ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರಿಂದ ಪರಸ್ಪರ ಹಲ್ಲೆ
ಒಡಿಶಾ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ-ಕಾಂಗ್ರೆಸ್ ಶಾಸಕರು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಬಿಜೆಪಿಯ ಹಿರಿಯ ಶಾಸಕರೊಬ್ಬರು ಕಾಂಗ್ರೆಸ್ ಶಾಸಕರ ಕಡೆಗೆ ತೆರಳಿ ಅವರ ಕಾಲರ್ ಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ. ವಿರೋಧ ಪಕ್ಷದ ಪ್ರತಿಭಟನೆಗಳ ನಡುವೆ ಸ್ಪೀಕರ್ ಪಾಧಿ ಸುಮಾರು 30 ನಿಮಿಷಗಳ ಕಾಲ ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಿದರು.

ಭುವನೇಶ್ವರ (ಮಾರ್ಚ್ 11): ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಒಡಿಶಾ ವಿಧಾನಸಭೆಯಲ್ಲಿ (Odisha Assembly) ಗೊಂದಲದ ವಾತಾವರಣ ನಿರ್ಮಾಣವಾಯಿತು. ಒಡಿಶಾದ ನಗರಾಭಿವೃದ್ಧಿ ಸಚಿವ ಕೆ.ಸಿ. ಮಹಾಪಾತ್ರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದಾಗ ನಗರಾಭಿವೃದ್ಧಿ ಸಚಿವ ಕೆ.ಸಿ. ಮಹಾಪಾತ್ರ ಅವರ ಮುಂದೆ ನಿಂತಿದ್ದ ಕಾಂಗ್ರೆಸ್ ಶಾಸಕ ತಾರಾಪ್ರಸಾದ್ ಬಹಿನಿಪತಿ ಅವರ ಕಡೆಗೆ ಬಿಜೆಪಿಯ ಹಿರಿಯ ಶಾಸಕ ಜಯನಾರಾಯಣ್ ಮಿಶ್ರಾ ಧಾವಿಸಿದಾಗ ಸದನದಲ್ಲಿ ಉದ್ವಿಗ್ನತೆ ಉಂಟಾಯಿತು.
“ಜಯನಾರಾಯಣ್ ಮಿಶ್ರಾ ನನ್ನ ಶರ್ಟ್ ಕಾಲರ್ ಹಿಡಿದು ನನ್ನನ್ನು ತಳ್ಳಿದರು. ಸದನವು ಆದೇಶದಲ್ಲಿಲ್ಲದಿದ್ದಾಗ ಉತ್ತರ ನೀಡಬಾರದು ಎಂದು ನಾನು ಸಚಿವ ಮಹಾಪಾತ್ರ ಅವರನ್ನು ಕೇಳುತ್ತಿದ್ದೆ. ನಾನು ಅವರ ಮುಂದೆ ಕೈಗಳನ್ನು ಮುಗಿದು ಕೇಳಿದೆ. ಆದರೆ, ಮಿಶ್ರಾ ಇದ್ದಕ್ಕಿದ್ದಂತೆ ನನ್ನ ಬಳಿಗೆ ಬಂದು ನನ್ನ ಕಾಲರ್ ಹಿಡಿದುಕೊಂಡರು” ಎಂದು ಕಾಂಗ್ರೆಸ್ ಶಾಸಕ ತಾರಾಪ್ರಸಾದ್ ಬಹಿನಿಪತಿ ಸದನದ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಒಡಿಶಾ: ಹೆತ್ತವರು, ಸಹೋದರಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದ ಯುವಕ
ಬಿಜೆಡಿ ಸದಸ್ಯರು ಸಹ ಸದನದ ಬಾವಿಯಲ್ಲಿ ಇಳಿದರು. ಆದರೆ ಹೋರಾಟದಲ್ಲಿ ಭಾಗವಹಿಸಲಿಲ್ಲ. ವಿರೋಧ ಪಕ್ಷದ ಬಿಜೆಡಿ ಮತ್ತು ಕಾಂಗ್ರೆಸ್ ಸದಸ್ಯರು ಪ್ರತ್ಯೇಕ ವಿಷಯಗಳ ಕುರಿತು ಪ್ರತಿಭಟನೆ ನಡೆಸಿದ್ದಾರೆ. ವಿರೋಧ ಪಕ್ಷದ ಪ್ರತಿಭಟನೆಗಳ ನಡುವೆ ಸ್ಪೀಕರ್ ಪಾಧಿ ಸುಮಾರು 30 ನಿಮಿಷಗಳ ಕಾಲ ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಿದರು. ಸ್ಪೀಕರ್ ಸುರಮಾ ಪಾಧಿ ಅವರು ಮಧ್ಯಾಹ್ನದವರೆಗೆ ಕಲಾಪವನ್ನು ಮುಂದೂಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ