AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮ್ಲಜನಕ ಸಿಗದೆ ಮೃತಪಟ್ಟ ತಾಯಿಯ ನೆನಪಿಗಾಗಿ ಆಟೋದಲ್ಲಿ ಆಕ್ಸಿಜನ್ ಪೂರೈಸುತ್ತಿರುವ ಯುವತಿ..; ಚೆನ್ನೈನಲ್ಲಿ ಫೇಮಸ್​ ಆಯ್ತು ‘ಆಕ್ಸಿಜನ್ ಆಟೋ’

ಚೆನ್ನೈನಲ್ಲಿ ಸೀತಾದೇವಿ ಎಂಬುವರ ತಾಯಿಯೂ ಸಹ ಕೊವಿಡ್​ 19ನಿಂದ ಬಳಲಿ, ಆಕ್ಸಿಜನ್​ ಸಿಗದೆ ಮೇ 1ರಂದು ಮೃತಪಟ್ಟಿದ್ದಾರೆ. ಇವರ ಹೆಸರು ವಿಜಯಾ, ಏಪ್ರಿಲ್​ 30ರಂದು ಸಂಜೆ 8ಗಂಟೆ ಹೊತ್ತಿಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಆಮ್ಲಜನಕ ಸಿಗದೆ ಮೃತಪಟ್ಟ ತಾಯಿಯ ನೆನಪಿಗಾಗಿ ಆಟೋದಲ್ಲಿ ಆಕ್ಸಿಜನ್ ಪೂರೈಸುತ್ತಿರುವ ಯುವತಿ..; ಚೆನ್ನೈನಲ್ಲಿ ಫೇಮಸ್​ ಆಯ್ತು ‘ಆಕ್ಸಿಜನ್ ಆಟೋ’
ಆಕ್ಸಿಜನ್​ ಆಟೋ ಶುರು ಮಾಡಿರುವ ಯುವತಿ
Follow us
Lakshmi Hegde
|

Updated on: May 26, 2021 | 10:35 PM

ಕೊವಿಡ್​ 19 ಎರಡನೇ ಅಲೆ ಸಿಕ್ಕಾಪಟೆ ಜಾಸ್ತಿಯಾಗುತ್ತಿದೆ. ಕೊರೊನಾ ಸೋಂಕು ಉಲ್ಬಣಗೊಂಡ ಬೆನ್ನಲ್ಲೇ ದೇಶದಲ್ಲಿ ಆಕ್ಸಿಜನ್ ಅಭಾವ ತೀವ್ರವಾಗಿ ಕಾಡುತ್ತಿದೆ. ಅನೇಕ ರೋಗಿಗಳು ಸಕಾಲಕ್ಕೆ ಆಕ್ಸಿಜನ್ ಸಿಗದೆ ಮೃತಪಟ್ಟಿದ್ದಾರೆ. ಈ ಪರಿಸ್ಥಿತಿ ತಮಿಳುನಾಡಿನಲ್ಲೂ ಹೊರತಲ್ಲ.

ಹಾಗೇ, ಚೆನ್ನೈನಲ್ಲಿ ಸೀತಾದೇವಿ ಎಂಬುವರ ತಾಯಿಯೂ ಸಹ ಕೊವಿಡ್​ 19ನಿಂದ ಬಳಲಿ, ಆಕ್ಸಿಜನ್​ ಸಿಗದೆ ಮೇ 1ರಂದು ಮೃತಪಟ್ಟಿದ್ದಾರೆ. ಇವರ ಹೆಸರು ವಿಜಯಾ, ಏಪ್ರಿಲ್​ 30ರಂದು ಸಂಜೆ 8ಗಂಟೆ ಹೊತ್ತಿಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇತ್ತ ವಿಜಯಾ ಅವರ ಆಕ್ಸಿಜನ್​ ಮಟ್ಟ ಕುಸಿಯುತ್ತಿದ್ದರೂ, ಆಸ್ಪತ್ರೆಯಲ್ಲಿ ಬೆಡ್​ ಸಿಗಲಿಲ್ಲ. ಸುಮಾರು 1 ತಾಸು ಸೀತಾ ದೇವಿ ತನ್ನ ತಾಯಿಯನ್ನು ದಾಖಲಿಸಲೆಂದು ಕಾದಿದ್ದಾರೆ. ನಾರ್ಮಲ್ ಬೆಡ್​ ಸಿಕ್ಕಿತಾದರೂ ಆಕ್ಸಿಜನ್​ ಬೆಡ್​ ಸಿಗಲೇ ಇಲ್ಲ. 12 ತಾಸು ಕಾದರೂ ಆಮ್ಲಜನಕ ಸಿಗಲಿಲ್ಲ. ಇದರ ಪರಿಣಾಮ ವಿಜಯಾ ಮೃತಪಟ್ಟರು.

ತನ್ನ ತಾಯಿ ಆಕ್ಸಿಜನ್​ ಸಿಗದೆ ಮೃತಪಟ್ಟಿದ್ದಾರೆ. ಅದೇ ಪರಿಸ್ಥಿತಿ ಇನ್ನೊಬ್ಬರಿಗೆ ಉಂಟಾಗಬಾರದು. ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಸೀತಾ ದೇವಿ, ಒಂದು ಎನ್​ಜಿಒ ಸ್ಥಾಪಿಸಿದ್ದಾರೆ. ಅದರ ಮೂಲಕ ಆಟೋದಲ್ಲಿ ಆಕ್ಸಿಜನ್ ಸೇವೆ ನೀಡುತ್ತಿದ್ದಾರೆ. ಇವರ ಆಕ್ಸಿಜನ್ ಆಟೋ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆ ಎದುರಲ್ಲೇ ಪಾರ್ಕ್ ಆಗಿರುತ್ತದೆ. ಮೇ 5ರಿಂದಲೇ ಇವರು ಆಮ್ಲಜನಕ ಸೇವೆ ಪ್ರಾರಂಭವಾಗಿದ್ದು, ಸೀತಾ ದೇವಿಯವರಿಗೆ ಶರತ್​ ಕುಮಾತ್​ ಮತ್ತು ಮೋಹನ್​ರಾಜ್​ ಎಂಬುವರೂ ಸಹಾಯ ಮಾಡುತ್ತಿದ್ದಾರೆ. ಪ್ರತಿದಿನವೂ ತನ್ನ ಆಟೋದಿಂದ ಕನಿಷ್ಠ 20 ಜನರು ಆಮ್ಲಜನಕ ಸೇವೆ ಪಡೆಯುತ್ತಿದ್ದಾರೆ. ಇದರಲ್ಲಿ ನನಗೆ ಸಂತೋಷ ಇದೆ ಎನ್ನುತ್ತಾರೆ ಸೀತಾ ದೇವಿ. ಇವರ ಸೇವೆಯನ್ನು ಗುರುತಿಸಿ ಗ್ರೇಟರ್​ ಚೆನ್ನೈ ಕಾರ್ಪೋರೇಶನ್​ ಮೇ 25ರಂದು ಸೀತಾ ದೇವಿ ಸೇರಿ ಒಟ್ಟು 250 ಜನರಿಗೆ ಕೊವಿಡ್​ ಬ್ರಿಗೇಡ್​ ಬ್ಯಾಂಡ್ ನೀಡಿದೆ. ಲಾಕ್​ಡೌನ್​ ಸಮಯದಲ್ಲೂ ನಗರದ ಯಾವುದೇ ಭಾಗಕ್ಕೆ ತೆರಳಲು ಅನುಮತಿ ನೀಡಿದೆ.

ಇದನ್ನೂ ಓದಿ: ಬಾಬಾ ರಾಮ್​ದೇವ್​ ವಿರುದ್ಧ ಐಎಂಎಯಿಂದ 1000 ಕೋಟಿ ರೂ.ಮಾನನಷ್ಟ ಮೊಕದ್ದಮೆ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ