AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಜೈಲಿನಲ್ಲಿ 20 ವರ್ಷ ಪರದಾಟ; ಭಾರತಕ್ಕೆ ಮರಳಿ.. ಮನೆಯವರಿಗಾಗಿ ಹುಡುಕಾಟ!

ಭುವನೇಶ್ವರ್: ಇಪ್ಪತ್ತು ವರ್ಷ ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯರೊಬ್ಬರು ತಾಯ್ನಾಡಿಗೆ ಮರಳಿದ ನಂತರ ತನ್ನವರಿಗಾಗಿ ಭಾರೀ ಹುಡುಕಾಟ ನಡೆಸಿ, ಕೊನೆಗೂ ಮನೆಯನ್ನು ಸೇರಿಕೊಂಡಿದ್ಧಾರೆ. ಒಡಿಶಾದ ಸುಂದರ್​ಘರ್ ಜಿಲ್ಲೆಯ 50 ವರ್ಷದ ವ್ಯಕ್ತಿಯನ್ನು ಬಿರ್ಜು ಕುಲ್ಲು ಎಂದು ಗುರುತಿಸಲಾಗಿದೆ. ಅಚಾನಕ್​ ಆಗಿ ದೇಶದ ಗಡಿ ದಾಟಿದ್ದ ಬಿರ್ಜು ಕುಲ್ಲುನನ್ನು ಪಾಕ್ ರಕ್ಷಣಾ ಪಡೆ ಬಂಧಿಸಿ, ಲಾಹೋರ್ ಜೈಲಿನಲ್ಲಿ ಇರಿಸಿತ್ತು. 20 ವರ್ಷಗಳನ್ನು ಜೈಲಿನಲ್ಲಿ ಕಳೆಯುವಂತೆ ಮಾಡಿತ್ತು. ಕಳೆದ ಅಕ್ಟೋಬರ್​ನಲ್ಲಿ ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರ, ಪಾಕ್ ಪಡೆ ಆತನನ್ನು ಭಾರತಕ್ಕೆ […]

ಪಾಕ್ ಜೈಲಿನಲ್ಲಿ 20 ವರ್ಷ ಪರದಾಟ; ಭಾರತಕ್ಕೆ ಮರಳಿ.. ಮನೆಯವರಿಗಾಗಿ ಹುಡುಕಾಟ!
ಸಾಧು ಶ್ರೀನಾಥ್​
|

Updated on:Nov 14, 2020 | 3:31 PM

Share

ಭುವನೇಶ್ವರ್: ಇಪ್ಪತ್ತು ವರ್ಷ ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯರೊಬ್ಬರು ತಾಯ್ನಾಡಿಗೆ ಮರಳಿದ ನಂತರ ತನ್ನವರಿಗಾಗಿ ಭಾರೀ ಹುಡುಕಾಟ ನಡೆಸಿ, ಕೊನೆಗೂ ಮನೆಯನ್ನು ಸೇರಿಕೊಂಡಿದ್ಧಾರೆ. ಒಡಿಶಾದ ಸುಂದರ್​ಘರ್ ಜಿಲ್ಲೆಯ 50 ವರ್ಷದ ವ್ಯಕ್ತಿಯನ್ನು ಬಿರ್ಜು ಕುಲ್ಲು ಎಂದು ಗುರುತಿಸಲಾಗಿದೆ.

ಅಚಾನಕ್​ ಆಗಿ ದೇಶದ ಗಡಿ ದಾಟಿದ್ದ ಬಿರ್ಜು ಕುಲ್ಲುನನ್ನು ಪಾಕ್ ರಕ್ಷಣಾ ಪಡೆ ಬಂಧಿಸಿ, ಲಾಹೋರ್ ಜೈಲಿನಲ್ಲಿ ಇರಿಸಿತ್ತು. 20 ವರ್ಷಗಳನ್ನು ಜೈಲಿನಲ್ಲಿ ಕಳೆಯುವಂತೆ ಮಾಡಿತ್ತು. ಕಳೆದ ಅಕ್ಟೋಬರ್​ನಲ್ಲಿ ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರ, ಪಾಕ್ ಪಡೆ ಆತನನ್ನು ಭಾರತಕ್ಕೆ ಹಸ್ತಾಂತರಿಸಿದೆ.

ಹೋಟೆಲ್ ಕೆಲಸಕ್ಕೆಂದು ಹೋಗಿದ್ದ! ಹೋಟೆಲ್ ಕೆಲಸಕ್ಕೆಂದು ಜಾರ್ಖಂಡ್​ಗೆ ಹೋಗಿದ್ದ ಬಿರ್ಜು ನಂತರ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಮನೆಯವರಿಗೆ ಅವನು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಆತ ಮರಳಿ ಬರುತ್ತಾನೆ ಎಂಬ ಆಸೆಯನ್ನು ಎಲ್ಲರೂ ಕಳೆದುಕೊಂಡಿದ್ದರು.

ತಾನು ಹೇಗೆ ಗಡಿ ದಾಟಿದೆ ಎಂಬ ಬಗ್ಗೆ ಬಿರ್ಜುಗೆ ಸ್ಪಷ್ಟ ಅರಿವಿಲ್ಲ. ಯೂನಿಫಾರ್ಮ್ ಧರಿಸಿದ್ದವರು ಬಂಧಿಸಿದರು ಎಂದಷ್ಟೇ ಆತ ಮಾಹಿತಿ ನೀಡಿದ್ದಾನೆ ಎಂದು ಸುಂದರ್​ಘರ್ ಪೊಲೀಸರು ಹೇಳಿದ್ದಾರೆ. ಮನೆಯವರಿಗಾಗಿ ಹುಡುಕಾಟ ನಡೆಸುತ್ತಿದ್ದವನಿಗೆ ಪೊಲೀಸರು ಸಹಾಯ ಮಾಡಿದ್ದು, ಇದೀಗ ಮನೆ ತಲುಪಲು ಕಾರಣರಾಗಿದ್ದಾರೆ. ಶುಕ್ರವಾರ ಸುಂದರ್​ಘರ್​ನ ಕುತ್ರಾ ಗ್ರಾಮದಲ್ಲಿ ಆತನಿಗೆ ಭಾವನಾತ್ಮಕ ಸ್ವಾಗತ ದೊರಕಿದೆ.

‘ಬಿರ್ಜು ಮರಳಿ ಬಂದದ್ದು ತುಂಬಾ ಸಂತೋಷವಾಗಿದೆ. ಇದು ನಮಗೆಲ್ಲಾ ಹೊಸ ಬದುಕು’ ಎಂದು ಆತನ ಸಹೋದರಿ ಹೇಳಿದ್ದಾರೆ. ‘ನನ್ನ ಬಂಧುಗಳನ್ನು, ನೆಂಟರನ್ನು, ಗೆಳೆಯರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದು ಬಿರ್ಜು ಕುಲ್ಲು ಹೇಳಿಕೊಂಡಿದ್ಧಾನೆ. ಆತನ ಪುನರ್ವಸತಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿ ಕುತ್ರಾ ಗ್ರಾಮದ ಅಭಿವೃದ್ಧಿ ಅಧಿಕಾರಿ ಮಾನಸ್ ರಂಜನ್ ರೇ ಇದೇ ವೇಳೆ ತಿಳಿಸಿದ್ದಾರೆ.

Published On - 3:23 pm, Sat, 14 November 20

Follow Us
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!