AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jawaharlal Nehru Death Anniversary 2021: ಪಂಡಿತ್ ಜವಹರ ​ಲಾಲ್​ ನೆಹರು ಅವರ ಬಾಲ್ಯ, ಶಿಕ್ಷಣ ಮತ್ತು ಬರೆದ ಪುಸ್ತಕಗಳು

Jawaharlal Nehru: 1947 ರಿಂದ 1964 ಮೇ 27ರ ವರೆಗೆ ಅವರು ಕೊನೆಯುಸಿರೆಳೆಯುವವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ಅವರ 57ನೇ ಪುಣ್ಯ ತಿಥಿ. ಭಾರತದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಯನ್ನು ಇಂದು ನಾವು ಸ್ಮರಿಸಲೇ ಬೇಕು.

Jawaharlal Nehru Death Anniversary 2021: ಪಂಡಿತ್ ಜವಹರ ​ಲಾಲ್​ ನೆಹರು ಅವರ ಬಾಲ್ಯ, ಶಿಕ್ಷಣ ಮತ್ತು ಬರೆದ ಪುಸ್ತಕಗಳು
ಪಂಡಿತ್ ಜವಹರ ​ಲಾಲ್​ ನೆಹರು
shruti hegde
|

Updated on:May 27, 2021 | 10:28 AM

Share

ಮಹಾತ್ಮಾ ಗಾಂಧೀಜಿಯವರ ಮಾರ್ಗದರ್ಶನದ ಅಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಿದವರು ಪಂಡಿತ್​ ಜವಹರ ​ಲಾಲ್​ ನೆಹರು​. 1947 ರಿಂದ 1964 ಮೇ 27ರ ವರೆಗೆ ಅವರು ಕೊನೆಯುಸಿರೆಳೆಯುವವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ಅವರ 57ನೇ ಪುಣ್ಯ ತಿಥಿ. ಭಾರತದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಯನ್ನು ಇಂದು ನಾವು ಸ್ಮರಿಸಲೇ ಬೇಕು.

1919 ರಲ್ಲಿ ನಡೆದ ಹೋಮ್ ರೂಲ್ ಲೀಗ್​ನ ಕಾರ್ಯದರ್ಶಿಯಾಗಿ ನೇಮಕಗೊಂಡ ನೆಹರು ಅವರು ಮೊದಲ ಬಾರಿಗೆ ಗಾಂಧೀಜಿ ಅವರನ್ನು ಭೇಟಿಯಾದದ್ದು.‌ ಇಲ್ಲಿಂದ ಅವರ ಚಳುವಳಿಗಳು, ಹೋರಾಟಗಳು ಪ್ರಾರಂಭವಾಯಿತು. ಮಹಾತ್ಮಾ ಗಾಂಧೀಜಿಯವರ ತತ್ವಕ್ಕೆ ಸ್ಪೂರ್ತಿಯಾಗಿ, ಅವರ ಮಾರ್ಗದರ್ಶನ ಅಡಿಯಲ್ಲಿ ಸಾಗಿದರು.

ಜನನ ಮತ್ತು ಹಿನ್ನೆಲೆ ಪಂಡಿತ್ ಜವಹರ ಲಾಲ್ ನೆಹರು ಅವರು 1889 ನವೆಂಬರ್ 14ರಂದು ಅಲಹಾಬಾದ್​ನಲ್ಲಿ ಜನಿಸಿದರು. ಕಾಶ್ಮೀರಿ ಸಮುದಾಯಕ್ಕೆ ಸೇರಿದ ವಕೀಲರು ಹಾಗೂ 1919 ರಿಂದ 1928 ರವರೆಗೆ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಸೇವೆ ಅಲ್ಲಿಸಿದ ಮೋತಿಲಾಲ್ ನೆಹರು ಅವರ ತಂದೆ. ಲಾಹೋರಿನಲ್ಲಿ ವಾಸವಿದ್ದ ಕಾಶ್ಮೀರಿ ಕುಟುಂಬದಿಂದ ಬಂದ ಸ್ವರೂಪ್ರಣಿ ಥುಸು ಅವರ ತಾಯಿ. ಮೋತಿಲಾಲರಿಗೆ ಎರಡನೇ ಪತ್ನಿ. ಮೋತಿಲಾಲ್ ದಂಪತಿಗೆ ಒಟ್ಟು ಮೂರು ಮಕ್ಕಳು. ಅವರಲ್ಲಿ ಜವಹರ ಲಾಲ್ ನೆಹರು ಮೊದಲಿಗರು.

ಮೂಲತಹ ಶ್ರೀಮಂತ ಕುಟುಂಬದಿಂದ ಬಂದಿದ್ದರಿಂದ ಮನೆಗೆ ಶಿಕ್ಷಕರು ಬಂದು ಪಾಠ ಕಲಿಸಿ ಹೋಗುತ್ತಿದ್ದರು. ತಮ್ಮ ಮನೆಯಲ್ಲಿಯೇ ಖಾಸಗೀ ಶಿಕ್ಷಕರಿಂದಿಗೆ ತಮ್ಮ ವಿದ್ಯಾಭ್ಯಾಸ ಮುಗಿಸಿದರು. ಸರಿಸುಮಾರು 17 ವರ್ಷವಿರುವಾಗ ಉನ್ನತವ್ಯಾಸಂಗಕ್ಕಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ತಾವು ವಿದ್ಯಾರ್ಥಿಯಾಗಿದ್ದಾಗಲೇ ಬ್ರಿಟೀಷರ ದಬ್ಬಾಳಿಕೆಗೆ ನರಳುತ್ತಿದ್ದವರನ್ನು ನೋಡಿ ಹೋರಾಟದ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದರು. ವಿಶ್ವ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ 1912 ರಲ್ಲಿ ಭಾರತಕ್ಕೆ ಬಂದಿಳಿದವರೇ ರಾಜಕೀಯ ರಂಗಕ್ಕೆ ಇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಭಾರತಕ್ಕೆ ಹಿಂದಿರುಗಿದ ಕೆಲವೇ ಕೆಲವು ತಿಂಗಳುಗಳಲ್ಲಿ ಪಾಟ್ನಾದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಕಾಂಗ್ರೆಸ್​ನ ವಾರ್ಷಿಕ ಅಧಿವೇಶದಲ್ಲಿ ಪಾಲ್ಗೊಂಡರು. ಆ ಸಂದರ್ಭದಲ್ಲಿ ಕಾಂಗ್ರೆಸ್​ ಮಧ್ಯಮವರ್ಗ ಮತ್ತು ಇಂಗ್ಲಿಷ್​ ತಿಳುವಳಿಕೆಯೊಂದಿಗೆ ಉನ್ನತ ವ್ಯವಹಾರ ನಡೆಯುತ್ತಿದ್ದರಿಂದ ಅದನ್ನು ನೋಡಿದ ನೆಹರೂ ಅವರಿಗೆ ಮುಜುಗರ ಉಂಟಾಯಿತು. ಗಾಂಧೀಜಿಯವರ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಭಾರತೀಯ ನಾಗರಿಕ ಹಕ್ಕುಗಳ ಚಳುವಳಿಯ ಕುರಿತಾಗಿ ಬೆಂಬಲಿಕರಾಗಿ ಪಕ್ಷಕ್ಕೆ ಕೆಲಸ ಮಾಡಲು ಒಪ್ಪಿದರು. ಈ ಬಳಿಕ ತಾರಮ್ಯದ ವಿರುದ್ಧ ಪ್ರಚಾರ ಕೈಗೊಂಡರು. ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಹೋರಾಟ ನಡೆಸಿದ ಹೋರಾಟಗಾರರಲ್ಲಿ ಇವರೂ ಪ್ರಮುಖರು. ಇವರ 57ನೇ ಪುಣ್ಯ ತಿಥಿಯಂದು ನಾವು ನೆಹರು ಅವರನ್ನು ಸ್ಮರಿಸಲೇ ಬೇಕು.

ಪುಸ್ತಕಗಳು ಪಂಡಿತ್​ ಜವಹರ್ ಲಾಲ್​ ನೆಹರೂ ಅವರಿಗೆ ಪುಸ್ತಕದ ಕುರಿತು ಬಾರೀ ಒಲವಿತ್ತು. ಅನೇಕ ಪುಸ್ತಕಗಳನ್ನೂ ಸಹ ಬರೆದಿದ್ದಾರೆ. ಅವುಗಳಲ್ಲಿ, ಡಿಸ್ಕವರಿ ಆಫ್​ ಇಂಡಿಯಾ, ಗ್ಲಿಮ್ಪ್ಸ್​ ಆಫ್​ ವರ್ಲ್ಡ್​ ಹಿಸ್ಟರಿ, ಟುವಾರ್ಡ್​ ಫ್ರೀಡಂ ಹೆಚ್ಚು ಜನಪ್ರಿಯ ಪುಸ್ತಕಗಳು. ತನ್ನ ಮಗಳು ಇಂದಿರಾ ಗಾಂಧಿಯವರಿಗೆ ಬರೆದ ಪತ್ರಗಳನ್ನೆಲ್ಲಾ ಸಂಗ್ರಹಿಸಿ ಒಂದು ಪುಸ್ತಕ ಸಿದ್ಧಪಡಿಸಿದ್ದಾರೆ. ಒಟ್ಟು 30 ಪತ್ರಗಳನ್ನು ಒಳಗೊಂಡಂತೆ ಪುಸ್ತಕ ರೂಪಿಸಲಾಗಿದೆ. ‘ಲೆಟರ್ಸ್​ ಫ್ರಮ್​ ಎ ಫಾದರ್​ ಟು ಹಿಸ್​ ಡಾಟರ್​’ ಎಂಬ ಹೆಸರಿನ ಪುಸ್ತಕದ ರೂಪದಲ್ಲಿ ಪ್ರಕಟಗೊಂಡಿದೆ. ತಾವು ಪ್ರಧಾನಿ ಹುದ್ದೆ ಪಡೆಯುವುದಕ್ಕೂ ಮೊದಲು ಅವರು ಪತ್ರಿಕೋದ್ಯಮಿಯಾಗಿ ಕೆಲಸ ನಿರ್ವಹಿಸಿದ್ದರು. ಹಾಗೂ ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿದ್ದರು.

ಇದನ್ನೂ ಓದಿ: 56 ಕುವೆಂಪು ಪುಸ್ತಕಗಳು ಇ-ಬುಕ್ ರೂಪದಲ್ಲಿ ಲಭ್ಯ

Published On - 10:23 am, Thu, 27 May 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ