೆಹಲಿ ಚಲೋ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ರಸ್ತೆ ತಡೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣವೊಡ್ಡಿ ರಿಷಭ್ ಶರ್ಮಾ ಸರ್ವೋಚ್ಛ ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಸಿದ್ದರು. ರೈತರ ಪ್ರತಿಭಟನೆಯನ್ನು ಸೂಚಿತ ಸ್ಥಳದಲ್ಲೇ ನಡೆಸಬೇಕು. ಕೊರೊನಾ ಸೋಂಕು ಹರಡದಂತೆ ಸಾಮಾಜಿಕ ಅಂತರ ಮತ್ತು ಮುಖಗವಸು ಬಳಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿಯಲ್ಲಿ ವಿವರಿಸಿರುವಂತೆ ನಿರಂಕಾರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ರೈತರಿಗೆ ನ.27ರಂದು ದೆಹಲಿ ಪೊಲೀಸರು ಅವಕಾಶ ನೀಡಿದ್ದರು. ಆದರೆ ರೈತರು ಅದರ ಹೊರತಾಗಿ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ, ರಸ್ತೆ ತಡೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ತುರ್ತು ಮತ್ತು ಆರೋಗ್ಯ ಸೇವೆಗಳಿಗೆ ತೊಡಕಾಗಿದೆ. ಕೊವಿಡ್ ಸಂಖ್ಯೆಯಲ್ಲೂ ಹೆಚ್ಚಳವಾಗಲು ಕಾರಣವಾಗಿದೆ ಎಂದು ತಿಳಿಸಲಾಗಿದೆ.

ಕೇಂದ್ರ ಮತ್ತು ರಾಜ್ಯವು ರೈತರ ಬೇಡಿಕೆಯನ್ನು ಆಲಿಸುವಂತೆ ಮತ್ತು ಪ್ರತಿಭಟನೆಗೆ ಸೂಕ್ತ ವ್ಯವಸ್ಥೆಯನ್ನು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇಂದು ಆಲಿಸಲಿದೆ. ಜೊತೆಗೆ, ರೈತರ ಮೇಲೆ ಪೊಲೀಸರ ದಾಳಿಯಿಂದಾದ ಮಾನವ ಹಕ್ಕುಗಳ ಚ್ಯುತಿಯ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ವರದಿಯನ್ನೂ ಕೇಳಿದೆ.

Delhi Chalo ರೈತರನ್ನು ದೆಹಲಿ ಗಡಿ ಭಾಗದಿಂದ ತಕ್ಷಣ ತೆರವುಗೊಳಿಸಿ: ಸುಪ್ರೀಂ ಕೋರ್ಟ್​ಗೆ ಅರ್ಜಿ

Published On - 12:00 pm, Wed, 16 December 20