ಜಿ20 ಕೃಷಿ ಸಚಿವರ ಸಮಾವೇಶದಲ್ಲಿ ಜಾಗತಿಕ ಆಹಾರ ಭದ್ರತೆ ಕುರಿತು ಚರ್ಚೆಗೆ ಪ್ರಧಾನಿ ಮೋದಿ ಕರೆ

|

Updated on: Jun 16, 2023 | 1:34 PM

ದೇಶವು ನೈಸರ್ಗಿಕ ಕೃಷಿ ಮತ್ತು ತಂತ್ರಜ್ಞಾನ ಬೆಂಬಲಿತ ಕೃಷಿಯನ್ನು ಉತ್ತೇಜಿಸುತ್ತಿರುವಾಗಲೂ ಮೂಲಕ್ಕೆ ಹಿಂದಿರುಗಿ ಭವಿಷ್ಯದತ್ತ ಮುನ್ನಡೆಯುವ ಸಮ್ಮಿಳನವು ಭಾರತದ ನೀತಿಯಾಗಿದೆ ಎಂದು ಅವರು ಹೇಳಿದರು.

ಜಿ20 ಕೃಷಿ ಸಚಿವರ ಸಮಾವೇಶದಲ್ಲಿ ಜಾಗತಿಕ ಆಹಾರ ಭದ್ರತೆ ಕುರಿತು ಚರ್ಚೆಗೆ ಪ್ರಧಾನಿ ಮೋದಿ ಕರೆ
ನರೇಂದ್ರ ಮೋದಿ
Follow us on

ಹೈದರಾಬಾದ್: ಕೃಷಿ ಕ್ಷೇತ್ರವು (Agriculture Sector) ಜಾಗತಿಕವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಜಿ20 ಕೃಷಿ ಸಚಿವರ ಸಭೆಯಲ್ಲಿ (G20 Agri Ministers conference) ಜಾಗತಿಕ ಆಹಾರ ಭದ್ರತೆಯನ್ನು ಸಾಧಿಸಲು ಸಾಮೂಹಿಕ ಕ್ರಮವನ್ನು ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸಲು ಒತ್ತಾಯಿಸಿದರು. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಸಭೆಗೆ ವಿಡಿಯೊ ಸಂದೇಶದಲ್ಲಿ ಮೋದಿ, ಹವಾಮಾನ ಬದಲಾವಣೆಯು ಹೆಚ್ಚು ಹೆಚ್ಚು ಹವಾಮಾನ ವೈಪರೀತ್ಯಗಳನ್ನು ಉಂಟುಮಾಡುತ್ತಿದೆ ಮತ್ತು ಈ ಸವಾಲುಗಳನ್ನು ಜಾಗತಿಕ ದಕ್ಷಿಣವು ಹೆಚ್ಚಾಗಿ ಅನುಭವಿಸುತ್ತದೆ ಎಂದು ಹೇಳಿದರು.

ಜಾಗತಿಕವಾಗಿ, ಕೃಷಿ 2.5 ಶತಕೋಟಿ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಜಾಗತಿಕ ದಕ್ಷಿಣ ರಾಷ್ಟ್ರಗಳಲ್ಲಿ, ಕೃಷಿಯು ಜಿಡಿಪಿಯ ಸುಮಾರು 30 ಪ್ರತಿಶತ ಮತ್ತು 60 ಪ್ರತಿಶತದಷ್ಟು ಉದ್ಯೋಗಗಳನ್ನು ಹೊಂದಿದೆ. ಇಂದು ಈ ವಲಯವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ಪೂರೈಕೆ ಸರಪಳಿ ಅಡ್ಡಿಯು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಹದಗೆಟ್ಟಿದೆ ಎಂದು ಮೋದಿ ಹೇಳಿದ್ದಾರೆ.

ಹವಾಮಾನ ಬದಲಾವಣೆಯು ವಿಪರೀತ ಹವಾಮಾನ ಘಟನೆಗಳಿಗೆ ಕಾರಣವಾಗುತ್ತಿದೆ. ಇಂಥಾ ಸವಾಲುಗಳನ್ನು ಜಾಗತಿಕ ದಕ್ಷಿಣ ರಾಷ್ಟ್ರ ಹೆಚ್ಚು ಅನುಭವಿಸುತ್ತಿದೆ ಎಂದು ಮೋದಿ ಹೇಳಿದರು.


ದೇಶವು ನೈಸರ್ಗಿಕ ಕೃಷಿ ಮತ್ತು ತಂತ್ರಜ್ಞಾನ ಬೆಂಬಲಿತ ಕೃಷಿಯನ್ನು ಉತ್ತೇಜಿಸುತ್ತಿರುವಾಗಲೂ ಮೂಲಕ್ಕೆ ಹಿಂದಿರುಗಿ ಭವಿಷ್ಯದತ್ತ ಮುನ್ನಡೆಯುವ ಸಮ್ಮಿಳನವು ಭಾರತದ ನೀತಿಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮೋದಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಗಲಭೆಗಳ ಪ್ರಮಾಣದಲ್ಲಿ ತೀವ್ರ ಕುಸಿತ: ಎನ್‌ಸಿಆರ್‌ಬಿ ಡೇಟಾ

ಭೂಮಿ ತಾಯಿಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸಿಂಥೆಟಿಕ್ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೆ ದೇಶದಾದ್ಯಂತ ರೈತರು ನೈಸರ್ಗಿಕ ಕೃಷಿಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ