AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶ: ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ್ದ ವ್ಯಕ್ತಿಗಳ ಆಸ್ತಿ ಧ್ವಂಸ

ಅಧಿಕಾರಿಗಳು ಸುಮಾರು 45 ಮನೆಗಳು ಮತ್ತು ಅಂಗಡಿಗಳ ಮೇಲೆ ಬುಲ್ಡೋಜರ್ ಓಡಿಸಿದ್ದು, ಸೋಮವಾರ ಸುಮಾರು 16 ಮನೆಗಳು ಮತ್ತು 29 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.

ಮಧ್ಯಪ್ರದೇಶ: ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ್ದ ವ್ಯಕ್ತಿಗಳ ಆಸ್ತಿ ಧ್ವಂಸ
ಮಧ್ಯಪ್ರದೇಶದಲ್ಲಿ ಕಲ್ಲುತೂರಾಟಗಾರರ ಆಸ್ತಿ ಧ್ವಂಸ ಮಾಡುತ್ತಿರುವುದು
TV9 Web
| Edited By: |

Updated on:Apr 12, 2022 | 8:27 PM

Share

ಖರಗೋನ್:  ಮಧ್ಯಪ್ರದೇಶದ (Madhya Pradesh) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ಸೂಚನೆ ಮೇರೆಗೆ ಜಿಲ್ಲಾಡಳಿತ ಮತ್ತು ಪೊಲೀಸರು ರಾಮನವಮಿ ಮೆರವಣಿಗೆ (Ram Navami) ಮೇಲೆ ದಾಳಿ ನಡೆಸಿದವರ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ. ಅಧಿಕಾರಿಗಳು ಸುಮಾರು 45 ಮನೆಗಳು ಮತ್ತು ಅಂಗಡಿಗಳ ಮೇಲೆ ಬುಲ್ಡೋಜರ್ ಓಡಿಸಿದ್ದು, ಸೋಮವಾರ ಸುಮಾರು 16 ಮನೆಗಳು ಮತ್ತು 29 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. ಇಂದೋರ್‌ನ ವಿಭಾಗೀಯ ಆಯುಕ್ತ ಪವನ್ ಶರ್ಮಾ, “ರಾಮ ನವಮಿ ಮೆರವಣಿಗೆಯಲ್ಲಿ ಕಲ್ಲು ತೂರಾಟಗಾರರ ಆಸ್ತಿಗಳನ್ನು ನೆಲಸಮ ಮಾಡಲು ಖರಗೋನ್ ಆಡಳಿತ ನಿರ್ಧರಿಸಿದೆ. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. 84 ಆರೋಪಿಗಳನ್ನು ಬಂಧಿಸಲಾಗಿದೆ. ಖರಗೋನ್ ನಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಹೇಳಿದ್ದಾರೆ.  ಮೋಹನ್ ಟಾಕೀಸ್ ಬಳಿಯ ನಾಲ್ಕು ಮನೆಗಳು ಮತ್ತು ಮೂರು ಅಂಗಡಿಗಳು, ಖಾಸ್ಖಾಸ್ ಬಡಿ ಪ್ರದೇಶದಲ್ಲಿ 12 ಮನೆಗಳು ಮತ್ತು 10 ಅಂಗಡಿಗಳು, ಔರಂಗಪುರ ಪ್ರದೇಶದಲ್ಲಿ ಮೂರು ಅಂಗಡಿಗಳು ಮತ್ತು ತಲಾಬ್ ಚೌಕ್‌ನಲ್ಲಿ 12 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. ಖರಗೋನ್​​ನ ಗಣೇಶ ದೇವಸ್ಥಾನದ ಬಳಿ ಸುಮಾರು 16 ಅಕ್ರಮ ನಿವೇಶನಗಳನ್ನು ನೆಲಸಮ ಮಾಡಲಾಗಿದೆ. ರಾಮನವಮಿ ಮೆರವಣಿಗೆ ವೇಳೆ ಜನರ ಗುಂಪು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಮೆರವಣಿಗೆಯ ಆರಂಭದಲ್ಲಿಯೇ ಕಲ್ಲು ತೂರಾಟ ಪ್ರಾರಂಭವಾಯಿತು, ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಸುಮಾರು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನರ ಗುಂಪೊಂದು ನಾಲ್ಕು ಮನೆಗಳಿಗೆ ಬೆಂಕಿ ಹಚ್ಚಿದ ನಂತರ, ಆಡಳಿತವು ತಲಾಬ್ ಚೌಕ್, ಗೌಶಾಲಾ ಮಾರ್ಗ್ ಮತ್ತು ಮೋತಿಪುರ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಿತು. ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಈ ಕೃತ್ಯವನ್ನು ಖಂಡಿಸಿದ್ದು, ಇದು ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಉಂಟಾದ ಹಾನಿಯನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: Bribe: ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಲಂಚ ರುಷುವತ್ತು ಕುರಿತು ಮಾಡಿದ್ದ ಗಂಭೀರ ಆರೋಪಗಳ ವಿವರ ಇಲ್ಲಿದೆ

ಇದನ್ನೂ ಓದಿ: ಈಶ್ವರಪ್ಪನನ್ನು ಕೂಡಲೇ ಮಂತ್ರಿ ಮಂಡಲದಿಂದ ವಜಾ ಮಾಡಿ ಬಂಧಿಸಿ: ರಣದೀಪ್ ಸುರ್ಜೇವಾಲ ಒತ್ತಾಯ

Published On - 2:27 pm, Tue, 12 April 22