AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ; ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ ಮನೆ ಮೇಲೆ ಎನ್​ಐಎ ರೇಡ್​

ಸಂತೋಷ್​ ಸೇಲಾರ್​ ಮತ್ತು ಪ್ರದೀಪ್​ ಶರ್ಮಾ ಒಟ್ಟಿಗೇ ಇರುವ ಹಲವು ಫೋಟೋಗಳು ಎನ್​ಐಎಗೆ ಸಿಕ್ಕಿವೆ. ಆದರೆ ತಮ್ಮ ವಿರುದ್ಧದ ಆರೋಪವನ್ನು ಶರ್ಮಾ ತಳ್ಳಿಹಾಕಿದ್ದಾರೆ.

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ; ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ ಮನೆ ಮೇಲೆ ಎನ್​ಐಎ ರೇಡ್​
ಪ್ರದೀಪ್​ ಶರ್ಮಾ
TV9 Web
| Edited By: |

Updated on: Jun 17, 2021 | 1:27 PM

Share

ಮುಂಬೈ: ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ, ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮುಂಬೈನ ಮಾಜಿ ಪೊಲೀಸ್​, ಎನ್​​ಕೌಂಟರ್ ಸ್ಪೆಶಲಿಸ್ಟ್​ ಪ್ರದೀಪ್​ ಶರ್ಮಾ ಮನೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ರೇಡ್​ ಮಾಡಿದೆ. ಪ್ರದೀಪ್​ ಶರ್ಮಾ ನಿವಾಸ ಮುಂಬೈನ ಅಂದೇರಿಯಲ್ಲಿ ಇದ್ದು, ಇಂದು ಮುಂಜಾನೆ 5ಗಂಟೆ ಹೊತ್ತಿಗೆ ಸಿಆರ್​ಪಿಎಫ್​ (ಕೇಂದ್ರೀಯ ಮೀಸಲು ಪಡೆ) ಮತ್ತು ಎನ್​ಐಎ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದ್ದಾರೆ. ಸುಮಾರು ಆರು ತಾಸುಗಳ ಕಾಲ ಅವರ ಮನೆಯಲ್ಲಿ ದಾಖಲೆಗಳ ಹುಡುಕಾಟ ನಡೆದಿದೆ.

ಪ್ರದೀಪ್​ ಶರ್ಮಾರನ್ನು ಎನ್​ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಮುಕೇಶ್​ ಅಂಬಾನಿ ಮನೆಯ ಬಳಿ ಕಾರಿನಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟ ತನಿಖೆ ಮುಂದುವರಿದಿದ್ದು, ಜೂ.11ರಂದು ಸಂತೋಷ್​ ಸೇಲಾರ್​ ಮತ್ತು ಆನಂದ್​ ಜಾಧವ್​​ ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಸಂತೋಷ್​ ಸೇಲಾರ್​ ಜತೆ ಪ್ರದೀಪ್​ ಶರ್ಮಾಗೆ ಸಂಪರ್ಕವಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಇವರ ಮನೆಯ ಮೇಲೆ ಕೂಡ ತನಿಖಾ ದಳ ದಾಳಿ ನಡೆಸಿದೆ. ಸದ್ಯ ಸಂತೋಷ್​ ಸೇಲಾರ್​ ಮತ್ತು ಆನಂದ್ ಜಾಧವ್​ ಇಬ್ಬರೂ ಜೂ.21ರವರೆಗೆ ಎನ್​ಐಎ ಕಸ್ಟಡಿಯಲ್ಲಿಯೇ ಇರಲಿದ್ದಾರೆ.

ಸಂತೋಷ್​ ಸೇಲಾರ್​ ಮತ್ತು ಪ್ರದೀಪ್​ ಶರ್ಮಾ ಒಟ್ಟಿಗೇ ಇರುವ ಹಲವು ಫೋಟೋಗಳು ಎನ್​ಐಎಗೆ ಸಿಕ್ಕಿವೆ. ಆದರೆ ತಮ್ಮ ವಿರುದ್ಧದ ಆರೋಪವನ್ನು ಶರ್ಮಾ ತಳ್ಳಿಹಾಕಿದ್ದಾರೆ. ಸಂತೋಷ್ ಸೇಲಾರ್ ಪೊಲೀಸರಿಗೆ ಮಾಹಿತಿ ನೀಡುವವನಾಗಿದ್ದ. ನನ್ನ ಫೋಟೋ ಕೇವಲ ಸಂತೋಷ್​ ಜತೆ ಮಾತ್ರವಲ್ಲ..ಹೀಗೆ ಸಾವಿರಾರು ಮಂದಿಯೊಂದಿಗೆ ಸಿಗುತ್ತದೆ. ಸಂತೋಷ್​ ಜತೆ ನಾನಿದ್ದೇನೆ ಎಂದ ಮಾತ್ರಕ್ಕೆ ಪ್ರಕರಣದಲ್ಲಿ ನನ್ನ ಕೈವಾಡವಿದೆ ಎಂದು ಅರ್ಥವಲ್ಲ ಎಂದೂ ಹೇಳಿದ್ದಾರೆ.

ಮುಕೇಶ್​ ಅಂಬಾನಿ ಮನೆ ಸ್ಫೋಟಕಗಳು ಪತ್ತೆಯಾದ ಕೇಸ್​​ನಲ್ಲಿ ಅಮಾನತುಗೊಂಡು ಸದ್ಯ ಎನ್​ಐಎ ಕಸ್ಟಡಿಯಲ್ಲಿರುವ ಸಚಿನ್​ ವಾಝೆಗೆ ಈ ಪ್ರದೀಪ್ ಶರ್ಮಾ ಮಾರ್ಗದರ್ಶಕರಾಗಿದ್ದರು. ಥಾಣೆಯ ಖ್ಯಾತ ಉದ್ಯಮಿ ಮನ್​ಸುಖ್ ಹಿರಾನ್​ ಹತ್ಯೆ ಪ್ರಕರಣದಲ್ಲೂ ಶರ್ಮಾ ಕೆಲವು ಸಹಾಯ ಮಾಡಿದ್ದಾರೆ ಎಂಬುದಕ್ಕೆ ಕೆಲವು ಸಾಕ್ಷಿಗಳು ಸಿಕ್ಕಿವೆ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ. ಇನ್ನು ಹಿರಾನ್​ ಹತ್ಯೆ ಪ್ರಕರಣ ಮತ್ತು ಮುಕೇಶ್ ಅಂಬಾನಿ ಕೇಸ್​ ಎರಡರಲ್ಲೂ ವಾಝೆಯ ಮೇಲೆ ತನಿಖಾದಳ ಶಂಕೆ ವ್ಯಕ್ತಪಡಿಸಿದ್ದು ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: New Mumbai Police Commissioner: ಮುಂಬೈ ಪೊಲೀಸ್​ ಆಯುಕ್ತ ಎತ್ತಂಗಡಿ.. ಮುಕೇಶ್​ ಅಂಬಾನಿಯ ಮುಟ್ಟಲು ಹೋಗಿ ಕೈಸುಟ್ಟುಕೊಂಡ ಮುಂಬೈ ಪೊಲೀಸ್!

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ