AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದರ ಬೆನ್ನಿಗೆ ಮತ್ತೊಂದು ಭಯಹುಟ್ಟಿಸುವ ಘಟನೆ; ಹೆದರಿ ಠಾಣೆಯಲ್ಲೇ ಶಾಂತಿಪೂಜೆ ಮಾಡಿಸಿದ ಪೊಲೀಸರು

ಇತ್ತೀಚೆಗೆ ಈ ಠಾಣೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾನ್​ಸ್ಟೆಬಲ್​ವೊಬ್ಬರಿಗೆ ಹಾವು ಕಚ್ಚಿತ್ತು. ಕಳೆದ ಈ ಠಾಣೆಯ ವ್ಯಾಪ್ತಿಯಲ್ಲೇ ಇಬ್ಬರು ಹುಡುಗಿಯರನ್ನು ಅಪಹರಣ ಮಾಡಲಾಗಿತ್ತು

ಒಂದರ ಬೆನ್ನಿಗೆ ಮತ್ತೊಂದು ಭಯಹುಟ್ಟಿಸುವ ಘಟನೆ; ಹೆದರಿ ಠಾಣೆಯಲ್ಲೇ ಶಾಂತಿಪೂಜೆ ಮಾಡಿಸಿದ ಪೊಲೀಸರು
ಪೊಲೀಸ್​ ಠಾಣೆಯಲ್ಲಿ ನಡೆದ ಶಾಂತಿ ಪೂಜೆ
TV9 Web
| Edited By: |

Updated on:Mar 09, 2022 | 11:36 AM

Share

ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯ ಅಲ್ಲಗಡ್ಡಾ ಪಟ್ಟಣದಲ್ಲಿರುವ ಪೊಲೀಸರು ಠಾಣೆಯಲ್ಲಿಯೇ ಭಾನುವಾರ ಶಾಂತಿಪೂಜೆ ಮಾಡಿಸಿದ್ದಾರೆ. ಈ ಪೂಜೆಯ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಠಾಣೆಯಲ್ಲಿ, ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಅಪಶಕುನದ, ಭಯಹುಟ್ಟಿಸುವ ಕೆಲವು ಘಟನೆಗಳು ನಡೆಯುತ್ತಿದೆ. ಅವುಗಳನ್ನು ತಡೆಗಟ್ಟುವ ಸಲುವಾಗಿ ಈ ಶಾಂತಿ ಪೂಜೆ ಮಾಡಿಸಲಾಗಿದೆ ಎಂದು ಹೇಳಲಾಗಿದೆ.  ಪುರೋಹಿತರನ್ನು ಠಾಣೆಗೆ ಕರೆಸಿ ಪೂಜೆ ಮಾಡಿಸಲಾಗಿದೆ. ಪುರೋಹಿತರು ಮಂತ್ರ ಹೇಳುತ್ತಿರುವ, ಪೊಲೀಸರು ಕೈಮುಗಿದು ನಿಂತಿರುವ, ಕೊನೆಯಲ್ಲಿ ತೀರ್ಥ-ಪ್ರಸಾದ ತೆಗೆದುಕೊಂಡ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು.

ಇತ್ತೀಚೆಗೆ ಈ ಠಾಣೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾನ್​ಸ್ಟೆಬಲ್​ವೊಬ್ಬರಿಗೆ ಹಾವು ಕಚ್ಚಿತ್ತು. ಕಳೆದ ಈ ಠಾಣೆಯ ವ್ಯಾಪ್ತಿಯಲ್ಲೇ ಇಬ್ಬರು ಹುಡುಗಿಯರನ್ನು ಅಪಹರಣ ಮಾಡಲಾಗಿತ್ತು. ರಸ್ತೆ ಅಪಘಾತವೂ ನಡೆದಿತ್ತು. ಪಡಕಂಡ್ಲ ಬಳಿ ವ್ಯಕ್ತಿಯೊಬ್ಬ ಹಲವು ಜನರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದ್ದ. ಈ ಪ್ರದೇಶಗಳಲ್ಲಿ ರಾಜಕೀಯ ದ್ವೇಷದ ಪ್ರಕರಣಗಳೂ ಹೆಚ್ಚುತ್ತಿವೆ.  ಹೀಗೆ ಕಳೆದ ಕೆಲವುದಿನಗಳಿಂದಲೂ ಒಂದಲ್ಲ ಒಂದು ಕೇಸ್​ಗಳು ನಡೆಯುತ್ತಲೇ ಇವೆ. ಅದೆಲ್ಲ ಪರಿಹಾರವಾಗಲಿ ಎಂಬ ಕಾರಣಕ್ಕೆ ಪೊಲೀಸರು ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಭಾಗದಲ್ಲಿ ಏನೋ ಅಗೋಚರ ಕೆಟ್ಟ ಶಕ್ತಿಯೊಂದು ಪ್ರಭಾವ ಬೀರಿದೆ ಎಂಬ ಮಾತುಗಳೂ ಹೆಚ್ಚಾಗಿದ್ದವು. ಹಾಗಾಗಿ ಸ್ಥಳೀಯ ಪುರೋಹಿತರನ್ನು ಠಾಣೆಗೆ ಕರೆಸಿ ಪೂಜೆ ನೆರವೇರಿಸಲಾಗಿದೆ. ಠಾಣೆಯ ಎಲ್ಲ ಸಿಬ್ಬಂದಿಯೂ ಇದರಲ್ಲಿ ಪಾಲ್ಗೊಂಡಿದ್ದರು. ಪೊಲೀಸ್​ ಸ್ಟೇಶನ್​ನಲ್ಲಿ ನಡೆದ ಪೂಜೆಯ ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಬಗ್ಗೆ ಹಿರಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

Puja in Andhra Pradesh

ಆಂಧ್ರಪ್ರದೇಶ ಠಾಣೆಯಲ್ಲಿ ಪೂಜೆ

ಇದನ್ನೂ ಓದಿ: ಮಂಡ್ಯ: ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ! ವೇದಿಕೆಯಲ್ಲಿ ಬಾಲಕನಿಗೆ ಮುತ್ತಿಟ್ಟ ಮಹಿಳಾ ನೃತ್ಯಗಾರರು

Published On - 11:32 am, Wed, 9 March 22

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು