Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ರೋಗಿಯ ಮೊಬೈಲ್ ಕದ್ದ ನರ್ಸ್​; ಬಂಧಿಸಿ ವಿಚಾರಿಸಿದಾಗ ಹೊರಬಿತ್ತು ಮತ್ತೊಂದು ಸತ್ಯ

ಮೊಬೈಲ್​​ನ್ನು ತಾನೇ ಕದ್ದು, ಅದನ್ನು ಸ್ನೇಹಿತೆಗೆ ಕೊಟ್ಟಿದ್ದೇನೆ ಎಂದಿದ್ದಳು. ಪೊಲೀಸರು ತನಿಖೆ ನಡೆಸಿದ ಬಳಿಕ ಫೋನ್​​ನ್ನು ಸಲ್ಮಾನ್​ ಅಹ್ಮದ್​ ಎಂಬಾತ ಬಳಕೆ ಮಾಡುತ್ತಿರುವುದು ತಿಳಿದು ಬಂತು.

ಮೃತ ರೋಗಿಯ ಮೊಬೈಲ್ ಕದ್ದ ನರ್ಸ್​; ಬಂಧಿಸಿ ವಿಚಾರಿಸಿದಾಗ ಹೊರಬಿತ್ತು ಮತ್ತೊಂದು ಸತ್ಯ
ಹುಡುಗಿ ಮೊಬೈಲ್​ ವೈರಲ್​ ಮಾಡಿದ ವಿಚಾರ: ತಡರಾತ್ರಿ ಪೊಲೀಸರ ಭಯದಿಂದ ಮನೆಯಲ್ಲಿ ಯುವಕ ನೇಣಿಗೆ ಶರಣು
Follow us
Lakshmi Hegde
|

Updated on: May 26, 2021 | 11:46 PM

ಡೆಹ್ರಾಡೂನ್​: ಕೊವಿಡ್​ 19 ಸೋಂಕಿನಿಂದ ಮೃತಪಟ್ಟ ರೋಗಿಯ ಮೊಬೈಲ್​​ನ್ನು ಆತ ದಾಖಲಾಗಿದ್ದ ಆಸ್ಪತ್ರೆಯ ನರ್ಸ್ ಕದ್ದು, ಅರೆಸ್ಟ್​ ಆದ ಘಟನೆ ಉತ್ತರಾಖಂಡ್​​ನ ಡೆಹ್ರಾಡೂನ್​ನಲ್ಲಿ ನಡೆದಿದೆ. ಮೇ 18ರಂದು ಅಮನ್​ದೀಪ್​ ಗಿಲ್​​ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಮೃತಪಟ್ಟಿದ್ದಾರೆ. ಆದರೆ ಅವರ ಮೊಬೈಲ್ ಕಳವಾಗಿದೆ ಎಂದು ಹೇಳಿದ್ದರು. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆಸ್ಪತ್ರೆಗೆ ಭೇಟಿಕೊಟ್ಟ ಸಂದರ್ಭದಲ್ಲಿ ನರ್ಸ್​ ಒಪ್ಪಿಕೊಂಡಿದ್ದಳು.

ಮೊಬೈಲ್​​ನ್ನು ತಾನೇ ಕದ್ದು, ಅದನ್ನು ಸ್ನೇಹಿತೆಗೆ ಕೊಟ್ಟಿದ್ದೇನೆ ಎಂದಿದ್ದಳು. ಪೊಲೀಸರು ತನಿಖೆ ನಡೆಸಿದ ಬಳಿಕ ಫೋನ್​​ನ್ನು ಸಲ್ಮಾನ್​ ಅಹ್ಮದ್​ ಎಂಬಾತ ಬಳಕೆ ಮಾಡುತ್ತಿರುವುದು ತಿಳಿದು ಬಂತು. ಆತನನ್ನು ಹಿಡಿದು ವಿಚಾರಿಸಿದಾಗ ನನಗೆ ಈ ಮೊಬೈಲ್​​ನ್ನು ರುಕೈಯಾ ಎಂಬುವಳಿಂದ ತೆಗೆದುಕೊಂಡಿದ್ದಾಗಿ ಹೇಳಿದ್ದ. ಅಲ್ಲಿಗೆ ನರ್ಸ್​ ರುಕೈಯಾ ಮೊಬೈಲ್​ ಕದ್ದು ತನ್ನ ಗೆಳೆಯ ಸಲ್ಮಾನ್​ಗೆ ಕೊಟ್ಟಿದ್ದು ಸಾಬೀತಾಗಿತ್ತು.

ಆದರೆ ರುಕೈಯಾ ವಿಚಾರಣೆಯ ನಂತರ ಮತ್ತೊಂದು ಸತ್ಯವೂ ಹೊರಬಂತು. ಬರೀ ಮೃತ ರೋಗಿಗಳ ಮೊಬೈಲ್​ ಅಷ್ಟೇ ಅಲ್ಲ, ಈ ಖಾಸಗಿ ಆಸ್ಪತ್ರೆಯಿಂದ ರೆಮ್​ಡಿಸಿವಿರ್​ ಸೇರಿ ಹಲವು ಔಷಧಿಗಳನ್ನೂ ಕದ್ದು ಸಾಗಿಸಿದ್ದೇನೆ. ಆದರೂ ಯಾರೂ ಏನೂ ಹೇಳಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ. ಇನ್ನು ಈ ಆಸ್ಪತ್ರೆಯಿಂದ ನಮಗೆ ಯಾವುದೇ ದೂರು ಬರಲಿಲ್ಲ ಎಂದು ರಾಜ್​ಪುರ್ ಠಾಣೆಯ ಪೊಲೀಸ್ ಅಧಿಕಾರಿ ರಾಕೇಶ್​ ಶಾ ಕೂಡ ತಿಳಿಸಿದ್ದಾರೆ. ಸದ್ಯಕ್ಕೆ ಈ ನರ್ಸ್​​ನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಇದನ್ನೂ ಓದಿ: ಸ್ಟಿರಾಯ್ಡ್​​​ ನೀಡುತ್ತಿರುವುದರಿಂದ ಬ್ಲ್ಯಾಕ್​​ ಫಂಗಸ್ ಹೆಚ್ಚಳ: ಆರೋಗ್ಯ ಸಚಿವ ಡಾ. ಸುಧಾಕರ್

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ