AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮ್ಲಜನಕ ಸಿಗದೆ ಮೃತಪಟ್ಟ ತಾಯಿಯ ನೆನಪಿಗಾಗಿ ಆಟೋದಲ್ಲಿ ಆಕ್ಸಿಜನ್ ಪೂರೈಸುತ್ತಿರುವ ಯುವತಿ..; ಚೆನ್ನೈನಲ್ಲಿ ಫೇಮಸ್​ ಆಯ್ತು ‘ಆಕ್ಸಿಜನ್ ಆಟೋ’

ಚೆನ್ನೈನಲ್ಲಿ ಸೀತಾದೇವಿ ಎಂಬುವರ ತಾಯಿಯೂ ಸಹ ಕೊವಿಡ್​ 19ನಿಂದ ಬಳಲಿ, ಆಕ್ಸಿಜನ್​ ಸಿಗದೆ ಮೇ 1ರಂದು ಮೃತಪಟ್ಟಿದ್ದಾರೆ. ಇವರ ಹೆಸರು ವಿಜಯಾ, ಏಪ್ರಿಲ್​ 30ರಂದು ಸಂಜೆ 8ಗಂಟೆ ಹೊತ್ತಿಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಆಮ್ಲಜನಕ ಸಿಗದೆ ಮೃತಪಟ್ಟ ತಾಯಿಯ ನೆನಪಿಗಾಗಿ ಆಟೋದಲ್ಲಿ ಆಕ್ಸಿಜನ್ ಪೂರೈಸುತ್ತಿರುವ ಯುವತಿ..; ಚೆನ್ನೈನಲ್ಲಿ ಫೇಮಸ್​ ಆಯ್ತು ‘ಆಕ್ಸಿಜನ್ ಆಟೋ’
ಆಕ್ಸಿಜನ್​ ಆಟೋ ಶುರು ಮಾಡಿರುವ ಯುವತಿ
Lakshmi Hegde
|

Updated on: May 26, 2021 | 10:35 PM

Share

ಕೊವಿಡ್​ 19 ಎರಡನೇ ಅಲೆ ಸಿಕ್ಕಾಪಟೆ ಜಾಸ್ತಿಯಾಗುತ್ತಿದೆ. ಕೊರೊನಾ ಸೋಂಕು ಉಲ್ಬಣಗೊಂಡ ಬೆನ್ನಲ್ಲೇ ದೇಶದಲ್ಲಿ ಆಕ್ಸಿಜನ್ ಅಭಾವ ತೀವ್ರವಾಗಿ ಕಾಡುತ್ತಿದೆ. ಅನೇಕ ರೋಗಿಗಳು ಸಕಾಲಕ್ಕೆ ಆಕ್ಸಿಜನ್ ಸಿಗದೆ ಮೃತಪಟ್ಟಿದ್ದಾರೆ. ಈ ಪರಿಸ್ಥಿತಿ ತಮಿಳುನಾಡಿನಲ್ಲೂ ಹೊರತಲ್ಲ.

ಹಾಗೇ, ಚೆನ್ನೈನಲ್ಲಿ ಸೀತಾದೇವಿ ಎಂಬುವರ ತಾಯಿಯೂ ಸಹ ಕೊವಿಡ್​ 19ನಿಂದ ಬಳಲಿ, ಆಕ್ಸಿಜನ್​ ಸಿಗದೆ ಮೇ 1ರಂದು ಮೃತಪಟ್ಟಿದ್ದಾರೆ. ಇವರ ಹೆಸರು ವಿಜಯಾ, ಏಪ್ರಿಲ್​ 30ರಂದು ಸಂಜೆ 8ಗಂಟೆ ಹೊತ್ತಿಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇತ್ತ ವಿಜಯಾ ಅವರ ಆಕ್ಸಿಜನ್​ ಮಟ್ಟ ಕುಸಿಯುತ್ತಿದ್ದರೂ, ಆಸ್ಪತ್ರೆಯಲ್ಲಿ ಬೆಡ್​ ಸಿಗಲಿಲ್ಲ. ಸುಮಾರು 1 ತಾಸು ಸೀತಾ ದೇವಿ ತನ್ನ ತಾಯಿಯನ್ನು ದಾಖಲಿಸಲೆಂದು ಕಾದಿದ್ದಾರೆ. ನಾರ್ಮಲ್ ಬೆಡ್​ ಸಿಕ್ಕಿತಾದರೂ ಆಕ್ಸಿಜನ್​ ಬೆಡ್​ ಸಿಗಲೇ ಇಲ್ಲ. 12 ತಾಸು ಕಾದರೂ ಆಮ್ಲಜನಕ ಸಿಗಲಿಲ್ಲ. ಇದರ ಪರಿಣಾಮ ವಿಜಯಾ ಮೃತಪಟ್ಟರು.

ತನ್ನ ತಾಯಿ ಆಕ್ಸಿಜನ್​ ಸಿಗದೆ ಮೃತಪಟ್ಟಿದ್ದಾರೆ. ಅದೇ ಪರಿಸ್ಥಿತಿ ಇನ್ನೊಬ್ಬರಿಗೆ ಉಂಟಾಗಬಾರದು. ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಸೀತಾ ದೇವಿ, ಒಂದು ಎನ್​ಜಿಒ ಸ್ಥಾಪಿಸಿದ್ದಾರೆ. ಅದರ ಮೂಲಕ ಆಟೋದಲ್ಲಿ ಆಕ್ಸಿಜನ್ ಸೇವೆ ನೀಡುತ್ತಿದ್ದಾರೆ. ಇವರ ಆಕ್ಸಿಜನ್ ಆಟೋ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆ ಎದುರಲ್ಲೇ ಪಾರ್ಕ್ ಆಗಿರುತ್ತದೆ. ಮೇ 5ರಿಂದಲೇ ಇವರು ಆಮ್ಲಜನಕ ಸೇವೆ ಪ್ರಾರಂಭವಾಗಿದ್ದು, ಸೀತಾ ದೇವಿಯವರಿಗೆ ಶರತ್​ ಕುಮಾತ್​ ಮತ್ತು ಮೋಹನ್​ರಾಜ್​ ಎಂಬುವರೂ ಸಹಾಯ ಮಾಡುತ್ತಿದ್ದಾರೆ. ಪ್ರತಿದಿನವೂ ತನ್ನ ಆಟೋದಿಂದ ಕನಿಷ್ಠ 20 ಜನರು ಆಮ್ಲಜನಕ ಸೇವೆ ಪಡೆಯುತ್ತಿದ್ದಾರೆ. ಇದರಲ್ಲಿ ನನಗೆ ಸಂತೋಷ ಇದೆ ಎನ್ನುತ್ತಾರೆ ಸೀತಾ ದೇವಿ. ಇವರ ಸೇವೆಯನ್ನು ಗುರುತಿಸಿ ಗ್ರೇಟರ್​ ಚೆನ್ನೈ ಕಾರ್ಪೋರೇಶನ್​ ಮೇ 25ರಂದು ಸೀತಾ ದೇವಿ ಸೇರಿ ಒಟ್ಟು 250 ಜನರಿಗೆ ಕೊವಿಡ್​ ಬ್ರಿಗೇಡ್​ ಬ್ಯಾಂಡ್ ನೀಡಿದೆ. ಲಾಕ್​ಡೌನ್​ ಸಮಯದಲ್ಲೂ ನಗರದ ಯಾವುದೇ ಭಾಗಕ್ಕೆ ತೆರಳಲು ಅನುಮತಿ ನೀಡಿದೆ.

ಇದನ್ನೂ ಓದಿ: ಬಾಬಾ ರಾಮ್​ದೇವ್​ ವಿರುದ್ಧ ಐಎಂಎಯಿಂದ 1000 ಕೋಟಿ ರೂ.ಮಾನನಷ್ಟ ಮೊಕದ್ದಮೆ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!