AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್​ ಬಂಕ್​ನಲ್ಲಿ 2 ಸಾವಿರ ರೂ. ನೋಟು ಕೊಟ್ಟಿದ್ದಕ್ಕೆ ಗ್ರಾಹಕನ ಬೈಕ್​ನಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್ ಸಿಬ್ಬಂದಿ

ಈ ಹಿಂದೆ ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಕೂಡ ಜನರು ಗೊಂದಲಕ್ಕೀಡಾಗಿದ್ದರು. ಈಗ 2 ಸಾವಿರ ರೂ. ಮುಖಬೆಲೆಯ ನೋಟು ಬದಲಾವಣೆಗೆ ಕುರಿತು ಜನರು ಚಿಂತೆಗೀಡಾಗಿದ್ದಾರೆ.

ಪೆಟ್ರೋಲ್​ ಬಂಕ್​ನಲ್ಲಿ 2 ಸಾವಿರ ರೂ. ನೋಟು ಕೊಟ್ಟಿದ್ದಕ್ಕೆ ಗ್ರಾಹಕನ ಬೈಕ್​ನಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್ ಸಿಬ್ಬಂದಿ
ಪೆಟ್ರೋಲ್ ಬಂಕ್
ನಯನಾ ರಾಜೀವ್
|

Updated on: May 23, 2023 | 12:02 PM

Share

ಈ ಹಿಂದೆ ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಕೂಡ ಜನರು ಗೊಂದಲಕ್ಕೀಡಾಗಿದ್ದರು. ಅದಾದ ಬಳಿಕ ಯಾರ್ಯಾರದೋ ಮಾತು ಕೇಳಿ 10 ರೂ ನಾಣ್ಯವನ್ನೂ ಕೂಡ ಯಾರೂ ತೆಗೆದುಕೊಳ್ಳುತ್ತಿರಲಿಲ್ಲ. ಇದೀಗ 2 ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆಗೆ ಅವಕಾಶ ನೀಡಲಾಗಿದ್ದರೂ, ಕೆಲ ತಿಂಗಳುಗಳ ಕಾಲ ಬ್ಯಾಂಕ್​ಗಳಿಗೆ ನೋಟುಗಳನ್ನು ಜಮಾ ಮಾಡಲು ಕಾಲಾವಕಾಶವಿದ್ದರೂ ಕೂಡ 2 ಸಾವಿರ ರೂ ಮುಖಬೆಲೆಯ ನೋಟನ್ನು ಪಡೆಯಲು ಹಿಂದು ಮುಂದು ನೋಡುತ್ತಿದ್ದಾರೆ.

2000 ರೂ. ಮುಖಬೆಲೆಯ ನೋಟುಗಳ ಚಲಾವಣೆ, ವಿತರಣೆಯನ್ನ ಆರ್‌ಬಿಐ ಬಂದ್‌ ಮಾಡಿದೆ. ಇಂದಿನಿಂದ ಅಂದರೆ ಮೇ 23ರಿಂದ ಸೆಪ್ಟೆಂಬರ್ 30ರ ಒಳಗೆ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿ ನೀಡುವಂತೆ ಆರ್‌ಬಿಐ ಆದೇಶ ಹೊರಡಿಸಿದೆ. 2000 ರೂ. ಮುಖಬೆಲೆಯ ನೋಟುಗಳನ್ನು ಹೇಗೆ ವಾಪಾಸ್ ಮಾಡಬೇಕು ಎನ್ನುವುದಕ್ಕೆ ಈಗಾಗಲೇ ಆರ್‌ಬಿಐ ಕ್ಲಾರಿಟಿ ನೀಡಿದೆ. ನೋಟು ವಾಪಾಸ್ ಕೊಡಲು ಅರ್ಜಿಯನ್ನೂ ಕೂಡಾ ಬಿಡುಗಡೆ ಮಾಡಿದೆ.

ಪೆಟ್ರೋಲ್ ಬಂಕ್​ನಲ್ಲಿ ಗ್ರಾಹಕರೊಬ್ಬರು 200 ರೂ. ಮೌಲ್ಯದ ಪೆಟ್ರೋಲ್​ ಅನ್ನು ಬೈಕ್​ಗೆ ಹಾಕಿಸಿ ಪೆಟ್ರೋಲ್ ಬಂಕ್ ಸಿಬ್ಬಂದಿಗೆ 2 ಸಾವಿರ ರೂ ಕೈಗಿತ್ತಿದ್ದಾರೆ. ಅದಕ್ಕೆ ಸಿಬ್ಬಂದಿ ಗಾಡಿಯಿಂದ 200 ರೂ. ಮೌಲ್ಯದ ಪೆಟ್ರೋಲ್​ ಅನ್ನು ಹಿಂಪಡೆದು 2 ಸಾವಿರ ರೂ. ವಾಪಸ್ ಕೊಟ್ಟು ಕಳುಹಿಸಿದ್ದಾರೆ. ಸ್ಕೂಟಿ ಸವಾರರೊಬ್ಬರು ಸೋಮವಾರ ಬೆಳಗ್ಗೆ ಕೊತ್ವಾಲಿ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್​ಗೆ ಬಂದಿದ್ದರು.

ಮತ್ತಷ್ಟು ಓದಿ:2000 Rs Note Exchange: ಇಂದಿನಿಂದ 2000 ರೂ. ಮುಖಬೆಲೆ ನೋಟು ಬದಲಾವಣೆಗೆ ಅವಕಾಶ, ಪ್ರಕ್ರಿಯೆ ಹೇಗೆ? ಇಲ್ಲಿದೆ ವಿವರ

200 ರೂಪಾಯಿ ಮೌಲ್ಯದ ಪೆಟ್ರೋಲ್ ಹಾಕಿಸಿ 2000 ರೂಪಾಯಿ ನೋಟು ಕೊಟ್ಟರೂ ಪಂಪ್ ಸಿಬ್ಬಂದಿ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸರಕಾರ ಸೆ.30ರವರೆಗೆ 2000 ನೋಟು ಚಲಾವಣೆಯಲ್ಲಿದೆ ಎಂದು ಯುವಕ ಬಂಕ್ ಸಿಬ್ಬಂದಿಗೆ ತಿಳಿಸಿದರೂ, ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬೈಕ್​ನಿಂದ ಪೆಟ್ರೋಲ್ ಹಿಂದಕ್ಕೆ ತೆಗೆದಿದ್ದಾರೆ.

ಸ್ಟೇಷನ್ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಆಪರೇಟರ್ ಪಂಪ್‌ಗೆ ನೋಟಿಸ್ ಅಂಟಿಸಿದ್ದಾರೆ. ಎರಡು ಸಾವಿರಕ್ಕೆ ಚಿಲ್ಲರೆ ಇಲ್ಲ ಎಂದು ಬರೆಯಲಾಗಿದೆ. ಇದರ ಮೇಲೆ ಜನರು 2000 ರೂಪಾಯಿ ನೋಟುಗಳನ್ನು ಹಿಡಿದುಕೊಂಡು ಅಲೆದಾಡುವ ದೃಶ್ಯ ಕಂಡುಬರುತ್ತಿದೆ.

ಸಾಮಾನ್ಯ ನಾಗರಿಕರು ನಿತ್ಯ ಬ್ಯಾಂಕ್​ಗಳಿಗೆ ಹೋಗಲು ಸಾಧ್ಯವಾಗದು, ಆದರೆ ಪೆಟ್ರೋಲ್ ಬಂಕ್​, ಬಸ್, ಹೋಟೆಲ್​​ ಇನ್ನಿತರೆ ಸೇವೆಗಳಲ್ಲಿ ಸಿಬ್ಬಂದಿ ನಿತ್ಯ ಹಣವನ್ನು ಬ್ಯಾಂಕ್​ಗೆ ಜಮಾವಣೆ ಮಾಡುತ್ತಾರೆ, ಅವರು ಸೆಪ್ಟೆಂಬರ್​ವರೆಗೆ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಿದರೆ ಜನರಿಗೆ ಸ್ವಲ್ಪ ಅನುಕೂಲವಾಗಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು