AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮು-ಕಾಶ್ಮೀರದ ಹಲವು ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾದಳದಿಂದ ರೇಡ್​: ಪೊಲೀಸರಿಂದ ಮೂವರು ಉಗ್ರರ ಹತ್ಯೆ

ರೇಡ್​ ವೇಳೆ ಐಸಿಸ್​ ಉಗ್ರಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಐವರನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಅವರಲ್ಲಿ ಕೆಲವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ಪ್ರಾರಂಭಿಸಿದ್ದಾರೆ.

ಜಮ್ಮು-ಕಾಶ್ಮೀರದ ಹಲವು ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾದಳದಿಂದ ರೇಡ್​: ಪೊಲೀಸರಿಂದ ಮೂವರು ಉಗ್ರರ ಹತ್ಯೆ
ರೇಡ್​ ನಡೆಸುತ್ತಿರುವ ಎನ್​ಐಎ ಅಧಿಕಾರಿಗಳು
TV9 Web
| Edited By: |

Updated on: Jul 11, 2021 | 2:46 PM

Share

ಶ್ರೀನಗರ: ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ (NIA) ಜಮ್ಮು-ಕಾಶ್ಮೀರದ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ಶ್ರೀನಗರ, ಅನಂತ್​ನಾಗ್, ಬಾರಾಮುಲ್ಲಾ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ತನಿಖಾ ಸಂಸ್ಥೆ ರೇಡ್ ಮಾಡಿದ್ದಾಗಿ ವರದಿಯಾಗಿದೆ.

ಈ ರೇಡ್​ ವೇಳೆ ಐಸಿಸ್​ ಉಗ್ರಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಐವರನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಅವರಲ್ಲಿ ಕೆಲವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ಪ್ರಾರಂಭಿಸಿದ್ದಾರೆ. ಇಂದು ಜಮ್ಮು-ಕಾಶ್ಮೀರ ಆಡಳಿತ ಒಟ್ಟು 11 ಮಂದಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಅದರಲ್ಲಿ ಹಿಜ್ಬುಲ್​ ಮುಜಾಹಿದ್ದೀನ್​​ ಮುಖ್ಯಸ್ಥ ಮತ್ತು ಮೋಸ್ಟ್​ ವಾಂಟೆಡ್​ ಉಗ್ರ ಸೈಯದ್​ ಸಲಾಹುದ್ದೀನ್​ರ ಪುತ್ರನೂ ಸೇರಿದ್ದಾನೆ ಎನ್ನಲಾಗಿದೆ. ಈತ ಉಗ್ರಸಂಘಟನೆಗಳಿಗಾಗಿ ಕೆಲಸ ಮಾಡಿದ್ದಾನೆಂದು ಆರೋಪಿಸಲಾಗಿದೆ.

ಮೂವರು ಉಗ್ರರ ಹತ್ಯೆ ಇಂದು ಲಷ್ಕರ್​ ಇ ತೊಯ್ಬಾ(LeT) ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರ ಪೊಲೀಸರು ಅನಂತ್​ನಾಗ್​​ನಲ್ಲಿ ಹತ್ಯೆ ಮಾಡಿದ್ದಾರೆ. ಅನಂತ್​ನಾಗ್​ನ ಕವಾರಿಗಾಮ್​ ರಾಣಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹತ್ಯೆಯಾದ ಉಗ್ರರನ್ನು ಆರಿಫ್​ ಹಜಾಮ್​, ಬಸಿತ್​ ರಶೀದ್​ ಗನೈ ಮತ್ತು ಔಡ್ಸೂ ತೆಲ್ವಾನಿ ಅಕ್ಬಲ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಲಷ್ಕರ್​ ಇ ತೊಯ್ಬಾಕ್ಕೆ ಸೇರಿದವರೇ ಆಗಿದ್ದರು ಎಂದು ಪೊಲೀಸರು ಖಚಿತ ಪಡಿಸಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನಡೆದ ಹಲವು ದಾಳಿಗಳಲ್ಲಿ ಇವರು ಪಾಲ್ಗೊಂಡಿದ್ದರು. ರಕ್ಷಣಾ ಅಧಿಕಾರಿಗಳು, ನಾಗರಿಕರನ್ನು ಹತ್ಯೆ ಮಾಡಿದವರಾಗಿದ್ದಾರೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನೆಟ್ವರ್ಕ್ ಸಿಗದೇ ವಿದ್ಯಾರ್ಥಿಗಳ ಪರದಾಟ; ಸರ್ಕಾರದ ವಿರುದ್ಧ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಆಕ್ರೋಶ

Art With Heart : ಆನ್​ಲೈನ್​ ತರಗತಿಗಳಿಗೆಂದೇ ವೈಜ್ಞಾನಿಕ ರಂಗಪಠ್ಯ ರೂಪಿಸಿದ ‘ರಂಗರಥ‘

NIA conducts raids at multiple locations in Jammu And Kashmir

Follow Us
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ
ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ
ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ
ತೆಲಂಗಾಣದ ಈ ಭೀಕರ ಅಪಘಾತ ನೋಡಿದರೆ ಎದೆ ಝಲ್ ಎನ್ನದಿರದು!
ತೆಲಂಗಾಣದ ಈ ಭೀಕರ ಅಪಘಾತ ನೋಡಿದರೆ ಎದೆ ಝಲ್ ಎನ್ನದಿರದು!
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್
ರೈಲು ನಿಲ್ಲುವ ಮುನ್ನವೇ ಜಿಗಿದ ವ್ಯಕ್ತಿ, ಮುಂದೇನಾಯಿತು ನೋಡಿ
ರೈಲು ನಿಲ್ಲುವ ಮುನ್ನವೇ ಜಿಗಿದ ವ್ಯಕ್ತಿ, ಮುಂದೇನಾಯಿತು ನೋಡಿ
ಹಿಮಾಚಲ ಪ್ರದೇಶದ ಚಿಂತ್‌ಪುರಿ ಬಳಿ ಕಣಿವೆಗೆ ಉರುಳಿದ ಕಾರು; ಇಬ್ಬರು ಸಾವು
ಹಿಮಾಚಲ ಪ್ರದೇಶದ ಚಿಂತ್‌ಪುರಿ ಬಳಿ ಕಣಿವೆಗೆ ಉರುಳಿದ ಕಾರು; ಇಬ್ಬರು ಸಾವು