AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮ್ಲಜನಕ ಸಿಗದೆ ಮೃತಪಟ್ಟ ತಾಯಿಯ ನೆನಪಿಗಾಗಿ ಆಟೋದಲ್ಲಿ ಆಕ್ಸಿಜನ್ ಪೂರೈಸುತ್ತಿರುವ ಯುವತಿ..; ಚೆನ್ನೈನಲ್ಲಿ ಫೇಮಸ್​ ಆಯ್ತು ‘ಆಕ್ಸಿಜನ್ ಆಟೋ’

ಚೆನ್ನೈನಲ್ಲಿ ಸೀತಾದೇವಿ ಎಂಬುವರ ತಾಯಿಯೂ ಸಹ ಕೊವಿಡ್​ 19ನಿಂದ ಬಳಲಿ, ಆಕ್ಸಿಜನ್​ ಸಿಗದೆ ಮೇ 1ರಂದು ಮೃತಪಟ್ಟಿದ್ದಾರೆ. ಇವರ ಹೆಸರು ವಿಜಯಾ, ಏಪ್ರಿಲ್​ 30ರಂದು ಸಂಜೆ 8ಗಂಟೆ ಹೊತ್ತಿಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಆಮ್ಲಜನಕ ಸಿಗದೆ ಮೃತಪಟ್ಟ ತಾಯಿಯ ನೆನಪಿಗಾಗಿ ಆಟೋದಲ್ಲಿ ಆಕ್ಸಿಜನ್ ಪೂರೈಸುತ್ತಿರುವ ಯುವತಿ..; ಚೆನ್ನೈನಲ್ಲಿ ಫೇಮಸ್​ ಆಯ್ತು ‘ಆಕ್ಸಿಜನ್ ಆಟೋ’
ಆಕ್ಸಿಜನ್​ ಆಟೋ ಶುರು ಮಾಡಿರುವ ಯುವತಿ
Lakshmi Hegde
|

Updated on: May 26, 2021 | 10:35 PM

Share

ಕೊವಿಡ್​ 19 ಎರಡನೇ ಅಲೆ ಸಿಕ್ಕಾಪಟೆ ಜಾಸ್ತಿಯಾಗುತ್ತಿದೆ. ಕೊರೊನಾ ಸೋಂಕು ಉಲ್ಬಣಗೊಂಡ ಬೆನ್ನಲ್ಲೇ ದೇಶದಲ್ಲಿ ಆಕ್ಸಿಜನ್ ಅಭಾವ ತೀವ್ರವಾಗಿ ಕಾಡುತ್ತಿದೆ. ಅನೇಕ ರೋಗಿಗಳು ಸಕಾಲಕ್ಕೆ ಆಕ್ಸಿಜನ್ ಸಿಗದೆ ಮೃತಪಟ್ಟಿದ್ದಾರೆ. ಈ ಪರಿಸ್ಥಿತಿ ತಮಿಳುನಾಡಿನಲ್ಲೂ ಹೊರತಲ್ಲ.

ಹಾಗೇ, ಚೆನ್ನೈನಲ್ಲಿ ಸೀತಾದೇವಿ ಎಂಬುವರ ತಾಯಿಯೂ ಸಹ ಕೊವಿಡ್​ 19ನಿಂದ ಬಳಲಿ, ಆಕ್ಸಿಜನ್​ ಸಿಗದೆ ಮೇ 1ರಂದು ಮೃತಪಟ್ಟಿದ್ದಾರೆ. ಇವರ ಹೆಸರು ವಿಜಯಾ, ಏಪ್ರಿಲ್​ 30ರಂದು ಸಂಜೆ 8ಗಂಟೆ ಹೊತ್ತಿಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇತ್ತ ವಿಜಯಾ ಅವರ ಆಕ್ಸಿಜನ್​ ಮಟ್ಟ ಕುಸಿಯುತ್ತಿದ್ದರೂ, ಆಸ್ಪತ್ರೆಯಲ್ಲಿ ಬೆಡ್​ ಸಿಗಲಿಲ್ಲ. ಸುಮಾರು 1 ತಾಸು ಸೀತಾ ದೇವಿ ತನ್ನ ತಾಯಿಯನ್ನು ದಾಖಲಿಸಲೆಂದು ಕಾದಿದ್ದಾರೆ. ನಾರ್ಮಲ್ ಬೆಡ್​ ಸಿಕ್ಕಿತಾದರೂ ಆಕ್ಸಿಜನ್​ ಬೆಡ್​ ಸಿಗಲೇ ಇಲ್ಲ. 12 ತಾಸು ಕಾದರೂ ಆಮ್ಲಜನಕ ಸಿಗಲಿಲ್ಲ. ಇದರ ಪರಿಣಾಮ ವಿಜಯಾ ಮೃತಪಟ್ಟರು.

ತನ್ನ ತಾಯಿ ಆಕ್ಸಿಜನ್​ ಸಿಗದೆ ಮೃತಪಟ್ಟಿದ್ದಾರೆ. ಅದೇ ಪರಿಸ್ಥಿತಿ ಇನ್ನೊಬ್ಬರಿಗೆ ಉಂಟಾಗಬಾರದು. ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಸೀತಾ ದೇವಿ, ಒಂದು ಎನ್​ಜಿಒ ಸ್ಥಾಪಿಸಿದ್ದಾರೆ. ಅದರ ಮೂಲಕ ಆಟೋದಲ್ಲಿ ಆಕ್ಸಿಜನ್ ಸೇವೆ ನೀಡುತ್ತಿದ್ದಾರೆ. ಇವರ ಆಕ್ಸಿಜನ್ ಆಟೋ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆ ಎದುರಲ್ಲೇ ಪಾರ್ಕ್ ಆಗಿರುತ್ತದೆ. ಮೇ 5ರಿಂದಲೇ ಇವರು ಆಮ್ಲಜನಕ ಸೇವೆ ಪ್ರಾರಂಭವಾಗಿದ್ದು, ಸೀತಾ ದೇವಿಯವರಿಗೆ ಶರತ್​ ಕುಮಾತ್​ ಮತ್ತು ಮೋಹನ್​ರಾಜ್​ ಎಂಬುವರೂ ಸಹಾಯ ಮಾಡುತ್ತಿದ್ದಾರೆ. ಪ್ರತಿದಿನವೂ ತನ್ನ ಆಟೋದಿಂದ ಕನಿಷ್ಠ 20 ಜನರು ಆಮ್ಲಜನಕ ಸೇವೆ ಪಡೆಯುತ್ತಿದ್ದಾರೆ. ಇದರಲ್ಲಿ ನನಗೆ ಸಂತೋಷ ಇದೆ ಎನ್ನುತ್ತಾರೆ ಸೀತಾ ದೇವಿ. ಇವರ ಸೇವೆಯನ್ನು ಗುರುತಿಸಿ ಗ್ರೇಟರ್​ ಚೆನ್ನೈ ಕಾರ್ಪೋರೇಶನ್​ ಮೇ 25ರಂದು ಸೀತಾ ದೇವಿ ಸೇರಿ ಒಟ್ಟು 250 ಜನರಿಗೆ ಕೊವಿಡ್​ ಬ್ರಿಗೇಡ್​ ಬ್ಯಾಂಡ್ ನೀಡಿದೆ. ಲಾಕ್​ಡೌನ್​ ಸಮಯದಲ್ಲೂ ನಗರದ ಯಾವುದೇ ಭಾಗಕ್ಕೆ ತೆರಳಲು ಅನುಮತಿ ನೀಡಿದೆ.

ಇದನ್ನೂ ಓದಿ: ಬಾಬಾ ರಾಮ್​ದೇವ್​ ವಿರುದ್ಧ ಐಎಂಎಯಿಂದ 1000 ಕೋಟಿ ರೂ.ಮಾನನಷ್ಟ ಮೊಕದ್ದಮೆ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್