ಸಂಸತ್​​ನೊಳಗೆ ನುಗ್ಗಿದ 4 ಆರೋಪಿಗಳು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

|

Updated on: Dec 14, 2023 | 8:13 PM

ಸಂದರ್ಶಕರ ಪಾಸ್‌ಗಳನ್ನು ಪಡೆಯಲು ಸಾಧ್ಯವಾಗದೆ ಉಳಿದ ಇಬ್ಬರು ಸಂಸತ್ತಿನ ಹೊರಗೆ ಹೊಗೆ ಬಾಂಬ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು. ಎಲ್ಲಾ ನಾಲ್ವರ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಸಂಸತ್​​ನೊಳಗೆ ನುಗ್ಗಿದ 4 ಆರೋಪಿಗಳು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಸಂಸತ್ ಒಳಗೆ ನುಗ್ಗಿದ ಆರೋಪಿ
Follow us on

ದೆಹಲಿ ಡಿಸೆಂಬರ್ 14: ಭಾರೀ ಭದ್ರತಾ ಲೋಪದ (Parliament Security Breach) ನಂತರ ನಿನ್ನೆ (ಬುಧವಾರ) ಸಂಸತ್ತಿನಲ್ಲಿ ಬಂಧಿತರಾದ ನಾಲ್ವರನ್ನು ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಲೋಕಸಭೆಯೊಳಗೆ ಸಿಕ್ಕಿಬಿದ್ದಿರುವ ಸಾಗರ್ ಶರ್ಮಾ (Sagar Sharma) ಮತ್ತು ಡಿ ಮನೋರಂಜನ್ ಮತ್ತು ಸಂಸತ್ತಿನ ಹೊರಗೆ ಬಂಧಿತರಾದ ನೀಲಂ ದೇವಿ ಮತ್ತು ಅಮೋಲ್ ಶಿಂಧೆಯನ್ನು ವಿಚಾರಣೆಗೊಳಪಡಿಸಬೇಕಾಗಿದೆ ಎಂದು ದೆಹಲಿ ಪೊಲೀಸರು (Delhi Police) ಹೇಳಿದ್ದಾರೆ. ಇಬ್ಬರು ವ್ಯಕ್ತಿಗಳು ಲೋಕಸಭೆಗೆ ಪ್ರವೇಶಿಸಿ ಹೊಗೆಸೂಸುವ ಡಬ್ಬಿಗಳಿಂದ ಹಳದಿ ಹೊಗೆಯನ್ನು ಹೊರಹಾಕಿದ ನಂತರ ಐವರನ್ನು ಬಂಧಿಸಲಾಗಿತ್ತು.

ಲಕ್ನೋದ ಸಾಗರ್ ಶರ್ಮಾ ಮತ್ತು ಮೈಸೂರಿನ ಡಿ ಮನೋರಂಜನ್ ಅವರು ಸಂಸತ್ತಿನ ಒಳಗೆ ಹೊಗೆ ಬಾಂಬ್‌ ತೆಗೆದುಕೊಂಡು ಹೋಗಿದ್ದರು. ದಟ್ಟವಾದ ಹಳದಿ ಹೊಗೆಯು ಸ್ವಲ್ಪ ಸಮಯದವರೆಗೆ ಭಯವನ್ನು ಉಂಟುಮಾಡಿತು. ಸಂಸದರು ಮತ್ತು ಸಂಸತ್ತಿನ ಸಿಬ್ಬಂದಿ ಇಬ್ಬರನ್ನು ತಕ್ಷಣವೇ ಹಿಡಿದಿದ್ದಾರೆ.

ಸಂದರ್ಶಕರ ಪಾಸ್‌ಗಳನ್ನು ಪಡೆಯಲು ಸಾಧ್ಯವಾಗದೆ ಉಳಿದ ಇಬ್ಬರು ಸಂಸತ್ತಿನ ಹೊರಗೆ ಹೊಗೆ ಬಾಂಬ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು. ಎಲ್ಲಾ ನಾಲ್ವರ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಇವರು ಸಂಸತ್ ತಲುಪುವ ಮೊದಲು ಸಹಚರ ವಿಶಾಲ್ ಮನೆಯಲ್ಲಿ ಉಳಿದುಕೊಂಡಿದ್ದರು. ಆತನನ್ನು ಗುರುಗ್ರಾಮದಿಂದ ಬಂಧಿಸಲಾಯಿತು. ಪ್ರಮುಖ ಸಂಚುಕೋರ ಮತ್ತು ಆಪಾದಿತ ಮಾಸ್ಟರ್ ಮೈಂಡ್ ಲಲಿತ್ ಝಾ ಪರಾರಿಯಾಗಿದ್ದಾನೆ.

ಈ ಘಟನೆಯು ಭಯೋತ್ಪಾದಕ ದಾಳಿಯನ್ನು ಹೋಲುತ್ತದೆ ಎಂದು ಪೊಲೀಸರು ನ್ಯಾಯಾಲಯದಲ್ಲಿ ವಾದಿಸಿದ್ದು ಒಳನುಸುಳುವಿಕೆಯ ಉದ್ದೇಶವನ್ನು ಪ್ರಶ್ನಿಸಿದರು. ಘಟನೆಯ ಉದ್ದೇಶ ಕೇವಲ ಒಬ್ಬರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಥವಾ ಕೆಲವು ಪ್ರಮುಖ ಘಟನೆಗಳನ್ನು ನಡೆಸುವುದು ಈ ಸಂಪೂರ್ಣ ಘಟನೆಯಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆಯು ಭಾಗಿಯಾಗಿದೆಯೇ ಎಂದು ತನಿಖೆ ನಡೆಸಬೇಕು” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ: ಸಂಸತ್​​ನ ಒಳಗೆ ನುಗ್ಗಿದ ಯುವಕರ ಉದ್ದೇಶವೇನಿತ್ತು? ಪೊಲೀಸ್ ವಿಚಾರಣೆ ವೇಳೆ ಅವರು ಹೇಳಿದ್ದು ಹೀಗೆ

ಆರೋಪಿಗಳು ತಮ್ಮ ಶೂ ಒಳಗಹೊಗೆ ಡಬ್ಬಿಗಳಲ್ಲಿ ಕಳ್ಳಸಾಗಣೆ ಮಾಡಿರಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಈ ಯುವಕರು ಲಕ್ನೋದಿಂದ ಎರಡು ಜೊತೆ ಶೂಗಳನ್ನು ಖರೀದಿಸಿ ಇಲ್ಲಿಗೆ ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನಿಂದ ಡಬ್ಬಿಗಳನ್ನು ಖರೀದಿಸಲಾಗಿದೆ. ಆರೋಪಿಗಳು ಕೆಲವು ಕರಪತ್ರಗಳನ್ನು ಒಯ್ಯುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಮುಂದೆ ಹಾಜರುಪಡಿಸಿದ ಪೊಲೀಸರು 15 ದಿನಗಳ ಕಸ್ಟಡಿಗೆ ಕೋರಿದ್ದರು. ಆದರೆ ನ್ಯಾಯಾಧೀಶರು ಒಂದು ವಾರ ಕಾಲಾವಕಾಶ ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ