AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಸ್ತೆ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನಿಗೆ ಸಹಾಯ ಮಾಡಿದ ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ

ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮದವರು ಚನ್ನಿ ಅವರನ್ನು ಹಿಂಬಾಲಿಸುತ್ತಿರುವಾಗ ಚನ್ನಿ ಬೈಕ್ ಸವಾರನ ಬಳಿಗೆ ಹೋಗುತ್ತಿರುವುದು ವಿಡಿಯೊದಲ್ಲಿದೆ. ಚೆನ್ನಾಗಿದ್ದೀರಾ ಎಂದು ಚನ್ನಿ ಬೈಕರ್‌ಗೆ ಕೇಳಿದ್ದು ಆಂಬ್ಯುಲೆನ್ಸ್ ಬಂದಾಗ ಅದನ್ನೇರಲು ಅವರಿಗೆ ಸಹಾಯ ಮಾಡುತ್ತಾರೆ.

Video: ರಸ್ತೆ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನಿಗೆ ಸಹಾಯ ಮಾಡಿದ ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ
ಪಂಜಾಬ್ ಸಿಎಂ ಚನ್ನಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jan 11, 2022 | 7:27 PM

Share

ಚಂಡೀಗಢ: ಪಂಜಾಬ್ (Punjab) ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ (Charanjit Singh Channi) ಸೋಮವಾರ ಚಂಡೀಗಢದಲ್ಲಿ (Chandigarh) ರಸ್ತೆ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ವಿಚಾರಿಸುವುದಕ್ಕಾಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ, ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದರು. ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮದವರು ಚನ್ನಿ ಅವರನ್ನು ಹಿಂಬಾಲಿಸುತ್ತಿರುವಾಗ ಚನ್ನಿ ಬೈಕ್ ಸವಾರನ ಬಳಿಗೆ ಹೋಗುತ್ತಿರುವುದು ವಿಡಿಯೊದಲ್ಲಿದೆ. ಚೆನ್ನಾಗಿದ್ದೀರಾ ಎಂದು ಚನ್ನಿ ಬೈಕರ್‌ಗೆ ಕೇಳಿದ್ದು ಆಂಬ್ಯುಲೆನ್ಸ್ ಬಂದಾಗ ಅದನ್ನೇರಲು ಅವರಿಗೆ ಸಹಾಯ ಮಾಡುತ್ತಾರೆ. ನಂತರ ಮುಖ್ಯಮಂತ್ರಿಗಳು ಬೈಕ್ ಸವಾರನ ಕೈ ಕುಲುಕಿ ತಮ್ಮ ಬೆಂಗಾವಲು ಪಡೆಯೊಂದಿಗೆ ಮರಳುತ್ತಿರುವುದು ವಿಡಿಯೊದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಜನವರಿ 5 ರಂದು ಚುನಾವಣೆಗೆ ಒಳಪಡುವ ರಾಜ್ಯಕ್ಕೆ ಭೇಟಿ ನೀಡಿದಾಗ ಅವರ ಭದ್ರತೆ ಲೋಪ ಬಗ್ಗೆ ಕೇಂದ್ರ ಮತ್ತು ಪಂಜಾಬ್ ಸರ್ಕಾರದ ನಡುವಿನ ರಾಜಕೀಯ ಜಟಾಪಟಿ ನಡುವೆಯೇ ಚನ್ನಿ ಅವರ ಸಹಾಯ ಮನೋಭಾವದ ವಿಡಿಯೊ ವೈರಲ್ ಆಗಿದೆ.

ಈಗ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಯಲಿರುವ ಈ ವಿಷಯವು ಕಳೆದ ಕೆಲವು ದಿನಗಳಿಂದ ರಾಜ್ಯ ಮತ್ತು ಕೇಂದ್ರದಲ್ಲಿ ಚರ್ಚಾ ವಿಷಯವಾಗಿದೆ. ಪ್ರಧಾನಿಯವರ ಪ್ರಯಾಣದ ಮಾರ್ಗದಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಪಂಜಾಬ್ ಸರ್ಕಾರವು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಕೇಂದ್ರವು ಆರೋಪಿಸಿದರೆ, ರಾಜ್ಯವು ಯೋಜನೆಗಳಲ್ಲಿ ಕೊನೆಯ ಕ್ಷಣದ ಬದಲಾವಣೆಯನ್ನು ಮಾಡಿದೆ ಮತ್ತು ಪ್ರಧಾನಿಯ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿತು.

ಭದ್ರತಾ ಉಲ್ಲಂಘನೆಯ ಘಟನೆಯ ಸ್ವಲ್ಪ ಸಮಯದ ನಂತರ, ಮುಖ್ಯಮಂತ್ರಿ ಚನ್ನಿ ಟಿವಿ ಸಂದರ್ಶನದಲ್ಲಿ ತಮ್ಮ ದಾರಿಯನ್ನು ತಡೆದ ಪ್ರತಿಭಟನಾಕಾರರನ್ನು ಭೇಟಿಯಾದರು, ಅವರ ಕುಂದುಕೊರತೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು ಮತ್ತು ನಂತರ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಈ ಕ್ರಮವು ತನ್ನ ಭದ್ರತಾ ಗ್ರಿಡ್‌ನ ಹೊರಗೆ ಹೆಜ್ಜೆ ಹಾಕುವ, ಜನರ ನಡುವೆ ಹೋಗಿ ಮತ್ತು ಅವರ ಮಾತುಗಳನ್ನು ಕೇಳುವ ರಾಜಕೀಯ ವ್ಯಕ್ತಿಯಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಒಂದು ಸ್ಪಷ್ಟ ಪ್ರಯತ್ನವಾಗಿದೆ. ನಿನ್ನೆಯ ಘಟನೆ ಅದೇ ಸಾಲಿನಲ್ಲಿ ಮತ್ತೊಂದು ಪುನರಾವರ್ತನೆಯಾಗಿ ಕಂಡುಬರುತ್ತದೆ.

ಈ ಹಿಂದೆ ನವವಿವಾಹಿತ ದಂಪತಿಯನ್ನು ಸ್ವಾಗತಿಸಲು ಚನ್ನಿ ತನ್ನ ಬೆಂಗಾವಲು ಪಡೆಯನ್ನು ನಿಲ್ಲಿಸಿದ ಮತ್ತು ಹಳ್ಳದಿಂದ ಹಸುವನ್ನು ರಕ್ಷಿಸುವ ಪ್ರಯತ್ನಗಳಲ್ಲಿ ತೊಡಗಿರುವ ವಿಡಿಯೊಗಳು ವೈರಲ್ ಆಗಿವೆ. ಸಾರ್ವಜನಿಕ ಸಂವಾದಗಳಿಂದಾಗಿ ಜನರು ಗುರುತಿಸಬಹುದಾದ ನಾಯಕನಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಒಂದು ಸ್ಪಷ್ಟ ಪ್ರಯತ್ನದಂತೆ ತೋರುತ್ತಿದೆ. ಇದರ ಹಿಂದಿರುವ ಒಂದು ಉದ್ದೇಶವೆಂದರೆ ಅಮರಿಂದರ್ ಸಿಂಗ್ ಅವರ ಅಧಿಕಾರಾವಧಿಯ ನಂತರ ಮುಖ್ಯಮಂತ್ರಿಗಳ ಕಚೇರಿಯನ್ನು ಪ್ರವೇಶಿಸಲು ಸಾಧ್ಯವಾಗುವಂತೆ ಮಾಡುವುದು ಎಂದು ಹೇಳಲಾಗುತ್ತಿದೆ.  ಸಾರ್ವಜನಿಕ ಸಂಪರ್ಕವು ಮುಖ್ಯ ವಿರೋಧ ಆಮ್ ಆದ್ಮಿ ಪಕ್ಷದ ರೀತಿಯನ್ನು ಅನ್ನು ಎದುರಿಸುವ ಗುರಿಯನ್ನು ಹೊಂದಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ: ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ