AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puri Rath Yatra 2021: ಕೊರೊನಾದ್ದೇ ಪ್ರತಾಪ… ಪುರಿ ಜಗನ್ನಾಥ ರಥ ಯಾತ್ರೆ ಈ ಬಾರಿಯೂ ಭಕ್ತರಿಲ್ಲದೆ ಭಣಗುಡಲಿದೆ!

coronavirus pandemic: ದೇವಸ್ಥಾನದ ಆಡಳಿತ ಸಮಿತಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಳೆದ ಬಾರಿ ಸೀಮಿತವಾಗಿ ರಥ ಯಾತ್ರೆ ನಡೆಸಿತ್ತು. ಈ ಬಾರಿಯೂ ಅದೇ ಜವಾಬ್ದಾರಿ ದೇವಸ್ಥಾನದ ಆಡಳಿತ ಸಮಿತಿ, ರಾಜ್ಯ ಸರ್ಕಾರದ ಮೇಲಿದೆ. ಹಾಗಾಗಿ ಈ ಬಾರಿಯೂ ಪುರಿ ಶ್ರೀ ಜಗನ್ನಾಥ ವಾರ್ಷಿಕ ರಥ ಯಾತ್ರೆ ಮೊಟಕುಗೊಳ್ಳಲಿದೆ.

Puri Rath Yatra 2021: ಕೊರೊನಾದ್ದೇ ಪ್ರತಾಪ... ಪುರಿ ಜಗನ್ನಾಥ ರಥ ಯಾತ್ರೆ ಈ ಬಾರಿಯೂ ಭಕ್ತರಿಲ್ಲದೆ ಭಣಗುಡಲಿದೆ!
Puri Rath Yatra 2021: ಕೊರೊನಾದ್ದೇ ಪ್ರತಾಪ... ಪುರಿ ಜಗನ್ನಾಥ ರಥ ಯಾತ್ರೆ ಈ ಬಾರಿಯೂ ಭಕ್ತರಿಲ್ಲದೆ ಭಣಗುಡಲಿದೆ!
ಸಾಧು ಶ್ರೀನಾಥ್​
|

Updated on: Jun 11, 2021 | 11:15 AM

Share

ಪುರಿ ಶ್ರೀ ಜಗನ್ನಾಥ ವಾರ್ಷಿಕ ರಥ ಯಾತ್ರೆ ಈ ಬಾರಿಯೂ ನಡೆಯಲಿದೆ. ಆದರೆ ಕೊರೊನಾ ಆತಂಕದ ನಡುವೆ, ಭಕ್ತಗಣ ಇಲ್ಲದೆಯೇ ಜಗತ್ನಿಯಾಮಕ ದೇವರ ರಥ ಯಾತ್ರೆ ಸರಳವಾಗಿ ನಡೆಯಲಿದೆ. ಆಯ್ದ ಕೆಲವೇ ಕೆಲವು ಭಕ್ತರಿಗೆ, ದೇಗುಲದ ಆಡಳಿತ ವರ್ಗಕ್ಕೆ ಈ ಬಾರಿಯ ಜಗನ್ನಾಥ ರಥ ಯಾತ್ರೆ ಸೀಮಿತವಾಗಲಿದೆ. ರಥ ಎಳೆಯಲು ಎಲ್ಲರೂ ವ್ಯಾಕ್ಸಿನೇಶನ್​ ಹಾಕಿಸಿಕೊಂಡಿರಬೇಕು. ಮತ್ತು ಕೊರೊನಾ ನೆಗೆಟೀವ್​ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಕೊರೊನಾ ಕಾಟದಿಂದಾಗಿ ರಥ ಯಾತ್ರೆ ಸಾರ್ವತ್ರಿಕವಾಗಿ ನಡೆಯದಿರುವುದು ಇದು ಎರಡನೆಯ ವರ್ಷ.

ಈ ಬಗ್ಗೆ ಮಾಹಿತಿ ನೀಡಿರುವ ಒಡಿಶಾ ವಿಶೇಷ ಪರಿಹಾರ ಆಯುಕ್ತ ಪ್ರದೀಪ್​ ಕೆ ಜೇನಾ ಅವರು ಪುರಿ ಜಗನ್ನಾಥ ರಥ ಯಾತ್ರೆ (Puri Jagannath Rath Yatra 2021 ) ನಡೆಸುವ ಬಗ್ಗೆ ಕಳೆದ ವರ್ಷ ಸುಪ್ರೀಂ ಕೋರ್ಟ್​ ಮಾರ್ಗಸೂಚಿಯನ್ನು ನೀಡಿತ್ತು. ಈ ಬಾರಿಯೂ ಕೊರೊನಾ ಎರಡನೆಯ ಅಲೆಯಿಂದಾಗಿ ಅದೇ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಹೇಳಿದರು.

ರಾಜ್ಯದ ಇತರೆ ಭಾಗಗಳಲ್ಲಿಯೂ ರಥ ಯಾತ್ರೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಇತರೆ ದೇವಾಲಯಗಳಲ್ಲಿ ರಥ ಯಾತ್ರೆ ಜರುಗುತ್ತದಾದರೂ ಅದು ಸಾರ್ವಜನಿಕವಾಗಿ ಇರುವುದಿಲ್ಲ. ದೇವಸ್ಥಾನಕ್ಕೆ ಸೀಮಿತವಾಗಿ ನಡೆಯಲಿದೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Puri Rath Yatra 2021 will be held without devotees for second year in a row due to coronavirus pandemic 1

ರಾಜ್ಯದ ಇತರೆ ಭಾಗಗಳಲ್ಲಿಯೂ ರಥ ಯಾತ್ರೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ

ಇನ್ನು ಭದ್ರತೆಗಾಗಿ ನಿಯೋಜಿತರಾದ ಪೊಲೀಸ್​ ಸಿಬ್ಬಂದಿಗೂ ಇದೇ ನಿಯಮಗಳು ಅನ್ಚಯವಾಗಲಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಮತ್ತು ಕೊರೊನಾ ನೆಗೆಟೀವ್ ವರದಿ ಕಡ್ಡಾಯವಾಗಿ ಹೊಂದಿರಬೇಕು.

ಕಳೆದ ವರ್ಷ ಪುರಿಯಲ್ಲಿ ಶ್ರೀ ಜಗನ್ನಾಥ ವಾರ್ಷಿಕ ರಥ ಯಾತ್ರೆ ನಡೆಸುವ ಬಗ್ಗೆ ಜುಲೈ 22ರಂದು ಸುಪ್ರೀಂ ಕೋರ್ಟ್ ತನ್ನ ಹಿಂದಿನ​ ಆದೇಶವೊಂದನ್ನು ಮಾರ್ಪಾಡು ಮಾಡಿ, ರಥ ಯಾತ್ರೆ ಏರ್ಪಾಡುಗಳಿಗೆ ಅವಕಾಶ ನೀಡಿತ್ತು. ಆದರೆ ಆರೋಗ್ಯದ ದೃಷ್ಟಿಯಿಂದ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿತ್ತು.

ಅದರಂತೆ ದೇವಸ್ಥಾನದ ಆಡಳಿತ ಸಮಿತಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಳೆದ ಬಾರಿ ಸೀಮಿತವಾಗಿ ರಥ ಯಾತ್ರೆ ನಡೆಸಿತ್ತು. ಈ ಬಾರಿಯೂ ಅದೇ ಜವಾಬ್ದಾರಿ ದೇವಸ್ಥಾನದ ಆಡಳಿತ ಸಮಿತಿ, ರಾಜ್ಯ ಸರ್ಕಾರದ ಮೇಲಿದೆ. ಹಾಗಾಗಿ ಈ ಬಾರಿಯೂ ಪುರಿ ಶ್ರೀ ಜಗನ್ನಾಥ ವಾರ್ಷಿಕ ರಥ ಯಾತ್ರೆ ಮೊಟಕುಗೊಳ್ಳಲಿದೆ.

(Puri Jagannath Rath Yatra 2021 will be held without devotees for second year in a row due to coronavirus pandemic as per supreme court guidelines)

ಇದನ್ನೂಓದಿ:

ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ತಡೆ ಇದನ್ನೂಓದಿ: ಪುರಿ ಜಗನ್ನಾಥ ರಥಯಾತ್ರೆಗೂ ಕೊರೊನಾ ಕಂಟಕ? ಪರಂಪರೆಗೆ ಅಪಚಾರವಾಗುತ್ತದಾ?

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ