AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಹ್ಮದಾಬಾದ್​ಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ ನೀರಜ್​ ಚೋಪ್ರಾರನ್ನು ಸರಣಿ ಟ್ವೀಟ್​ ಮೂಲಕ ಹೊಗಳಿದ ಪ್ರಧಾನಿ ಮೋದಿ

ನೀರಜ್​ ಚೋಪ್ರಾ ಮಕ್ಕಳಿಗೆ ಶೇಕ್​ ಹ್ಯಾಂಡ್ ಮಾಡಿ, ಅವರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಡಿಡಿ ನ್ಯೂಸ್​​ ಶೇರ್​ ಮಾಡಿಕೊಂಡಿತ್ತು. ಅದನ್ನು ಕೂಡ ಪ್ರಧಾನಿ ಮೋದಿ ರೀಟ್ವೀಟ್​ ಮಾಡಿದ್ದಾರೆ.

ಅಹ್ಮದಾಬಾದ್​ಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ ನೀರಜ್​ ಚೋಪ್ರಾರನ್ನು ಸರಣಿ ಟ್ವೀಟ್​ ಮೂಲಕ ಹೊಗಳಿದ ಪ್ರಧಾನಿ ಮೋದಿ
ನೀರಜ್​ ಚೋಪ್ರಾ ಮತ್ತು ಪ್ರಧಾನಿ ಮೋದಿ
TV9 Web
| Updated By: Lakshmi Hegde|

Updated on: Dec 06, 2021 | 7:47 AM

Share

ಒಲಿಂಪಿಕ್ಸ್​​ನಲ್ಲಿ ಜಾವಲಿನ್​ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ನಿನ್ನೆ ಗುಜರಾತ್​​ನ ಅಹ್ಮದಾಬಾದ್​ನಲ್ಲಿರುವ ಸಂಸ್ಕಾರಧಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿಗೆ ಆಗಮಿಸಿದ್ದ ಸುಮಾರು 75 ಶಾಲೆಗಳ ಮಕ್ಕಳ ಬಳಿ ಸಂವಾದ ನಡೆಸಿದರು. ಹಾಗೇ, ಜಾವಲಿನ್​ ಎಸೆತದ ತರಬೇತಿ ಕೂಡ ನೀಡಿದರು. ಆಟಗಳನ್ನು ಆಡುವ ಮೂಲಕ ಸದಾ ಫಿಟ್​ ಆಗಿರಿ ಎಂಬ ಸಲಹೆಯನ್ನೂ ಕೊಟ್ಟರು.  ಇದೇವೇಳೆ ಮಕ್ಕಳೊಂದಿಗೆ ಸೇರಿ ಆರ್ಚರಿ, ವಾಲಿಬಾಲ್​, ಜಾವಲಿನ್​ ಎಸೆತದ ಆಟಗಳನ್ನು ಆಡಿದರು. 

ಹೀಗೆ ಸಂಸ್ಕಾರಧಾಮ ಭೇಟಿ ನೀಡಿ ಮಕ್ಕಳೊಂದಿಗೆ ಕಾಲ ಕಳೆದು, ಅವರೊಂದಿಗೆ ಸಂವಾದ ನಡೆಸಿದ ನೀರಜ್​ ಚೋಪ್ರಾರನ್ನು ಪ್ರಧಾನಿ ಮೋದಿ ಸರಣಿ ಟ್ವೀಟ್​ ಮೂಲಕ ಹೊಗಳಿದ್ದಾರೆ. ಚಿಕ್ಕ ಮಕ್ಕಳ ಬಳಿ ಹೋಗಿ, ಅವರಲ್ಲಿ ಆಟ ಮತ್ತು ಫಿಟ್ನೆಸ್​ ಅರಿವು ಮೂಡಿಸುವ ಮೂಲಕ ನೀರಜ್​ ಚೋಪ್ರಾ ಒಂದು ಒಳ್ಳೆಯ ಉಪಕ್ರಮ ತೆಗೆದುಕೊಂಡಿದ್ದಾರೆ. ಇಂಥ ಪ್ರಯತ್ನಗಳನ್ನು ಮಾಡಿದರೆ ಮಕ್ಕಳಲ್ಲಿ ಆಟ ಮತ್ತು ವ್ಯಾಯಾಮದ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಹಾಗೇ, ನಿನ್ನೆ ನೀರಜ್​ ಚೋಪ್ರಾ ತಾವು ಸಂಸ್ಕೃತಧಾಮಕ್ಕೆ ಭೇಟಿಕೊಟ್ಟಿದ್ದಾಗಿ ಮಾಡಿಕೊಂಡಿದ್ದ ಟ್ವೀಟ್​​ನ್ನೂ ರೀಟ್ವೀಟ್​ ಮಾಡಿಕೊಂಡಿದ್ದಾರೆ.

ಹಾಗೇ, ನೀರಜ್​ ಚೋಪ್ರಾ ಮಕ್ಕಳಿಗೆ ಶೇಕ್​ ಹ್ಯಾಂಡ್ ಮಾಡಿ, ಅವರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಡಿಡಿ ನ್ಯೂಸ್​​ ಶೇರ್​ ಮಾಡಿಕೊಂಡಿತ್ತು. ಅದನ್ನು ಕೂಡ ರೀಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಇದನ್ನು ನೋಡಿದರೆ ಖಂಡಿತ ನಿಮಗೆಲ್ಲರಿಗೂ ಸಂತೋಷವಾಗದೆ ಇರದು. ಇದೇ ಕ್ರಮ ಮುಂದುವರಿಸೋಣ ಮತ್ತು ನಮ್ಮ ಯುವಜನತೆ ಕ್ರೀಡೆಯಲ್ಲಿ ಮಿಂಚುವಂತೆ ಪ್ರೇರೇಪಿಸೋಣ ಎಂದಿದ್ದಾರೆ. ಹಾಗೇ, ನೀರಜ್​ ಚೋಪ್ರಾ ಸಣ್ಣ ಬಾಲಕನಿಗೆ ಜಾವಲಿನ್​ ಎಸೆತದ ಟ್ರೇನಿಂಗ್​ ಕೊಟ್ಟ ವಿಡಿಯೋವೊಂದನ್ನು ಸಂಸ್ಕಾರಧಾಮ ಶೇರ್​ ಮಾಡಿಕೊಂಡಿದ್ದು, ಅದನ್ನು ಕೂಡ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಅದ್ಭುತ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಯುವಜನರಿಗೆ ವ್ಯಾಯಾಮ ಚಟುವಟಿಕೆಗಳು ಮತ್ತು ಸಮತೋಲಿತ ಆಹಾರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರಧಾನಿ ಪ್ರಾರಂಭಿಸಿರುವ, ಯುವಜನರು, ಮಕ್ಕಳೊಂದಿಗೆ ಕ್ರೀಡಾಪಟುಗಳ ಸಂವಾದ ಕಾರ್ಯಕ್ರಮ ನೀರಜ್​ ಚೋಪ್ರಾ ಉದ್ಘಾಟಿಸಿದ್ದಾರೆ.  ನಂತರ ಟ್ವೀಟ್​ ಮಾಡಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಶ್ರೀ ವಿಷ್ಣುಸಹಸ್ರನಾಮದಲ್ಲಿ ಶ್ರೀ ರಾಮ ರಾಮ ರಾಮೇತಿ ಶ್ಲೋಕದ ಮಹಿಮೆ, ಇದೊಂದು ಮಂತ್ರ ಶ್ರೀ ವಿಷ್ಣುಸಹಸ್ರನಾಮಕ್ಕೆ ಸಮ ಹೇಗೆ?

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ