AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ; ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ ಮನೆ ಮೇಲೆ ಎನ್​ಐಎ ರೇಡ್​

ಸಂತೋಷ್​ ಸೇಲಾರ್​ ಮತ್ತು ಪ್ರದೀಪ್​ ಶರ್ಮಾ ಒಟ್ಟಿಗೇ ಇರುವ ಹಲವು ಫೋಟೋಗಳು ಎನ್​ಐಎಗೆ ಸಿಕ್ಕಿವೆ. ಆದರೆ ತಮ್ಮ ವಿರುದ್ಧದ ಆರೋಪವನ್ನು ಶರ್ಮಾ ತಳ್ಳಿಹಾಕಿದ್ದಾರೆ.

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ; ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ ಮನೆ ಮೇಲೆ ಎನ್​ಐಎ ರೇಡ್​
ಪ್ರದೀಪ್​ ಶರ್ಮಾ
Follow us
TV9 Web
| Updated By: Lakshmi Hegde

Updated on: Jun 17, 2021 | 1:27 PM

ಮುಂಬೈ: ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ, ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮುಂಬೈನ ಮಾಜಿ ಪೊಲೀಸ್​, ಎನ್​​ಕೌಂಟರ್ ಸ್ಪೆಶಲಿಸ್ಟ್​ ಪ್ರದೀಪ್​ ಶರ್ಮಾ ಮನೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ರೇಡ್​ ಮಾಡಿದೆ. ಪ್ರದೀಪ್​ ಶರ್ಮಾ ನಿವಾಸ ಮುಂಬೈನ ಅಂದೇರಿಯಲ್ಲಿ ಇದ್ದು, ಇಂದು ಮುಂಜಾನೆ 5ಗಂಟೆ ಹೊತ್ತಿಗೆ ಸಿಆರ್​ಪಿಎಫ್​ (ಕೇಂದ್ರೀಯ ಮೀಸಲು ಪಡೆ) ಮತ್ತು ಎನ್​ಐಎ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದ್ದಾರೆ. ಸುಮಾರು ಆರು ತಾಸುಗಳ ಕಾಲ ಅವರ ಮನೆಯಲ್ಲಿ ದಾಖಲೆಗಳ ಹುಡುಕಾಟ ನಡೆದಿದೆ.

ಪ್ರದೀಪ್​ ಶರ್ಮಾರನ್ನು ಎನ್​ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಮುಕೇಶ್​ ಅಂಬಾನಿ ಮನೆಯ ಬಳಿ ಕಾರಿನಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟ ತನಿಖೆ ಮುಂದುವರಿದಿದ್ದು, ಜೂ.11ರಂದು ಸಂತೋಷ್​ ಸೇಲಾರ್​ ಮತ್ತು ಆನಂದ್​ ಜಾಧವ್​​ ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಸಂತೋಷ್​ ಸೇಲಾರ್​ ಜತೆ ಪ್ರದೀಪ್​ ಶರ್ಮಾಗೆ ಸಂಪರ್ಕವಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಇವರ ಮನೆಯ ಮೇಲೆ ಕೂಡ ತನಿಖಾ ದಳ ದಾಳಿ ನಡೆಸಿದೆ. ಸದ್ಯ ಸಂತೋಷ್​ ಸೇಲಾರ್​ ಮತ್ತು ಆನಂದ್ ಜಾಧವ್​ ಇಬ್ಬರೂ ಜೂ.21ರವರೆಗೆ ಎನ್​ಐಎ ಕಸ್ಟಡಿಯಲ್ಲಿಯೇ ಇರಲಿದ್ದಾರೆ.

ಸಂತೋಷ್​ ಸೇಲಾರ್​ ಮತ್ತು ಪ್ರದೀಪ್​ ಶರ್ಮಾ ಒಟ್ಟಿಗೇ ಇರುವ ಹಲವು ಫೋಟೋಗಳು ಎನ್​ಐಎಗೆ ಸಿಕ್ಕಿವೆ. ಆದರೆ ತಮ್ಮ ವಿರುದ್ಧದ ಆರೋಪವನ್ನು ಶರ್ಮಾ ತಳ್ಳಿಹಾಕಿದ್ದಾರೆ. ಸಂತೋಷ್ ಸೇಲಾರ್ ಪೊಲೀಸರಿಗೆ ಮಾಹಿತಿ ನೀಡುವವನಾಗಿದ್ದ. ನನ್ನ ಫೋಟೋ ಕೇವಲ ಸಂತೋಷ್​ ಜತೆ ಮಾತ್ರವಲ್ಲ..ಹೀಗೆ ಸಾವಿರಾರು ಮಂದಿಯೊಂದಿಗೆ ಸಿಗುತ್ತದೆ. ಸಂತೋಷ್​ ಜತೆ ನಾನಿದ್ದೇನೆ ಎಂದ ಮಾತ್ರಕ್ಕೆ ಪ್ರಕರಣದಲ್ಲಿ ನನ್ನ ಕೈವಾಡವಿದೆ ಎಂದು ಅರ್ಥವಲ್ಲ ಎಂದೂ ಹೇಳಿದ್ದಾರೆ.

ಮುಕೇಶ್​ ಅಂಬಾನಿ ಮನೆ ಸ್ಫೋಟಕಗಳು ಪತ್ತೆಯಾದ ಕೇಸ್​​ನಲ್ಲಿ ಅಮಾನತುಗೊಂಡು ಸದ್ಯ ಎನ್​ಐಎ ಕಸ್ಟಡಿಯಲ್ಲಿರುವ ಸಚಿನ್​ ವಾಝೆಗೆ ಈ ಪ್ರದೀಪ್ ಶರ್ಮಾ ಮಾರ್ಗದರ್ಶಕರಾಗಿದ್ದರು. ಥಾಣೆಯ ಖ್ಯಾತ ಉದ್ಯಮಿ ಮನ್​ಸುಖ್ ಹಿರಾನ್​ ಹತ್ಯೆ ಪ್ರಕರಣದಲ್ಲೂ ಶರ್ಮಾ ಕೆಲವು ಸಹಾಯ ಮಾಡಿದ್ದಾರೆ ಎಂಬುದಕ್ಕೆ ಕೆಲವು ಸಾಕ್ಷಿಗಳು ಸಿಕ್ಕಿವೆ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ. ಇನ್ನು ಹಿರಾನ್​ ಹತ್ಯೆ ಪ್ರಕರಣ ಮತ್ತು ಮುಕೇಶ್ ಅಂಬಾನಿ ಕೇಸ್​ ಎರಡರಲ್ಲೂ ವಾಝೆಯ ಮೇಲೆ ತನಿಖಾದಳ ಶಂಕೆ ವ್ಯಕ್ತಪಡಿಸಿದ್ದು ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: New Mumbai Police Commissioner: ಮುಂಬೈ ಪೊಲೀಸ್​ ಆಯುಕ್ತ ಎತ್ತಂಗಡಿ.. ಮುಕೇಶ್​ ಅಂಬಾನಿಯ ಮುಟ್ಟಲು ಹೋಗಿ ಕೈಸುಟ್ಟುಕೊಂಡ ಮುಂಬೈ ಪೊಲೀಸ್!

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ