Assam Election 2021| ಅಸ್ಸಾಂ ಜನರಿಗೆ ಬೇಕಿರುವುದು ಶಾಂತಿ.. ಹಾಗಾಗಿ ಅವರ ಆದ್ಯತೆ ಎನ್​ಡಿಎ ಒಕ್ಕೂಟಕ್ಕೆ: ಪ್ರಧಾನಿ ಮೋದಿ

|

Updated on: Apr 03, 2021 | 4:15 PM

ಅಸ್ಸಾಂ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇದ್ದ ಹಲವು ಸಮಸ್ಯೆಗಳನ್ನು ನಿವಾರಿಸಲಾಗಿದೆ. ಉಳಿದವುಗಳನ್ನೂ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ನರೇಂದ್ರ ಮೋದಿ ಹೇಳಿದರು.

Assam Election 2021| ಅಸ್ಸಾಂ ಜನರಿಗೆ ಬೇಕಿರುವುದು ಶಾಂತಿ.. ಹಾಗಾಗಿ ಅವರ ಆದ್ಯತೆ ಎನ್​ಡಿಎ ಒಕ್ಕೂಟಕ್ಕೆ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ಅಸ್ಸಾಂ ಜನರು ಅಭಿವೃದ್ಧಿ, ಶಾಂತಿ, ಐಕ್ಯತೆ, ಸ್ಥಿರತೆಯನ್ನು ಬಯಸುತ್ತಿದ್ದಾರೆ. ಅವರಿಗೆ ಹಿಂಸೆ ಬೇಕಾಗಿಲ್ಲ. ಹೀಗಾಗಿ ಅವರು ಖಂಡಿತ ಎನ್​ಡಿಎ ಒಕ್ಕೂಟದ ಸರ್ಕಾರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ತಮುಲ್​​ಪುರದಲ್ಲಿ ಚನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಮೋದಿ, ಬಿಜೆಪಿ ಸರ್ಕಾರ ಯಾವುದೇ ತಾರತಮ್ಯ ಇಲ್ಲದೆ, ಪ್ರತಿಯೊಬ್ಬರಿಗಾಗಿ ಕೆಲಸ ಮಾಡುತ್ತಿದೆ. ಆದರೆ ಕೆಲವರು ಮತಕ್ಕಾಗಿ ದೇಶವನ್ನು ಒಡೆಯುತ್ತಿದ್ದಾರೆ. ದುರದೃಷ್ಟವೆಂದರೆ ಅದನ್ನೇ ಜಾತ್ಯತೀತತೆ ಎಂದೂ ಕರೆಯಲಾಗುತ್ತದೆ. ಬಿಜೆಪಿಗೆ ಕೋಮುವಾದಿ ಪಕ್ಷ ಎಂಬ ಹಣೆಪಟ್ಟಿ ಸಿಕ್ಕಿದೆ. ಈ ಜಾತ್ಯತೀತತೆ, ಕೋಮುವಾದಗಳೆಂಬ ಆಟ ದೇಶಕ್ಕೆ ಮಾರಕವಾಗುತ್ತಿದೆ ಎಂದು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಕಿವಿ ಮಾತೊಂದನ್ನು ಹೇಳಿದರು. ಈ ಬಾರಿ ಭಾರತ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಈ ಹೊತ್ತಲ್ಲಿ ನೀವು ಚಲಾಯಿಸುವ ಮತ, 100ನೇ ವರ್ಷದ ಸ್ವಾತಂತ್ರ್ಯೋತ್ಸವದ ವೇಳೆ ಅಸ್ಸಾಂನ ಅಭಿವೃದ್ಧಿಯನ್ನು ನಿರ್ಧಿಸುತ್ತದೆ. ಬಿಜೆಪಿಯ ರೆಸಲ್ಯೂಶನ್​ ಪತ್ರದಲ್ಲಿ ಅಸ್ಸಾಂ ಅಭಿವೃದ್ಧಿಗೆ ಸ್ಪಷ್ಟವಾದ ಮಾರ್ಗಸೂಚಿ ಇದೆ ಎಂದು ಮೋದಿ ಹೇಳಿದರು.

ಅಸ್ಸಾಂ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇದ್ದ ಹಲವು ಸಮಸ್ಯೆಗಳನ್ನು ನಿವಾರಿಸಲಾಗಿದೆ. ಉಳಿದವುಗಳನ್ನೂ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಹೇಳಿದ ಮೋದಿ, ಕಾಂಗ್ರೆಸ್​ನ ಮೈತ್ರಿ ಪಕ್ಷವಾದ ಎಐಯುಡಿಎಫ್​ ಸಂಸ್ಥಾಪಕ ಮತ್ತು ಸಂಸದ ಬದ್ರುದ್ದೀನ್​ ಅಜ್ಮಲ್ ಪುತ್ರ, ಅಬ್ದುರ್​ ರಹೀಂ ಮಾತಿಗೆ ಖಡಕ್​ ತಿರುಗೇಟು ನೀಡಿದರು. ಶುಕ್ರವಾರ ಮಾತನಾಡಿದ್ದ ಅಬ್ದುರ್​ ರಹೀಮ್​, ಈ ಬಾರಿ ಅಸ್ಸಾಂನಲ್ಲಿ ದಾಡಿ, ಲುಂಗಿ, ಟೋಪಿವಾಲಾಗಳು ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಹೇಳಿದರು. ಇಂದು ಅದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ, ಅಬ್ದುರ್​, ಅಸ್ಸಾಂ ಜನರಿಗೆ ಬಹುದೊಡ್ಡ ಅವಮಾನ ಮಾಡಿದ್ದಾರೆ. ಅಸ್ಸಾಂನ ಗೌರವ, ಘನತೆಗೆ ಅವಮಾನ ಮಾಡಿದ್ದನ್ನು ನಾನು ಸಹಿಸುವುದಿಲ್ಲ. ಈ ಧೋರಣೆಗೆ ಅಸ್ಸಾಮಿಗರು ಖಂಡಿತ ಕಟು ತಿರುಗೇಟು ನೀಡುತ್ತಾರೆ ಎಂದು ಹೇಳಿದರು. ಹಾಗೇ, ಅಸ್ಸಾಂನ ಉಗ್ರರಿಗೆ ಬಂದು ಶರಣಾಗುವಂತೆ ಕರೆ ಕೊಟ್ಟರು. ನೀವೂ ಮುಖ್ಯವಾಹಿನಿಗೆ ಬನ್ನಿ, ಆತ್ಮ ನಿರ್ಭರ ಅಸ್ಸಾಂ ನಿರ್ಮಾಣಕ್ಕಾಗಿ ದುಡಿಯಿರಿ ಎಂದರು.

ಇದನ್ನೂ ಓದಿ: Tamil Nadu Election 2021: ತಮಿಳುನಾಡಿನಲ್ಲಿ ಅಮಿತ್​ ಶಾ ಪ್ರಚಾರ; ಅಭಿವೃದ್ಧಿ ನಮ್ಮಿಂದ ಮಾತ್ರ ಸಾಧ್ಯವೆಂದ ಗೃಹ ಸಚಿವ

IPL 2021: ಡೆಲ್ಲಿ ಕ್ಯಾಪಿಟಲ್ಸ್​ಗೆ ಆಘಾತ! ಕೊರೊನಾಗೆ ತುತ್ತಾದ ಅಕ್ಷರ್​ ಪಟೇಲ್​.. ಆತಂಕದಲ್ಲಿ ಧವನ್, ಪಂತ್