AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸೆಂಬ್ಲಿ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕನಿಗೆ ಜೈಲು ಶಿಕ್ಷೆ ವಿಧಿಸಿದ ಪ್ರಜಾ ಪ್ರತಿನಿಧಿ ಕೋರ್ಟ್​

ಬಿಎ ಪದವೀಧರನಾದ ಪಾಯಂ ವೆಂಕಟೇಶ್ವರುಲು (payam venkateswarlu) 2018ರ ಅಸೆಂಬ್ಲಿ ಚುನಾವಣೆ ವೇಳೆ ಮತದಾರರಿಗೆ ಹಣದ ಆಮಿಷವೊಡ್ಡಿ ಮತ ಗಳಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ತೆಲಂಗಾಣದ ಪ್ರಜಾ ಪ್ರತಿನಿಧಿ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ಜುಲ್ಮಾನೆ ವಿಧಿಸಿದೆ.

ಅಸೆಂಬ್ಲಿ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕನಿಗೆ ಜೈಲು ಶಿಕ್ಷೆ ವಿಧಿಸಿದ ಪ್ರಜಾ ಪ್ರತಿನಿಧಿ ಕೋರ್ಟ್​
ಅಸೆಂಬ್ಲಿ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕನಿಗೆ ಜೈಲು ಶಿಕ್ಷೆ ವಿಧಿಸಿದ ಪ್ರಜಾ ಪ್ರತಿನಿಧಿ ಕೋರ್ಟ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 13, 2021 | 9:14 AM

ಚುನಾವಣೆ ಸಂದರ್ಭದಲ್ಲಿ ಮತ ಗಳಿಕೆಗಾಗಿ ಮತದಾರರಿಗೆ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕರೊಬ್ಬರಿಗೆ ಪ್ರಜಾ ಪ್ರತಿನಿಧಿ ಕೋರ್ಟ್ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಇದ್ಯಾವುದೊ ಮಹಾ ಸುದ್ದಿ! ಇದೆಲ್ಲಾ ಮಾಮೂಲೇ ಆಗಿದೆಯಲ್ಲಾ? ಎಂದು ಪ್ರಶ್ನಿಸುವವರಿಗೆ ತೆಲಂಗಾಣದ ನ್ಯಾಯಾಲಯವು ನಿನ್ನೆ ಗುರುವಾರ ಮಾದರಿಯ ಆದೇಶ ನೀಡಿದೆ. ವೋಟಿಗಾಗಿ ನೋಟು ರಾಜಕೀಯ ಪಕ್ಷಗಳ ಮೂಲ ಹಕ್ಕು ಎಂಬಂತಾಗಿರುವಾಗಿ ತೆಲಂಗಾಣದ ನ್ಯಾಯಾಲಯ ಅದೂ ಪ್ರಜಾ ಪ್ರತಿನಿಧಿ ಕೋರ್ಟ್ ಇಂತಹ ತೀರ್ಪು ನೀಡಿರುವುದು ಪ್ರಜಾಪ್ರಭುತ್ವದ ನಾಡಿನಲ್ಲಿ ಆಶಾಕಿರಣ ಮೂಡಿದೆ.

ಪ್ರಚಲಿತದಲ್ಲಿ ಚುನಾವಣೆಯೆಂದರೇನೆ ಹಣ, ಮದ್ಯಗಳ ಅಕ್ರಮಗಳು ಸರ್ವಾಂತರ್ಯಾಮಿ ಎಂಬುದು ಸರ್ವವಿಧಿತ. ಆದರೆ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಎಳ್ಳುನೀರು ಬಿಡುವ ಈ ಅಕ್ರಮಗಳನ್ನು ತೊಡೆದು ಹಾಕಲು ಸಾಧ್ಯವಿಲ್ಲ ಎಂಬಂತಾಗಿದೆ. ಆದರೆ ಕನಿಷ್ಠ ನಿಯಂತ್ರಿಸಬೇಕು ಎಂಬುದು ಎಲ್ಲರ ಹಕ್ಕೊತ್ತಾಯವಾಗಿದೆ. ಹೀಗಿರುವಾಗ ಸಾಕ್ಷಾತ್​ ಪ್ರಜಾ ಪ್ರತಿನಿಧಿ ಕೋರ್ಟ್ ಪ್ರಜಾಪ್ರಭುತ್ವದ ಆಶಯಕ್ಕೆ ಆಸರೆಯಾಗುವಂತಹ ತೀರ್ಪು ನೀಡಿದೆ.

ಚುನಾವಣೆ ವೇಳೆ ನೀರಿನಂತೆ ಹಣ ಖರ್ಚು ಮಾಡಿದ್ದ 48 ವರ್ಷ ವಯಸ್ಸಿನ, ಮಾಜಿ ಶಾಸಕರೊಬ್ಬರಿಗೆ ತೆಲಂಗಾಣದ ಪ್ರಜಾ ಪ್ರತಿನಿಧಿ ಕೋರ್ಟ್ ಶಿಕ್ಷೆ ವಿಧಿಸಿದೆ. ಪಾಯಂ ವೆಂಕಟೇಶ್ವರುಲು ಎಂಬಾತನೇ ಶಿಕ್ಷೆಗೆ ಗುರಿಯಾಗಿರುವ ಮಾಜಿ ಎಂಎಲ್​ಎ. ತೆಲಂಗಾಣ ವಿಧಾನಸಭೆಯ ವ್ಯಾಪ್ತಿಗೆ (Telangana Legislative Assembly) ಬರುವ ಖಮ್ಮಂ ಜಿಲ್ಲೆಯ (Khammam) ಎಸ್​ಟಿ (ST) ಮೀಸಲು ಕ್ಷೇತ್ರವಾದ ಪಿನಪಾಕ ಅಸೆಂಬ್ಲಿ ಕ್ಷೇತ್ರದಲ್ಲಿ (Pinapaka Assembly constituency) ಈ ಅಕ್ರಮ ನಡೆದಿತ್ತು.

ಬಿಎ ಪದವೀಧರನಾದ ಪಾಯಂ ವೆಂಕಟೇಶ್ವರುಲು (payam venkateswarlu) 2018ರ ಅಸೆಂಬ್ಲಿ ಚುನಾವಣೆ ವೇಳೆ ಮತದಾರರಿಗೆ ಹಣದ ಆಮಿಷವೊಡ್ಡಿ ಮತ ಗಳಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ತೆಲಂಗಾಣದ ಪ್ರಜಾ ಪ್ರತಿನಿಧಿ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ಜುಲ್ಮಾನೆ ವಿಧಿಸಿದೆ. ಅಸೆಂಬ್ಲಿ ಚುನಾವಣೆ ವೇಳೆ ಮತದಾರರಿಗೆ ಹಣ ನೀಡಿದ್ದಾರೆ ಎಂಬ ಆರೋಪದ ಮೇಲೆ 2018ರಲ್ಲಿ ಅಶ್ವಾಪುರಂ ಪೊಲೀಸ್​ ಸ್ಟೇಷನ್​​ನಲ್ಲಿ ಪಾಯಂ ವೆಂಕಟೇಶ್ವರುಲು ವಿರುದ್ಧ ಕೇಸು ದಾಖಲಾಗಿತ್ತು. ಪ್ರಕರಣವನ್ನು ಆಲಿಸಿದ ಪ್ರಜಾ ಪ್ರತಿನಿಧಿ ಕೋರ್ಟ್ ಗುರುವಾರ ಶಿಕ್ಷೆ ವಿಧಿಸಿ, ಈ ಮಹತ್ವದ ತೀರ್ಪು ನೀಡಿದೆ.

ವಿಶ್ಲೇಷಣೆ | ಭ್ರಷ್ಟಾಚಾರ ವಿರೋಧಿ ಹೋರಾಟಗಳು ವಿಫಲವಾಗಲು ನಾವು ಹೇಗೆ ಕಾರಣ? (Pinapaka ex mla payam venkateswarlu jailed for distributing money during election)

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ