ಭಾರತವನ್ನು ಮನಸಾರೆ ಕೊಂಡಾಡಿ ಥ್ಯಾಂಕ್ಸ್ ಅಂತ ರಾಕ್ ಲೆಜೆಂಡ್ ಮಿಕ್ ಜೇಗರ್; ಕೂಡಲೇ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ

ಜೇಗರ್ ಗೆ ಕ್ರಿಕೆಟ್ ಅಂದರೆ ಭಯಂಕರ ಹುಚ್ಚು. ಭಾರತದಲ್ಲಿ ಈಗ ಕೊನೆ ಹಂತದಲ್ಲಿರುವ ಐಸಿಸಿ ವಿಶ್ವಕಪ್ 2023 ಟೂರ್ನಿಯಲ್ಲಿ ಇಗ್ಲೆಂಡ್-ಪಾಕಿಸ್ತಾನ್ ಮಧ್ಯೆ ಕೊಲ್ಕತ್ತಾದಲ್ಲಿ ನಡೆದ ಲೀಗ್ ಪಂದ್ಯವನ್ನು ವೀಕ್ಷಿಸಲು ಅವರು ಯುಕೆಯ ವಿಶೇಷ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು. ವಾಪಸ್ಸು ಹೋಗುವಾಗ ಒಂದು ಟ್ವೀಟ್ ಮಾಡಿರುವ ಮಿಕ್ ಭಾರತ ಮತ್ತು ಭಾರತದ ಜನತೆಗೆ ಧನ್ಯವಾದ ಸಲ್ಲಿಸಿದ್ದು ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.

ಭಾರತವನ್ನು ಮನಸಾರೆ ಕೊಂಡಾಡಿ ಥ್ಯಾಂಕ್ಸ್ ಅಂತ ರಾಕ್ ಲೆಜೆಂಡ್ ಮಿಕ್ ಜೇಗರ್; ಕೂಡಲೇ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ
ಮಿಕ್ ಜೇಗರ್, ಸಂಗೀತ ಲೋಕದ ದಿಗ್ಗಜ
Follow us
|

Updated on:Nov 18, 2023 | 3:12 PM

ನವದೆಹಲಿ: ಬ್ರಿಟನ್ ರಾಕ್ ದಂತಕಥೆ ಮಿಕ್ ಜೇಗರ್ (Mick Jagger) ಯಾರಿಗೆ ಗೊತ್ತಿಲ್ಲ? ಬ್ರಿಟನ್ ಸಾಮ್ರಾಜ್ಯದಿಂದ ಸರ್ ಗೌರವಕ್ಕೆ ಪಾತ್ರರಾಗಿರುವ 80-ವರ್ಷ ವಯಸ್ಸಿನ ಸರ್ ಫಿಲಿಪ್ ಮೈಕೆಲ್ ಜೇಗರ್; ಗಾಯಕ, ಗೀತೆ ರಚನೆಕಾರ, ನಟ, ನೃತ್ಯಪಟು, ಸಿನಿಮಾ ನಿರ್ಮಾಪಕ-ಎಲ್ಲವೂ ಆಗಿದ್ದಾರೆ. ವಿಶ್ವದಾದ್ಯಂತ ಸಂಗೀತ ಪ್ರೇಮಿಗಳನ್ನು ಹುಚ್ಚು ಹಿಡಿಸಿದ ‘ದಿ ರೋಲಿಂಗ್ ಸ್ಟೋನ್ಸ್’ (The rolling Stones) ರಾಕ್ ಬ್ಯಾಂಡ್ ಅನ್ನು ಸ್ಥಾಪಿಸಿದ್ದು ಇವರೇ. ಜೇಗರ್ ಗೆ ಕ್ರಿಕೆಟ್ ಅಂದರೆ ಭಯಂಕರ ಹುಚ್ಚು. ಭಾರತದಲ್ಲಿ ಈಗ ಕೊನೆ ಹಂತದಲ್ಲಿರುವ ಐಸಿಸಿ ವಿಶ್ವಕಪ್ 2023 ಟೂರ್ನಿಯಲ್ಲಿ ಇಗ್ಲೆಂಡ್-ಪಾಕಿಸ್ತಾನ್ ಮಧ್ಯೆ ಕೊಲ್ಕತ್ತಾದಲ್ಲಿ ನಡೆದ ಲೀಗ್ ಪಂದ್ಯವನ್ನು ವೀಕ್ಷಿಸಲು ಅವರು ಯುಕೆಯ ವಿಶೇಷ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು. ವಾಪಸ್ಸು ಹೋಗುವಾಗ ಒಂದು ಟ್ವೀಟ್ ಮಾಡಿರುವ ಮಿಕ್ ಭಾರತ ಮತ್ತು ಭಾರತದ ಜನತಗೆ ಧನ್ಯವಾದ ಸಲ್ಲಿಸಿದ್ದು ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಜೇಗರ್, ‘ಭಾರತಕ್ಕೆ ಧನ್ಯವಾದ ಮತ್ತು ನಮಸ್ತೆ, ದೈನಂದಿನ ಚಟುವಟಿಕೆಗಳಿಂದ ಮುಕ್ತನಾಗಿ ಭಾರತಕ್ಕೆ ಭೇಟಿ ನೀಡಿದ್ದು ನನ್ನಲ್ಲಿ ಅಪಾರ ಸಂತಸ ಮೂಡಿಸಿದೆ. ಎಲ್ಲರಿಗೆ ನನ್ನ ಪ್ರೀತಿಪೂರ್ವಕ ನಮನಗಳು,’ ಅಂತ ಹೇಳಿದ್ದಾರೆ. ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, ‘ಬದುಕಲ್ಲಿ ನಾವಂದುಕೊಂಡಿದ್ದೆಲ್ಲ ಯಾವಾಗಲೂ ಸಿಗಲ್ಲ, ಆದರೆ, ಭಾರತ ತನ್ನಲ್ಲಿಗೆ ಬರುವವರಿಗೆ ಸಾಂತ್ವನ ಮತ್ತು ಸಂತೃಪ್ತಿಯನ್ನು ಒದಗಿಸುವ ನಾಡಾಗಿದೆ. ನಮ್ಮ ದೇಶದ ಜನ ಮತ್ತು ಇಲ್ಲಿನ ಸಂಸ್ಕೃತಿ ನಿಮಗೆ ಸಂತೋಷ ನೀಡಿದ್ದು ಗೊತ್ತಾಗಿ ಬಹಳ ಖುಷಿಯಾಗಿದೆ. ಬರ್ತಾ ಇರಿ… ’ ಅಂತ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Sat, 18 November 23

ತಾಜಾ ಸುದ್ದಿ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ