AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಕುಟುಂಬದ ಕುಡಿ ಹೆಸರು ಬಹಿರಂಗ; ಈ ಹೆಸರಿಡಲು ಇದೆ ಒಂದು ವಿಶೇಷ ಕಾರಣ!

ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಮುಕೇಶ್​ ಅಂಬಾನಿ ತಮ್ಮ ಮೊಮ್ಮಗುವನ್ನು ಎತ್ತಿಕೊಂಡಿರುವ ಫೋಟೋ ಕೂಡ ಈಗಾಗಲೇ ವೈರಲ್ ಆಗಿದೆ. ಇದೀಗ ಪುಟ್ಟ ಪಾಪುವಿನ ಹೆಸರನ್ನೂ ಅಂಬಾನಿ ಕುಟುಂಬ ಒಂದು ವಿಶೇಷ ಕಾರ್ಡ್ ಮೂಲಕ ಬಹಿರಂಗ ಪಡಿಸಿದೆ.

ಅಂಬಾನಿ ಕುಟುಂಬದ ಕುಡಿ ಹೆಸರು ಬಹಿರಂಗ; ಈ ಹೆಸರಿಡಲು ಇದೆ ಒಂದು ವಿಶೇಷ ಕಾರಣ!
ಮುಕೇಶ್ ಅಂಬಾನಿ ಮೊಮ್ಮಗುವಿನೊಂದಿಗೆ (ಎಡ) ಆಕಾಶ್​ ಅಂಬಾನಿ ದಂಪತಿ (ಬಲ)
Lakshmi Hegde
| Edited By: ಸಾಧು ಶ್ರೀನಾಥ್​|

Updated on: Dec 24, 2020 | 4:48 PM

Share

ಮುಂಬೈ: ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಮುಕೇಶ್​ ಅಂಬಾನಿ ಇತ್ತೀಚೆಗಷ್ಟೇ ಅಜ್ಜನಾಗಿದ್ದಾರೆ. ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್​ ಅಂಬಾನಿ ದಂಪತಿಗೆ ಡಿ. 10ರಂದು ಗಂಡು ಮಗು ಜನಿಸಿದ್ದು, ಅಂಬಾನಿ ಮತ್ತು ಮೆಹ್ತಾ (ಶ್ಲೋಕಾ ತವರು ಮನೆ) ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ.

ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಮುಕೇಶ್​ ಅಂಬಾನಿ ತಮ್ಮ ಮೊಮ್ಮಗುವನ್ನು ಎತ್ತಿಕೊಂಡಿರುವ ಫೋಟೋ ಕೂಡ ಈಗಾಗಲೇ ವೈರಲ್ ಆಗಿದೆ. ಇದೀಗ ಪುಟ್ಟ ಪಾಪುವಿನ ಹೆಸರನ್ನೂ ಅಂಬಾನಿ ಕುಟುಂಬ ಒಂದು ವಿಶೇಷ ಕಾರ್ಡ್ ಮೂಲಕ ಬಹಿರಂಗ ಪಡಿಸಿದೆ.

ಶ್ರೀಮಂತ ಕುಟುಂಬದ ಕುಡಿಯ ಹೆಸರು ಪ್ರಥ್ವಿ ಆಕಾಶ್​ ಅಂಬಾನಿ. ಅಷ್ಟಕ್ಕೂ ಪ್ರಥ್ವಿ ಎಂಬ ಹೆಸರೇ ಯಾಕೆ? ನಮ್ಮ ಕುಟುಂಬದಲ್ಲಿ ಆಕಾಶ ಇದ್ದಾನೆ.. ಹಾಗೇ, ಪ್ರಥ್ವಿಯೂ (ಭೂಮಿ) ಇರಲಿ ಎಂಬ ಕಾರಣಕ್ಕೆ ಈ ಹೆಸರು ಇಟ್ಟಿದ್ದೇವೆ ಎಂದು ಅಂಬಾನಿ ಕುಟುಂಬ ತಿಳಿಸಿದೆ.

ಇನ್ನು ಅಂಬಾನಿ ಕುಟುಂಬದ ಕುಡಿಯ ಹೆಸರಿನ ವಿಶೇಷ ಕಾರ್ಡ್​ನಲ್ಲಿ ಅಂಬಾನಿ ಹಾಗೂ ಮೆಹ್ತಾ ಕುಟುಂಬಸ್ಥರ ಹೆಸರನ್ನೂ ಹಾಕಿದ್ದೂ ವಿಶೇಷ. ಆಕಾಶ್​ ಹಾಗೂ ಇಶಾ ವಿವಾಹ 2019ರ ಮಾರ್ಚ್​ 9ರಂದು ಅದ್ದೂರಿಯಾಗಿ ನೆರವೇರಿತ್ತು.

ದೀಪಾವಳಿ ಸಿಹಿ ಆರೋಗ್ಯಕ್ಕೆ ಹಾನಿಕರ, ಕ್ರಿಸ್ಮಸ್​ ಕೇಕ್ ಮಾತ್ರ ಒಳ್ಳೇದು! -ಮಾಧ್ಯಮದ ದ್ವಂದ್ವ ನೀತಿಗೆ ಕಾರ್ಣಿಕ್ ಕಿಡಿ

Follow Us
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?