ಭಾರತವನ್ನು ಮನಸಾರೆ ಕೊಂಡಾಡಿ ಥ್ಯಾಂಕ್ಸ್ ಅಂತ ರಾಕ್ ಲೆಜೆಂಡ್ ಮಿಕ್ ಜೇಗರ್; ಕೂಡಲೇ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ

ಜೇಗರ್ ಗೆ ಕ್ರಿಕೆಟ್ ಅಂದರೆ ಭಯಂಕರ ಹುಚ್ಚು. ಭಾರತದಲ್ಲಿ ಈಗ ಕೊನೆ ಹಂತದಲ್ಲಿರುವ ಐಸಿಸಿ ವಿಶ್ವಕಪ್ 2023 ಟೂರ್ನಿಯಲ್ಲಿ ಇಗ್ಲೆಂಡ್-ಪಾಕಿಸ್ತಾನ್ ಮಧ್ಯೆ ಕೊಲ್ಕತ್ತಾದಲ್ಲಿ ನಡೆದ ಲೀಗ್ ಪಂದ್ಯವನ್ನು ವೀಕ್ಷಿಸಲು ಅವರು ಯುಕೆಯ ವಿಶೇಷ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು. ವಾಪಸ್ಸು ಹೋಗುವಾಗ ಒಂದು ಟ್ವೀಟ್ ಮಾಡಿರುವ ಮಿಕ್ ಭಾರತ ಮತ್ತು ಭಾರತದ ಜನತೆಗೆ ಧನ್ಯವಾದ ಸಲ್ಲಿಸಿದ್ದು ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.

ಭಾರತವನ್ನು ಮನಸಾರೆ ಕೊಂಡಾಡಿ ಥ್ಯಾಂಕ್ಸ್ ಅಂತ ರಾಕ್ ಲೆಜೆಂಡ್ ಮಿಕ್ ಜೇಗರ್; ಕೂಡಲೇ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ
ಮಿಕ್ ಜೇಗರ್, ಸಂಗೀತ ಲೋಕದ ದಿಗ್ಗಜ
Follow us
|

Updated on:Nov 18, 2023 | 3:12 PM

ನವದೆಹಲಿ: ಬ್ರಿಟನ್ ರಾಕ್ ದಂತಕಥೆ ಮಿಕ್ ಜೇಗರ್ (Mick Jagger) ಯಾರಿಗೆ ಗೊತ್ತಿಲ್ಲ? ಬ್ರಿಟನ್ ಸಾಮ್ರಾಜ್ಯದಿಂದ ಸರ್ ಗೌರವಕ್ಕೆ ಪಾತ್ರರಾಗಿರುವ 80-ವರ್ಷ ವಯಸ್ಸಿನ ಸರ್ ಫಿಲಿಪ್ ಮೈಕೆಲ್ ಜೇಗರ್; ಗಾಯಕ, ಗೀತೆ ರಚನೆಕಾರ, ನಟ, ನೃತ್ಯಪಟು, ಸಿನಿಮಾ ನಿರ್ಮಾಪಕ-ಎಲ್ಲವೂ ಆಗಿದ್ದಾರೆ. ವಿಶ್ವದಾದ್ಯಂತ ಸಂಗೀತ ಪ್ರೇಮಿಗಳನ್ನು ಹುಚ್ಚು ಹಿಡಿಸಿದ ‘ದಿ ರೋಲಿಂಗ್ ಸ್ಟೋನ್ಸ್’ (The rolling Stones) ರಾಕ್ ಬ್ಯಾಂಡ್ ಅನ್ನು ಸ್ಥಾಪಿಸಿದ್ದು ಇವರೇ. ಜೇಗರ್ ಗೆ ಕ್ರಿಕೆಟ್ ಅಂದರೆ ಭಯಂಕರ ಹುಚ್ಚು. ಭಾರತದಲ್ಲಿ ಈಗ ಕೊನೆ ಹಂತದಲ್ಲಿರುವ ಐಸಿಸಿ ವಿಶ್ವಕಪ್ 2023 ಟೂರ್ನಿಯಲ್ಲಿ ಇಗ್ಲೆಂಡ್-ಪಾಕಿಸ್ತಾನ್ ಮಧ್ಯೆ ಕೊಲ್ಕತ್ತಾದಲ್ಲಿ ನಡೆದ ಲೀಗ್ ಪಂದ್ಯವನ್ನು ವೀಕ್ಷಿಸಲು ಅವರು ಯುಕೆಯ ವಿಶೇಷ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು. ವಾಪಸ್ಸು ಹೋಗುವಾಗ ಒಂದು ಟ್ವೀಟ್ ಮಾಡಿರುವ ಮಿಕ್ ಭಾರತ ಮತ್ತು ಭಾರತದ ಜನತಗೆ ಧನ್ಯವಾದ ಸಲ್ಲಿಸಿದ್ದು ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಜೇಗರ್, ‘ಭಾರತಕ್ಕೆ ಧನ್ಯವಾದ ಮತ್ತು ನಮಸ್ತೆ, ದೈನಂದಿನ ಚಟುವಟಿಕೆಗಳಿಂದ ಮುಕ್ತನಾಗಿ ಭಾರತಕ್ಕೆ ಭೇಟಿ ನೀಡಿದ್ದು ನನ್ನಲ್ಲಿ ಅಪಾರ ಸಂತಸ ಮೂಡಿಸಿದೆ. ಎಲ್ಲರಿಗೆ ನನ್ನ ಪ್ರೀತಿಪೂರ್ವಕ ನಮನಗಳು,’ ಅಂತ ಹೇಳಿದ್ದಾರೆ. ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, ‘ಬದುಕಲ್ಲಿ ನಾವಂದುಕೊಂಡಿದ್ದೆಲ್ಲ ಯಾವಾಗಲೂ ಸಿಗಲ್ಲ, ಆದರೆ, ಭಾರತ ತನ್ನಲ್ಲಿಗೆ ಬರುವವರಿಗೆ ಸಾಂತ್ವನ ಮತ್ತು ಸಂತೃಪ್ತಿಯನ್ನು ಒದಗಿಸುವ ನಾಡಾಗಿದೆ. ನಮ್ಮ ದೇಶದ ಜನ ಮತ್ತು ಇಲ್ಲಿನ ಸಂಸ್ಕೃತಿ ನಿಮಗೆ ಸಂತೋಷ ನೀಡಿದ್ದು ಗೊತ್ತಾಗಿ ಬಹಳ ಖುಷಿಯಾಗಿದೆ. ಬರ್ತಾ ಇರಿ… ’ ಅಂತ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Sat, 18 November 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ