AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi in Telangana: ಪ್ರತಿದಿನ ಸೇವಿಸುವ 2-3 ಕಿಲೋ ‘ನಿಂದನೆ’ಗಳೇ ನನಗೆ ಪೌಷ್ಟಿಕಾಂಶ; ಪ್ರಧಾನಿ ಮೋದಿ

ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ನೀವು ನನ್ನನ್ನು ನಿಂದಿಸಿ. ಬಿಜೆಪಿಯನ್ನು ಟೀಕಿಸಿ. ಆದರೆ, ತೆಲಂಗಾಣದ ಜನರನ್ನು ನಿಂದಿಸಿದರೆ ಅದಕ್ಕೆ ದೊಡ್ಡ ಬೆಲೆ ತೆರಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.

PM Modi in Telangana: ಪ್ರತಿದಿನ ಸೇವಿಸುವ 2-3 ಕಿಲೋ ‘ನಿಂದನೆ’ಗಳೇ ನನಗೆ ಪೌಷ್ಟಿಕಾಂಶ; ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿImage Credit source: ANI
TV9 Web
| Updated By: Ganapathi Sharma|

Updated on:Nov 12, 2022 | 6:21 PM

Share

ಬೇಗಂಪೇಟೆ: ತೆಲಂಗಾಣ ಜನ (Telangana) ಜನರನ್ನು ಆದ್ಯತೆಯಾಗಿಸಿಕೊಂಡ ರಾಜಕಾರಣವನ್ನು ಬಯಸುತ್ತಾರೆಯೇ ವಿನಃ ಕುಟುಂಬ ರಾಜಕಾರಣವನ್ನಲ್ಲ (dynastic politics) ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬೇಗಂಪೇಟೆಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಭ್ರಷ್ಟಾಚಾರ, ವಂಶಾಡಳಿತ ವಿಚಾರಗಳನ್ನು ಪ್ರಸ್ತಾಪಿಸಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K Chandrashekar Rao) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಅವರು ತೆಲಂಗಾಣದ ಹೆಸರು ಹೇಳಿಕೊಂಡು ಅಧಿಕಾರಕ್ಕೇರಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ತಕ್ಷಣ ತೆಲಂಗಾಣವನ್ನು ಅಭಿವೃದ್ಧಿಯಲ್ಲಿ ಹಿಂದಕ್ಕೆ ತಳ್ಳಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು.

ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೂ ಯಾಕೆ ನಿಮಗೆ ಸುಸ್ತಾಗುವುದಿಲ್ಲ ಎಂದು ಹಲವರು ಕೇಳುತ್ತಾರೆ. ನನಗೆ ಸುಸ್ತಾಗುವುದಿಲ್ಲ. ಯಾಕೆಂದರೆ, ಪ್ರತಿ ದಿನ 2-3 ಕಿಲೋಗಳಷ್ಟು ‘ನಿಂದನೆ’ಗಳನ್ನು ನಾನು ಸೇವಿಸುತ್ತೇನೆ. ಈ ನಿಂದನೆಗಳೇ ನನ್ನೊಳಗೆ ಪೋಷಕಾಂಶಗಳಾಗಿ ಪರಿವರ್ತೆಯಾಗುವಂತೆ ದೇವರು ನನಗೆ ಆಶೀರ್ವದಿಸಿದ್ದಾರೆ ಎಂದು ಟೀಕಾಕಾರರಿಗೆ ಮೋದಿ ತಿರುಗೇಟು ನೀಡಿದರು.

ತೆಲಂಗಾಣದ ಜನರನ್ನು ಟೀಕಿಸಬೇಡಿ

ನೀವು ಮೋದಿಯನ್ನು ನಿಂದಿಸಿ. ಬಿಜೆಪಿಯನ್ನು ಟೀಕಿಸಿ. ಆದರೆ, ತೆಲಂಗಾಣದ ಜನರನ್ನು ನಿಂದಿಸಿದರೆ ಅದಕ್ಕೆ ದೊಡ್ಡ ಬೆಲೆ ತೆರಬೇಕಾಗಲಿದೆ ಎಂದು ಮೋದಿ ಎಚ್ಚರಿಕೆ ನೀಡಿದರು. ಹತಾಶೆ, ಭಯ ಮತ್ತು ಮೂಢನಂಬಿಕೆಗಳಿಂದಾಗಿ ಕೆಲವರು ಮೋದಿಯನ್ನು ನಿಂದಿಸುಸುತ್ತಾರೆ. ತೆಲಂಗಾಣದ ಬಿಜೆಪಿ ಕಾರ್ಯಕರ್ತರಲ್ಲಿ ನಾನು ಕೇಳಿಕೊಳ್ಳುವುದಿಷ್ಟೇ, ಈ ತಂತ್ರಗಳಿಂದ ನೀವು ವಿಚಲಿತರಾಗಬಾರದು ಎಂದು ಮೋದಿ ಹೇಳಿದರು.

ಅಲ್ಲದೆ, ಕೇಂದ್ರದ ಯೋಜನೆಗಳನ್ನು ತೆಲಂಗಾಣದ ಟಿಆರ್​ಎಸ್ ಸರ್ಕಾರ ಜನರಿಗೆ ತಲುಪಿಸುತ್ತಿಲ್ಲ. ಕೇಂದ್ರದ ಯೋಜನೆಗಳ ಬಗ್ಗೆ ಮಾಹಿತಿ ಮುಚ್ಚಿಡಲು ಯತ್ನಿಸುತ್ತಿದೆ ಎಂದು ಪ್ರಧಾನಿ ದೂರಿದರು.

ತೆಲಂಗಾಣದಲ್ಲಿ ಬಿಜೆಪಿ ಅರಳಲಿದೆ; ಮೋದಿ

ಟಿಆರ್​​ಎಸ್​ ಪಕ್ಷದ ನಾಯಕರು ಜನರಿಗೆ ಅನ್ಯಾಯ ಮಾಡಿದ್ದಾರೆ. ಕತ್ತಲು ಹೆಚ್ಚಾದಾಗ ಕಮಲ ಅರಳಲು ಆರಂಭಿಸುತ್ತದೆ. ಬಿಜೆಪಿಯ ಶ್ರಮಜೀವಿ ಕಾರ್ಯಕರ್ತರಿಂದಾಗಿ ಕತ್ತಲು ಕರಗತೊಡಗಿದೆ. ಇತ್ತೀಚಿನ ಚುನಾವಣಾ ಫಲಿತಾಂಶದಿಂದ ಇದು ಸ್ಪಷ್ಟವಾಗಿದೆ. ತೆಲಂಗಾಣದಾದ್ಯಂತ ಬೆಳಕು ಉದಯಿಸಲಿದೆ. ಬೆಳಗಾಗುವ ಮುನ್ನವೇ ಕಮಲ ಅರಳುವುದನ್ನು ನೀವು ಕಾಣಬಹುದು. ಕಮಲ ಅರಳಲಿದೆ ಎಂಬುದನ್ನು ಉಪಚುನಾವಣೆಗಳು ತೋರಿಸಿವೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.

ಡಿಜಿಟಲ್ ವಹಿವಾಟಿನಿಂದ ಭ್ರಷ್ಟಾಚಾರಕ್ಕೆ ತಡೆ

ಡಿಜಿಟಲ್ ವಹಿವಾಟು ಹೆಚ್ಚಳಕ್ಕೆ ಸರ್ಕಾರ ಪ್ರೋತ್ಸಾಹ ನೀಡಿರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಗಮನಾರ್ಹ ಪ್ರಮಾಣದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ. ಆನ್​ಲೈನ್ ಮೂಲಕ ಪಾವತಿ ಮಾಡುವಾಗ ಭ್ರಷ್ಟಾಚಾರದ ಸಾಧ್ಯತೆಗಳು ಕಡಿಮೆಯಾಗುತ್ತವೆ. ಈ ರೀತಿಯ ವಹಿವಾಟು ಸರ್ಕಾರ ಮತ್ತು ಜನರ ನಡುವೆ ನೇರ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: Fact Check ನೋಟು ರದ್ದತಿಯಿಂದ ಸಂಕಷ್ಟಕ್ಕೊಳಗಾದ ಜನರನ್ನು ಗೇಲಿ ಮಾಡಿದ್ದಾರಾ ನರೇಂದ್ರ ಮೋದಿ; ಎಡಿಟ್ ಮಾಡಿದ ವಿಡಿಯೊ ವೈರಲ್

Published On - 4:17 pm, Sat, 12 November 22

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ