AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ ಸರ್ಕಾರದಿಂದ ಆನ್‌ಲೈನ್ ಪಿಂಡ ದಾನ ಸೇವೆಗೆ ಪಾಂಡ ಸಮುದಾಯ, ವಿಎಚ್‌ಪಿ ಟೀಕೆ

ಬಿಹಾರದಲ್ಲಿ ಆರಂಭವಾಗಿರುವ ಹೊಸ ಆನ್‌ಲೈನ್ ಪಿಂಡ ದಾನ ಸೇವೆಯು 23,000 ರೂ. ವೆಚ್ಚದ್ದಾಗಿದೆ. ಇದು ಪಿತ್ರಪಕ್ಷ ಆಚರಣೆಯಲ್ಲಿ ದೂರದಿಂದಲೇ ಭಾಗವಹಿಸಲು ಅವಕಾಶ ನೀಡುತ್ತದೆ. ಬಿಹಾರ ಸರ್ಕಾರದ ಈ ಕಾರ್ಯಕ್ರಮವು ವಿಎಚ್‌ಪಿ ಮತ್ತು ಗಯಾವಾಲ್ ಪಾಂಡಾಗಳು ಸೇರಿದಂತೆ ಗಯಾದ ಸಾಂಪ್ರದಾಯಿಕ ಸಮುದಾಯಗಳಿಂದ ತೀವ್ರ ಟೀಕೆಗೆ ಕಾರಣವಾಗಿದೆ.

ಬಿಹಾರ ಸರ್ಕಾರದಿಂದ ಆನ್‌ಲೈನ್ ಪಿಂಡ ದಾನ ಸೇವೆಗೆ ಪಾಂಡ ಸಮುದಾಯ, ವಿಎಚ್‌ಪಿ ಟೀಕೆ
Pind Daan
ಸುಷ್ಮಾ ಚಕ್ರೆ
|

Updated on: Aug 26, 2025 | 5:06 PM

Share

ನವದೆಹಲಿ, ಆಗಸ್ಟ್ 26: ಇತ್ತೀಚೆಗೆ ಬಿಹಾರದ (Bihar) ರಾಜ್ಯ ಪ್ರವಾಸೋದ್ಯಮ ಇಲಾಖೆಯು ಆನ್‌ಲೈನ್ ಪಿಂಡ ದಾನ ಸೇವೆಯನ್ನು ಪ್ರಾರಂಭಿಸಿತು. ಇದು ಭಾರಿ ಟೀಕೆಗೆ ಕಾರಣವಾಗಿದೆ. ಆದರೆ, ಈ ಕ್ರಮವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಗಯಾವಾಲ್ ಪಾಂಡಾಗಳು ಸೇರಿದಂತೆ ಗಯಾದ ಸಾಂಪ್ರದಾಯಿಕ ಸಮುದಾಯಗಳು ಖಂಡಿಸಿವೆ. ಅವರು ರಾಜ್ಯ ಸರ್ಕಾರದ ಈ ಯೋಜನೆಯನ್ನು ಟೀಕಿಸಿದ್ದಾರೆ. ಈ ಉಪಕ್ರಮವು ದೂರದ ಸ್ಥಳಗಳಿಂದ ಜನರು ಪವಿತ್ರ ಪಿತ್ರಪಕ್ಷ ಆಚರಣೆಗಳನ್ನು ನಡೆಸಲು ಅನುವು ಮಾಡಿಕೊಡುವ ಗುರಿಯನ್ನು ಹೊಂದಿದ್ದರೂ ಧಾರ್ಮಿಕ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಗೌರವಿಸದಿದ್ದಕ್ಕಾಗಿ ಈ ಯೋಜನೆಯನ್ನು ಟೀಕಿಸಲಾಗಿದೆ.

ಈ ಆನ್‌ಲೈನ್ ಸೇವೆಯಲ್ಲಿ ಏನಿದೆ?:

ಈ ಆನ್‌ಲೈನ್ ಸೇವೆಯ ಅಡಿಯಲ್ಲಿ ಗಯಾಕ್ಕೆ ಭೌತಿಕವಾಗಿ ಭೇಟಿ ನೀಡಲು ಸಾಧ್ಯವಾಗದ ಜನರು ಪಿಂಡ ದಾನ ಆಚರಣೆಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಅವರು ಅದಕ್ಕೆ 23,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಭಕ್ತರು ಗೈರುಹಾಜರಾಗುವುದರಿಂದ ಅವರ ಪರವಾಗಿ ಸ್ಥಳೀಯ ಪುರೋಹಿತರು ವಿಧಿವಿಧಾನಗಳನ್ನು ನಿರ್ವಹಿಸುತ್ತಾರೆ. ಇದಲ್ಲದೆ, ಅವರಿಗೆ ಪೆನ್ ಡ್ರೈವ್ ಮೂಲಕ ಸಮಾರಂಭದ ವಿಡಿಯೋ ರೆಕಾರ್ಡಿಂಗ್ ನೀಡಲಾಗುವುದು. ಸೆಪ್ಟೆಂಬರ್ 6ರಂದು ಪ್ರಾರಂಭವಾಗುವ ಪಿತ್ರಪಕ್ಷಕ್ಕೂ ಮೊದಲು ಈ ಸೇವೆಗಳನ್ನು ಬುಕ್ ಮಾಡಲು ಆನ್‌ಲೈನ್ ಪೋರ್ಟಲ್ ಇದೆ.

ಇದನ್ನೂ ಓದಿ: Pind Daan in Gaya: ಶ್ರೀರಾಮ ತನ್ನ ತಂದೆ ದಶರಥನಿಗೆ ಪಿಂಡದಾನ ಮಾಡಿದ ಸ್ಥಳ ಯಾವುದು? ಪಿತೃತೀರ್ಥ ಗಯಾದ ಸ್ಥಳ ಮಹಾತ್ಮೆ ಏನು?

ಆನ್‌ಲೈನ್ ಪಿಂಡ ದಾನ ಆಚರಣೆಯನ್ನು ಸುಗಮಗೊಳಿಸುವ ಕ್ರಮವನ್ನು ಅನೇಕರು ಟೀಕಿಸಿದ್ದಾರೆ. ವಿಎಚ್‌ಪಿ ಜಿಲ್ಲಾಧ್ಯಕ್ಷ ಮಣಿ ಲಾಲ್ ಬಾರಿಕ್ ಅವರು ಈ ನಿರ್ಧಾರವನ್ನು ಟೀಕಿಸಿದ್ದಾರೆ. “ಗರುಡ ಪುರಾಣದಂತಹ ಧಾರ್ಮಿಕ ಗ್ರಂಥಗಳು ಪಿಂಡ ದಾನವನ್ನು ಮೃತಪಟ್ಟವರ ಮಗ ಅಥವಾ ಅವರ ಪುರುಷ ವಂಶಸ್ಥರು ಮಾತ್ರ ಮಾಡಬಹುದು ಎಂದು ಷರತ್ತು ವಿಧಿಸುತ್ತದೆ. ವಿಷ್ಣುಪಾದ, ಫಾಲ್ಗು ಮತ್ತು ಅಕ್ಷಯ್ ವತ್‌ನಂತಹ ಪವಿತ್ರ ಬಲಿಪೀಠಗಳಲ್ಲಿ ಪಿಂಡದಾನದ ಆಚರಣೆಗಳನ್ನು ನಡೆಸಬೇಕು. ಅವುಗಳನ್ನು ದೂರದಿಂದಲೂ ನಡೆಸುವುದು ಧರ್ಮಗ್ರಂಥಗಳಿಗೆ ವಿರುದ್ಧವಾಗಿದೆ” ಎಂದು ಅವರು ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ