AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Gobind Singh’s Jayanti 2022: ಸಿಖ್​ ಸಮುದಾಯದವರಿಗೆ ಗುರು ಗೋವಿಂದ ಸಿಂಗ್​ ಜಯಂತಿ ಶುಭ ಕೋರಿದ ಪ್ರಧಾನಿ ಮೋದಿ

ಗುರು ಗೋವಿಂದ ಸಿಂಗ್​ ಜಯಂತಿಯನ್ನು ಸಿಖ್ಖರ ನಾನಾಕ್ಷಹಿ ಕ್ಯಾಲೆಂಡರ್​​​ ಆಧಾರದಲ್ಲಿ ಆಚರಿಸಲಾಗುತ್ತದೆ. ಇಂದು ಬರೀ ಭಾರತದಲ್ಲಿ ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಇರುವ ಎಲ್ಲ ಗುರುದ್ವಾರಗಳಲ್ಲೂ ಪ್ರಕಾಶ ಪರ್ವ ಆಚರಿಸುತ್ತಾರೆ.

Guru Gobind Singh's Jayanti 2022: ಸಿಖ್​ ಸಮುದಾಯದವರಿಗೆ ಗುರು ಗೋವಿಂದ ಸಿಂಗ್​ ಜಯಂತಿ ಶುಭ ಕೋರಿದ ಪ್ರಧಾನಿ ಮೋದಿ
ಗುರು ಗೋವಿಂದ್ ಸಿಂಗ್​
Follow us
TV9 Web
| Updated By: Lakshmi Hegde

Updated on:Jan 09, 2022 | 10:35 AM

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗುರು ಗೋವಿಂದ ಸಿಂಗ್​ ಜಯಂತಿ (Guru Gobind Singh’s jayanti)ನಿಮಿತ್ತ ಸಿಖ್​ ಸಮುದಾಯದವರಿಗೆ ಶುಭಕೋರಿದ್ದಾರೆ. ಗುರು ಗೋವಿಂದ್​ ಸಿಂಗ್​ ಅವರು ಸಿಖ್ಖರ 10ನೇ ಗುರು.  ಅವರ ಜೀವನ ಸಂದೇಶಗಳು ಲಕ್ಷಾಂತರ ಜನರಿಗೆ ಬಲ, ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೇ, 2017ರಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಗುರು ಗೋವಿಂದ್ ಸಿಂಗ್​ 350ನೇ ಪ್ರಕಾಶ ಪರ್ವದಲ್ಲಿ ತಾವು ಪಾಲ್ಗೊಂಡು, ಗುರುವಿಗೆ ನಮನ ಸಲ್ಲಿಸಿದ ಫೋಟೋಗಳನ್ನು ಶೇರ್​ ಮಾಡಿಕೊಂಡ ಪ್ರಧಾನಿ ಮೋದಿ, ಶ್ರೀ ಗುರು ಗೋವಿಂದ್​ ಜೀ ಅವರ ಪ್ರಕಾಶ ಪರ್ವದ ಶುಭ ಹಾರೈಕೆಗಳು. ಶ್ರೀ ಗುರುಗೋವಿಂದರ 350ನೇ ಪ್ರಕಾಶ ಉತ್ಸವ ಆಚರಿಸಲು ನಮ್ಮ ಸರ್ಕಾರಕ್ಕೆ ಅವಕಾಶ ಸಿಕ್ಕಿದ್ದು ತುಂಬ ಸಂತೋಷ ಕೊಟ್ಟಿದೆ  ಎಂದು ಹೇಳಿದ್ದಾರೆ.

ಗುರು ಗೋವಿಂದ ಸಿಂಗ್​ ಜಯಂತಿಯನ್ನು ಸಿಖ್ಖರ ನಾನಾಕ್ಷಹಿ ಕ್ಯಾಲೆಂಡರ್​​​ ಆಧಾರದಲ್ಲಿ ಆಚರಿಸಲಾಗುತ್ತದೆ. ಇಂದು ಬರೀ ಭಾರತದಲ್ಲಿ ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಇರುವ ಎಲ್ಲ ಗುರುದ್ವಾರಗಳಲ್ಲೂ ಪ್ರಕಾಶ ಪರ್ವ ಆಚರಿಸುತ್ತಾರೆ. ಇಂದು ಸಿಖ್​ ಸಮುದಾಯದವರು ಪರಸ್ಪರರಿಗೆ ಶುಭ ಹಾರೈಸಿಕೊಳ್ಳುತ್ತಾರೆ. ಗುರು ಗೋವಿಂದ್ ಸಿಂಗ್​ ಮಹಾನ್ ಹೋರಾಟಗಾರರು. ಭಾರತದಲ್ಲಿ ಮೊಘಲರ ಆಳ್ವಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಅವರು ಆಡಳಿತಗಾರರ ದೌರ್ಜನ್ಯದ ವಿರುದ್ಧ ಹೋರಾಡಿದ್ದರು. ಅದರೊಂದಿಗೆ ಕಾವ್ಯ, ತತ್ವಶಾಸ್ತ್ರಗಳ ಕಡೆಗೆ ಅಪಾರ ಒಲವು ಹೊಂದಿದ್ದರು. ಶಾಂತಿ ಮತ್ತು ಸಮಾನತೆಯನ್ನು ಬೋಧಿಸುವ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಜಾತಿ ವ್ಯವಸ್ಥೆ ಮತ್ತು ಭಾರತವನ್ನು ಹಿಂದಕ್ಕೆ ತಳ್ಳುವ ಇನ್ನಿತರ ಎಲ್ಲ ವ್ಯವಸ್ಥೆಗಳಿಗೂ ವಿರೋಧ ವ್ಯಕ್ತಪಡಿಸುತ್ತಿದ್ದರು.

ಇದನ್ನೂ ಓದಿ: SulliDeals ಸುಲ್ಲಿ ಡೀಲ್ಸ್ ಅಪ್ಲಿಕೇಶನ್ ಕ್ರಿಯೇಟರ್ ಓಂಕಾರೇಶ್ವರ ಠಾಕೂರ್ ಬಂಧನ

Published On - 10:33 am, Sun, 9 January 22

Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ