ನಿತಾರಿ ಸರಣಿ ಕೊಲೆ ಪ್ರಕರಣ: ಮೋನಿಂದರ್ ಸಿಂಗ್ ಖುಲಾಸೆ, ಇಂದು ಜೈಲಿನಿಂದ ಬಿಡುಗಡೆ

2006ರಲ್ಲಿ ನಡೆದ ನಿತಾರಿ ಸರಣಿ ಹತ್ಯೆ ಪ್ರಕರಣದ ಆರೋಪಿ ಮೋನಿಂದರ್ ಸಿಂಗ್ ಪಂಧೇರ್ ಖಲುಲಾಸೆಗೊಂಡಿದ್ದು, ಶುಕ್ರವಾರ ಗ್ರೇಟರ್ ನೋಯ್ಡಾದ ಲುಕ್ಸರ್ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಈ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನಿಂದ ಪಂಧೇರ್ ಅವರನ್ನು ಖುಲಾಸೆಗೊಳಿಸಿದ ಮೂರು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಪಂಧೇರ್ ಅವರ ಮನೆಕೆಲಸಗಾರ, ಸುರೇಂದ್ರ ಕೋಲಿ ಅವರನ್ನು ನ್ಯಾಯಾಲಯವು ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

ನಿತಾರಿ ಸರಣಿ ಕೊಲೆ ಪ್ರಕರಣ: ಮೋನಿಂದರ್ ಸಿಂಗ್ ಖುಲಾಸೆ, ಇಂದು ಜೈಲಿನಿಂದ ಬಿಡುಗಡೆ
ನಿತಾರಿ ಹತ್ಯೆ
Image Credit source: India Today

Updated on: Oct 20, 2023 | 2:40 PM

2006ರಲ್ಲಿ ನಡೆದ ನಿತಾರಿ ಸರಣಿ ಹತ್ಯೆ ಪ್ರಕರಣದ ಆರೋಪಿ ಮೋನಿಂದರ್ ಸಿಂಗ್ ಪಂಧೇರ್ ಖಲುಲಾಸೆಗೊಂಡಿದ್ದು, ಶುಕ್ರವಾರ ಗ್ರೇಟರ್ ನೋಯ್ಡಾದ ಲುಕ್ಸರ್ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಈ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನಿಂದ ಪಂಧೇರ್ ಅವರನ್ನು ಖುಲಾಸೆಗೊಳಿಸಿದ ಮೂರು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಪಂಧೇರ್ ಅವರ ಮನೆಕೆಲಸಗಾರ, ಸುರೇಂದ್ರ ಕೋಲಿ ಅವರನ್ನು ನ್ಯಾಯಾಲಯವು ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

14 ವರ್ಷದ ಬಾಲಕಿಯನ್ನು ಕೊಂದ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನೊಯ್ಡಾದ ನಿತಾರಿಯಲ್ಲಿ ನಡೆದ ಹತ್ಯೆಗಳಲ್ಲಿ ಇಬ್ಬರ ಮೇಲೆ ಅತ್ಯಾಚಾರ ಮತ್ತು ಕೊಲೆಯ ಆರೋಪ ಹೊರಿಸಲಾಯಿತು ಮತ್ತು ಮರಣದಂಡನೆ ವಿಧಿಸಲಾಯಿತು.

ಈ ಹಿಂದೆ ಮರಣದಂಡನೆಗೆ ಗುರಿಯಾಗಿದ್ದ ನಿತಾರಿ ಹತ್ಯೆಯ ಪ್ರಮುಖ ಆರೋಪಿ ಸುರೇಂದ್ರ ಕೊಲಿ(Surendra Koli)ಯನ್ನು ಅಲಹಾಬಾದ್ ಹೈಕೋರ್ಟ್​ ಸೋಮವಾರ ಖುಲಾಸೆಗೊಳಿಸಿದೆ. 2012ರಲ್ಲಿ ನಿತಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೊಲಿಗೆ ಸಿಬಿಐನ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.

ಮತ್ತಷ್ಟು ಓದಿ: ನಿತಾರಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಸುರೇಂದ್ರ ಕೊಲಿ ಖುಲಾಸೆ

ಅಲಹಾಬಾದ್ ಹೈಕೋರ್ಟ್ 12 ಪ್ರಕರಣಗಳಲ್ಲಿ ಸುರೇಂದ್ರ ಕೋಲಿ ಮತ್ತು ಎರಡು ಪ್ರಕರಣಗಳಲ್ಲಿ ಪಂಧೇರ್ ಅವರನ್ನು ಖುಲಾಸೆಗೊಳಿಸಿದೆ. ಪಂಧೇರ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದರೂ ಕೋಲಿ ಇನ್ನೂ ಕಂಬಿಗಳ ಹಿಂದೆಯೇ ಇರಲಿದ್ದಾನೆ.

ಅಲಹಾಬಾದ್ ಹೈಕೋರ್ಟ್ ಸೋಮವಾರ ಇಬ್ಬರೂ ನಿರಪರಾಧಿಗಳೆಂದು ಘೋಷಿಸಿತು ಮತ್ತು ಸಿಬಿಐ ಕೋರ್ಟ್ ಗಾಜಿಯಾಬಾದ್ ನೀಡಿದ್ದ ಮರಣದಂಡನೆಯನ್ನು ರದ್ದುಗೊಳಿಸಿತು. 2010 ರಿಂದ 2023 ರವರೆಗೆ ನಡೆದ 134 ವಿಚಾರಣೆಗಳ ನಂತರ ಹೈಕೋರ್ಟ್ ಈ ನಿರ್ಧಾರವನ್ನು ನೀಡಿದೆ.

ಘಟನೆ ಏನಾಗಿತ್ತು:

2006: ನೋಯ್ಡಾದ ಮೊನಿಂದರ್ ಸಿಂಗ್ ಪಂಧೇರ್ ಅವರ ಮನೆಯ ಹಿಂದಿನ ಚರಂಡಿಯಲ್ಲಿ 19 ಮಕ್ಕಳು ಮತ್ತು ಮಹಿಳೆಯರ ಅಸ್ಥಿಪಂಜರಗಳು ಪತ್ತೆಯಾಗಿತ್ತು.

ಫೆಬ್ರವರಿ 8, 2007: ಪಂಧೇರ್ ಮತ್ತು ಕೋಲಿಯನ್ನು 14 ದಿನಗಳ ಸಿಬಿಐ ಕಸ್ಟಡಿಗೆ ಕಳುಹಿಸಲಾಯಿತು. ಮೇ 2007: ಸಿಬಿಐ ಚಾರ್ಜ್ ಶೀಟ್‌ನಲ್ಲಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಪಂಧೇರ್‌ನನ್ನು ಖುಲಾಸೆಗೊಳಿಸಿತು. ಎರಡು ತಿಂಗಳ ನಂತರ, ನ್ಯಾಯಾಲಯದ ಖಂಡನೆಯ ಮೇಲೆ, ಅವರನ್ನು ಸಹ-ಆರೋಪಿಯನ್ನಾಗಿ ಮಾಡಲಾಯಿತು.

ಫೆಬ್ರವರಿ 13, 2009: ವಿಶೇಷ ನ್ಯಾಯಾಲಯವು 15 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಗೆ ಪಂಧೇರ್ ಮತ್ತು ಕೋಲಿ ತಪ್ಪಿತಸ್ಥರೆಂದು ಹೇಳಿ ಮರಣದಂಡನೆ ವಿಧಿಸಿತು. ಸೆಪ್ಟೆಂಬರ್ 3, 2014: ಕೋಲಿ ವಿರುದ್ಧ ಡೆತ್ ವಾರಂಟ್

ಸೆಪ್ಟೆಂಬರ್ 4, 2014: ಗಲ್ಲು ಶಿಕ್ಷೆಗಾಗಿ ಕೋಲಿಯನ್ನು ದಾಸ್ನಾ ಜೈಲಿನಿಂದ ಮೀರತ್ ಜೈಲಿಗೆ ವರ್ಗಾಯಿಸಲಾಯಿತು.

12 ಸೆಪ್ಟೆಂಬರ್ 2014: ಮೊದಲು ಸುರೇಂದ್ರ ಕೋಲಿಯನ್ನು ಗಲ್ಲಿಗೇರಿಸಬೇಕಿತ್ತು. ಡೆತ್ ಪೆನಾಲ್ಟಿ ಲಿಟಿಗೇಷನ್ ಗ್ರೂಪ್ಸ್, ವಕೀಲರ ಗುಂಪು ಕೋಲಿಯ ಮರಣದಂಡನೆಯ ಬಗ್ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತು. ಸುಪ್ರೀಂ ಕೋರ್ಟ್ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್‌ಗೆ ಕಳುಹಿಸಿದೆ.

12 ಸೆಪ್ಟೆಂಬರ್ 2014: ಸುರೇಂದ್ರ ಕೋಲಿಯ ಮರಣದಂಡನೆಗೆ ಸುಪ್ರೀಂ ಕೋರ್ಟ್ 29 ಅಕ್ಟೋಬರ್ 2014 ರವರೆಗೆ ತಡೆ ನೀಡಿದೆ.

28 ಅಕ್ಟೋಬರ್ 2014: ಸುರೇಂದ್ರ ಕೋಲಿ ಗಲ್ಲು ಶಿಕ್ಷೆಯ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

ವರ್ಷ 2014: ರಾಷ್ಟ್ರಪತಿಗಳು ಕೂಡ ಕ್ಷಮಾದಾನ ಅರ್ಜಿಯನ್ನು ರದ್ದುಗೊಳಿಸಿದರು.

ಜನವರಿ 28, 2015: ಕೊಲೆ ಪ್ರಕರಣದಲ್ಲಿ ಕೋಲಿಯ ಮರಣದಂಡನೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us