Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ ಉದ್ಯೋಗ್ ಗ್ರೂಪ್ ವಿರುದ್ಧ ಮೆರವಣಿಗೆ ನಡೆಸಲು ಶಿವಸೇನಾಗೆ ಅನುಮತಿ ನಿರಾಕರಿಸಿದ ಪೊಲೀಸ್

ಧಾರಾವಿ ಪೊಲೀಸರು ಮೆರವಣಿಗೆಗೆ ಅನುಮತಿ ನೀಡಲು ತಮ್ಮ ಅಸಮರ್ಥತೆಯನ್ನು ಸ್ಪಷ್ಟವಾಗಿ ತೋರಿಸಿದ್ದಾರೆ. ಧಾರಾವಿ ಪೊಲೀಸರ ಈ ಪಾತ್ರದ ನಂತರ ಠಾಕ್ರೆ ಗುಂಪು ಇಕ್ಕಟ್ಟಿಗೆ ಸಿಲುಕಿದೆ ಎಂಬ ಚರ್ಚೆ ಶುರುವಾಗಿದೆ. ಧಾರಾವಿ ಪೊಲೀಸ್ ಠಾಣೆಯ ಡೆಪ್ಯುಟಿ ಕಮಿಷನರ್ ಮತ್ತು ಹಿರಿಯ ಅಧಿಕಾರಿಗಳು ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಲು ಠಾಕ್ರೆ ಗುಂಪಿಗೆ ಸಲಹೆ ನೀಡಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಷ್ಟೇ.

ಅದಾನಿ ಉದ್ಯೋಗ್ ಗ್ರೂಪ್ ವಿರುದ್ಧ ಮೆರವಣಿಗೆ ನಡೆಸಲು ಶಿವಸೇನಾಗೆ ಅನುಮತಿ ನಿರಾಕರಿಸಿದ ಪೊಲೀಸ್
ಉದ್ಧವ್ ಠಾಕ್ರೆ
Follow us
ರಶ್ಮಿ ಕಲ್ಲಕಟ್ಟ
|

Updated on: Dec 14, 2023 | 4:15 PM

ಮುಂಬೈ ಡಿಸೆಂಬರ್ 14: ಶಿವಸೇನಾ ಠಾಕ್ರೆ ಬಣದ  ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರು ಅದಾನಿ ಉದ್ಯೋಗ್ ಗ್ರೂಪ್ (Adani Group )ವಿರುದ್ಧ ಮೆರವಣಿಗೆಯ ಎಚ್ಚರಿಕೆ ನೀಡಿದ್ದಾರೆ. ಠಾಕ್ರೆ ಗುಂಪು ಕೂಡ ಈ ಮೆರವಣಿಗೆಗೆ ತಯಾರಿ ನಡೆಸುತ್ತಿದೆ. ಡಿಸೆಂಬರ್ 16 ರಂದು ಠಾಕ್ರೆ ಗುಂಪಿನಿಂದ ಈ ಮೆರವಣಿಗೆ ನಡೆಯಲಿದೆ. ಅದಕ್ಕಾಗಿ ಠಾಕ್ರೆ ಗುಂಪು ಧಾರಾವಿ (Dharavi) ಪೊಲೀಸರಿಂದ ಅನುಮತಿ ಕೋರಿತ್ತು. ಠಾಕ್ರೆ ಗುಂಪು ಅನುಮತಿಗಾಗಿ ಧಾರವಿ ಪೊಲೀಸರಿಗೆ ಪತ್ರ ಕಳುಹಿಸಿತ್ತು. ಆದರೆ ಧಾರಾವಿ ಪೊಲೀಸರು ಠಾಕ್ರೆ ಗುಂಪಿನ ಬೇಡಿಕೆಯನ್ನು ಒಪ್ಪಿಕೊಂಡಿಲ್ಲ. ಠಾಕ್ರೆ ಗುಂಪಿನ ಮೆರವಣಿಗೆಗೆ ಧಾರಾವಿ ಪೊಲೀಸರು ಅನುಮತಿ ನೀಡಿಲ್ಲ. ಮೆರವಣಿಗೆಯ ಅನುಮತಿಗಾಗಿ ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಕಳುಹಿಸಬೇಕು ಎಂದು ಠಾಕ್ರೆ ಪೊಲೀಸರು ಹೇಳಿದ್ದಾರೆ. ಧಾರವಿ ಪೊಲೀಸರ ಈ ಸಲಹೆಯನ್ನು ಅನುಸರಿಸಿ, ಠಾಕ್ರೆ ಗುಂಪು ಮುಂಬೈ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಿದೆ.

ಧಾರಾವಿ ಪೊಲೀಸರು ಮೆರವಣಿಗೆಗೆ ಅನುಮತಿ ನೀಡಲು ತಮ್ಮ ಅಸಮರ್ಥತೆಯನ್ನು ಸ್ಪಷ್ಟವಾಗಿ ತೋರಿಸಿದ್ದಾರೆ. ಧಾರಾವಿ ಪೊಲೀಸರ ಈ ಪಾತ್ರದ ನಂತರ ಠಾಕ್ರೆ ಗುಂಪು ಇಕ್ಕಟ್ಟಿಗೆ ಸಿಲುಕಿದೆ ಎಂಬ ಚರ್ಚೆ ಶುರುವಾಗಿದೆ. ಧಾರಾವಿ ಪೊಲೀಸ್ ಠಾಣೆಯ ಡೆಪ್ಯುಟಿ ಕಮಿಷನರ್ ಮತ್ತು ಹಿರಿಯ ಅಧಿಕಾರಿಗಳು ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಲು ಠಾಕ್ರೆ ಗುಂಪಿಗೆ ಸಲಹೆ ನೀಡಿದ್ದಾರೆ. ಅದರ ನಂತರ, ಠಾಕ್ರೆ ಗುಂಪು ಪೊಲೀಸ್ ಆಯುಕ್ತರಿಂದ ಅನುಮತಿ ಕೇಳಿದೆ. ಠಾಕ್ರೆ ಗುಂಪಿನ ಬೇಡಿಕೆಯ ಬಗ್ಗೆ ಮುಂಬೈ ಪೊಲೀಸ್ ಕಮಿಷನರ್ ದೇವೆನ್ ಭಾರ್ತಿ ಅವರ ನಿಲುವು ಏನು, ಅವರು ಮೆರವಣಿಗೆಗೆ ಅನುಮತಿ ನೀಡುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಿದ

ಏನಿದು ಪ್ರಕರಣ?

ಧಾರಾವಿಯಲ್ಲಿನ ಕೊಳಚೆ ಪ್ರದೇಶವನ್ನು ಪುನರಾಭಿವೃದ್ಧಿ ಮಾಡಲು ಸರ್ಕಾರ ನಿರ್ಧರಿಸಿದೆ. ಸ್ಲಂ ನಿವಾಸಿಗಳಿಗೆ ಕಟ್ಟಡದಲ್ಲಿ ಅವರ ಹಕ್ಕು ಮನೆ ಸಿಗುತ್ತದೆ. ಧಾರಾವಿಯ ಈ ಸ್ಲಂ ಪುನರಾಭಿವೃದ್ಧಿ ಯೋಜನೆಯ ಜವಾಬ್ದಾರಿಯನ್ನು ಅದಾನಿ ಉದ್ಯೋಗ್ ಗ್ರೂಪ್ ಪಡೆದುಕೊಂಡಿದೆ. ಈ ಯೋಜನೆಯಡಿ ಕಾಮಗಾರಿಯಲ್ಲಿ ಟಿಡಿಆರ್ ಹಗರಣ ನಡೆದಿದೆ ಎಂದು ಠಾಕ್ರೆ ಗುಂಪು ಆರೋಪಿಸಿದೆ. ಈ ಯೋಜನೆಯಿಂದ ಸ್ಥಳೀಯರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಠಾಕ್ರೆ ಗುಂಪು ಆರೋಪಿಸಿದೆ. ಆದ್ದರಿಂದ ಠಾಕ್ರೆ ಬಳಗದಿಂದ ಧಾರಾವಿಯಲ್ಲಿ ಮೆರವಣಿಗೆ ನಡೆಸಲಾಗುವುದು. ಠಾಕ್ರೆ ಗುಂಪಿನ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೇ ಈ ಮೆರವಣಿಗೆಯನ್ನು ಮುನ್ನಡೆಸಲಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಗಡಿ ಪ್ರವೇಶಕ್ಕೆ ಶಿವಸೇನೆ ಉದ್ಧವ್ ಠಾಕ್ರೆ ಬಣ ಯತ್ನ; ಪೊಲೀಸರ ವಶಕ್ಕೆ

ಉದ್ಧವ್ ಠಾಕ್ರೆ ಅವರ ಪಾತ್ರವೇನು?

ಉದ್ಧವ್ ಠಾಕ್ರೆ ತಮ್ಮ ಭಾಷಣದಲ್ಲಿ ವಿವರವಾದ ನಿಲುವನ್ನು ಮಂಡಿಸಿದ್ದರು. “ಹಲವು ಸ್ಥಳಗಳಲ್ಲಿ ಪುನರಾಭಿವೃದ್ಧಿ ಸಮಯದಲ್ಲಿ, ನಿವಾಸಿಗಳಿಗೆ 400 ರಿಂದ 500 ಚದರ ಅಡಿ ಮನೆಗಳನ್ನು ನೀಡಲಾಗುತ್ತದೆ. ಆದರೆ ಧಾರಾವಿ ನಾಗರಿಕರಿಗೆ ಕೇವಲ 300 ಚದರ ಅಡಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಧಾರಾವಿ ನಿವಾಸಿಗಳು 400 ರಿಂದ 500 ಚದರ ಅಡಿ ವಿಸ್ತೀರ್ಣದ ಮನೆಗಳನ್ನು ಪಡೆಯಬೇಕು. ಸಮೀಕ್ಷೆಯನ್ನು ಸರಿಯಾದ ರೀತಿಯಲ್ಲಿ ನಡೆಸಬೇಕು, ಧಾರಾವಿಕರಿಗೆ ಭಯ, ದಬ್ಬಾಳಿಕೆ ಅಥವಾ ಬಲವನ್ನು ತೋರಿಸಿ ಸಮೀಕ್ಷೆ ನಡೆಸಿದರೆ ಶಿವಸೇನಾ ಆ ಷಡ್ಯಂತ್ರವನ್ನು ವಿಫಲಗೊಳಿಸುತ್ತದೆ ಎಂದು ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ