AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಕಾಯ್ದೆ ವಿರುದ್ಧ ‘ಸುಪ್ರೀಂ’ ಕದತಟ್ಟಲು ಪಂಜಾಬ್ ಸರ್ಕಾರ ನಿರ್ಧಾರ

ದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ಪಂಜಾಬ್ ಸರ್ಕಾರ ಇದೀಗ ಸುಪ್ರೀಂ ಕೋರ್ಟ್ ಮೊರೆಹೋಗಲು ನಿರ್ಧರಿಸಿದೆ. ‘ಸುಪ್ರೀಂ’ ಮೆಟ್ಟಿಲೇರಲು ಪಂಜಾಬ್ ಸರ್ಕಾರ ನಿರ್ಧಾರ ಕೈಗೊಂಡಿದ್ದು ಈ ಸಂಬಂಧ ನಾಳೆ ದೆಹಲಿಯ ವಕೀಲರ ಜತೆ ಚರ್ಚಿಸುವೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ. ಜೊತೆಗೆ, ಕೇಂದ್ರದ ಕೃಷಿ ಕಾಯ್ದೆಯನ್ನು ಜಾರಿ ಮಾಡದಿರಲು ಪಂಜಾಬ್ ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ. ಕೃಷಿ ರಾಜ್ಯಪಟ್ಟಿಯಲ್ಲಿ ಇರುವ ವಿಷಯ. ಹೀಗಾಗಿ, ಕೃಷಿ ಕ್ಷೇತ್ರದ ಬಗ್ಗೆ ಕೇಂದ್ರವು ಕಾಯ್ದೆ ರೂಪಿಸಲು ಸಾಧ್ಯವಿಲ್ಲ. […]

ಕೃಷಿ ಕಾಯ್ದೆ ವಿರುದ್ಧ ‘ಸುಪ್ರೀಂ’ ಕದತಟ್ಟಲು ಪಂಜಾಬ್ ಸರ್ಕಾರ ನಿರ್ಧಾರ
ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್
KUSHAL V
|

Updated on: Sep 28, 2020 | 12:51 PM

Share

ದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ಪಂಜಾಬ್ ಸರ್ಕಾರ ಇದೀಗ ಸುಪ್ರೀಂ ಕೋರ್ಟ್ ಮೊರೆಹೋಗಲು ನಿರ್ಧರಿಸಿದೆ. ‘ಸುಪ್ರೀಂ’ ಮೆಟ್ಟಿಲೇರಲು ಪಂಜಾಬ್ ಸರ್ಕಾರ ನಿರ್ಧಾರ ಕೈಗೊಂಡಿದ್ದು ಈ ಸಂಬಂಧ ನಾಳೆ ದೆಹಲಿಯ ವಕೀಲರ ಜತೆ ಚರ್ಚಿಸುವೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.

ಜೊತೆಗೆ, ಕೇಂದ್ರದ ಕೃಷಿ ಕಾಯ್ದೆಯನ್ನು ಜಾರಿ ಮಾಡದಿರಲು ಪಂಜಾಬ್ ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ. ಕೃಷಿ ರಾಜ್ಯಪಟ್ಟಿಯಲ್ಲಿ ಇರುವ ವಿಷಯ. ಹೀಗಾಗಿ, ಕೃಷಿ ಕ್ಷೇತ್ರದ ಬಗ್ಗೆ ಕೇಂದ್ರವು ಕಾಯ್ದೆ ರೂಪಿಸಲು ಸಾಧ್ಯವಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಇಂದು ಹುತಾತ್ಮ ಭಗತ್ ಸಿಂಗ್​ರ ಹುಟ್ಟೂರಿನಲ್ಲಿ ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಿಎಂ ಅಮರೀಂದರ್ ಸಿಂಗ್ ಧರಣಿ ನಡೆಸುತ್ತಿದ್ದಾರೆ. ಪಂಜಾಬ್​ನಲ್ಲಿ ಕೇಂದ್ರದ ವಿರುದ್ಧ ತೀವ್ರ ಪ್ರತಿಭಟನೆ ‌ನಡೆಯುತ್ತಿದೆ.