AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon 2021: ಈ ಬಾರಿ ಮುಂಗಾರು ಸೂಪರು; ಕೊರೊನಾದಿಂದ ನೆಲಕಚ್ಚಿರುವ ಆರ್ಥಿಕತೆಗೆ ಮುಂಗಾರು ಆಸರೆಯಾಗಬಲ್ಲದಾ?

Rural Economy: ಭರ್ಜರಿ ಮುಂಗಾರು ಅಷ್ಟೇ ಅಲ್ಲ; ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿ ದೀಪಾವಳಿ ವರೆಗೂ ಉಚಿತ ಆಹಾರ ಸಾಮಗ್ರಿ ವಿತರಿಸುವುದಾಗಿ ಪ್ರಕಟಿಸಿದ್ದಾರೆ. ಇದರಿಂದ ಸುಮಾರು 80 ಕೋಟಿ ಫಲಾನುಭವಿಗಳು ಆಹಾರ ಉತ್ಪನ್ನಗಳ ಹೊರತಾಗಿ ಇತರೆ ಸರಕುಗಳ ಖರೀದಿಗೆ ಮುಂದಾಗುತ್ತಾರೆ ಎಂಬುದು ಉತ್ಪಾದನಾ ಕಂಪನಿಗಳ ಎಣಿಕೆಯಾಗಿದೆ. ಇದೀಗ ದೇಶ ಅನ್​ ಲಾಕ್​​ ನತ್ತ ಮುಖ ಮಾಡಿರುವುದರಿಂದ ಆರ್ಥಿಕ ಚಟುವಟಿಕೆಗಳೂ ಸಹ ಗರಿಗೆದರಲಿವೆ ಎಂಬ ಆಶಾಭಾವ ಎಲ್ಲೆಡೆ ಮನೆ ಮಾಡಿವೆ.

Monsoon 2021: ಈ ಬಾರಿ ಮುಂಗಾರು ಸೂಪರು; ಕೊರೊನಾದಿಂದ ನೆಲಕಚ್ಚಿರುವ ಆರ್ಥಿಕತೆಗೆ ಮುಂಗಾರು ಆಸರೆಯಾಗಬಲ್ಲದಾ?
Monsoon 2021: ಈ ಬಾರಿ ಮುಂಗಾರು ಸೂಪರು: ಕೊರೊನಾದಿಂದ ನೆಲಕಚ್ಚಿರುವ ದೇಶದ ಆರ್ಥಿಕತೆಗೆ ಮುಂಗಾರು ಆಸರೆಯಾಗಬಲ್ಲದಾ?
ಸಾಧು ಶ್ರೀನಾಥ್​
|

Updated on: Jun 11, 2021 | 10:26 AM

Share

ದೆಹಲಿ: ಇಡೀ ಜಗತ್ತು ಸೇರಿದಂತೆ ಭಾರತದಲ್ಲಿಯೂ ಕೊರೊನಾ ಪೆಡಂಭೂತದಿಂದ ಆರ್ಥಿಕತೆ ನೆಲಕಚ್ಚಿರುವಾಗ ಮುಂಗಾರು ಮಳೆಯಾದರೂ ಆಸರೆಯಾಗಬಲ್ಲದಾ? ಎಂದು ರೈತಾಪಿ ವರ್ಗ ಸೇರಿದಂತೆ ಇಡೀ ದೇಶದ ಉದ್ಯಮ ತಲೆಯ ಮೇಲೆ ಕೈಹೊತ್ತು ಕುಳಿತು ಚಿಂತಿಸುತ್ತಿದೆ. ಮಹಾ ಸಾಂಕ್ರಾಮಿಕದ ಕಡುಕಷ್ಟಗಳನ್ನು ಭರ್ಜರಿ ಮುಂಗಾರು ನಿವಾರಿಸಬಲ್ಲದೇ? ಎಂದು ಉದ್ಯಮ ವಲಯ ಪ್ರಶ್ನಿಸುತ್ತಿದೆ.

ಭರ್ಜರಿ ಮುಂಗಾರು ಮಳೆಯಾಗುವ ನಿರೀಕ್ಷೆ ಅಪಾರವಾಗಿದೆ. ಭಾರತೀಯ ಹವಾಮಾನ ಇಲಾಖೆಯೂ (India Meteorological Department – IMD) ಈ ಬಾರಿ ಮುಂಗಾರು ಸೂಪರು ಅಂತಿದೆ. ಗ್ರಾಮೀಣ ಭಾರತದಲ್ಲಿ ಉತ್ತಮ ಮಳೆ-ಬೆಳೆಯಾಗಿ ಫಸಲು ಭರ್ಜರಿಯಾಗಲಿದೆ ಅನ್ನುತ್ತಿದೆ ಹವಾಮಾನ ವರದಿಗಳು. ಇದರಿಂದ ಗ್ರಾಮೀಣ ಭಾರತ ಸಂಪದ್ಭರಿತವಾಗಿ ನಳನಳಿಸಿದರೆ ಬೇಡಿಕೆ ಹೆಚ್ಚಾಗಲಿದೆ ಎಂಬ ಗ್ರೀನ್​ ಸಿಗ್ನಲ್​ ಕಂಪನಿಗಳಿಗೆ (Corporate India) ದೊರೆತಿದೆ. ಆದರೆ ಕೊರೊನಾದ ಎರಡು-ಮೂರು ಅಲೆಗಳೇ ಚಿಂತಾಜನಕಕವಾಗಿರುವುದು. ಕೊರೊನಾ ಎರಡಾಗಿ, ಮೂರನೆಯದು ಹೆಚ್ಚು ಕಾಟ ಕೊಟ್ಟರೆ ಗತಿಯೇನು ಎಂಬುದು ಉದ್ಯಮ ವಲಯದ ಚಿಂತೆಯನ್ನು ಹೆಚ್ಚಿಸಿದೆ.

ದೇಶದ ಅನೇಕ ಭಾಗಗಳಲ್ಲಿ ಅದಾಗಲೇ ಮೊದಲು ಚಂಡಮಾರುತಗಳು, ಅದರ ಜೊತೆಗೆ ಈಗ ಮುಂಗಾರು ಮಳೆ ಭರ್ಜರಿಯಾಗಿ ಸುರಿಯುತ್ತಿರುವುದರಿಂದ ಬಳಕೆ ಪ್ರಮಾಣ ಅಧಿಕಗೊಳ್ಳಲಿದೆ ಎಂದು ಕಂಪನಿಗಳು ಕಾದುಕುಳಿತಿವೆ. ಜೂನ್​ 1ರಿಂದ ಇದುವರೆಗೂ ವಾಡಿಕೆಗಿಂತ ಶೇ. 21 ರಷ್ಟು ಮಳೆಯಾಗಿದೆ. ಮುಂದೆಯೂ ವಾಡಿಕೆಯಂತೆ ಉತ್ತಮ ಮಳೆಯಾಗಲಿದೆ ಎಂದು IMD ಸೇರಿದಂತೆ ಖಾಸಗಿ Skymet ಹವಾಮಾನ ಅಂದಾಜುದಾರರು ಹೇಳಿದ್ದಾರೆ.

ಇದು ಗ್ರಾಮೀಣ ಭಾರತದ ಆರ್ಥಿಕತೆಗೆ ಚೇತೋಹಾರಿಯಾಗಿದೆ. ಅದರ ‘ಅರ್ಥ’ ಗ್ರಾಹಕ ಬಳಕೆ ಸರಕುಗಳು, ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್​​ಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂಬುದು ಉತ್ಪಾದನಾ ಕಂಪನಿಗಳು ಲೆಕ್ಕಾಚಾರವಾಗಿದೆ. ಇದನ್ನರಿತು ಅನೇಕ FMCG ಗ್ರಾಹಕ ಸರಕು ಕಂಪನಿಗಳು ಗ್ರಾಮೀಣ ಭಾಗಗಳತ್ತ ಹೆಜ್ಜೆ ಹಾಕಲು ಹಾತೊರೆಯುತ್ತಿವೆ. COVID-19 ಎರಡು ಮೂರು ಅಲೆಗಳು ಸ್ವಲ್ಪಮಟ್ಟಿಗೆ ಅಡಚಣೆಯೊಡ್ಡಿದರೂ ದೇಶದ ಗ್ರಾಮೀಣ ಭಾಗ ಕಂಪನಿಗಳಿಗೆ ಜೀವಸೆಲೆಯಾಗಲಿದೆ ಎನ್ನುತ್ತಿವೆ ಕಾರ್ಪೊರೇಟ್​ ವಲಯ.

ಬರೀ ಭರ್ಜರಿ ಮುಂಗಾರು ಅಷ್ಟೇ ಅಲ್ಲ; ಇತ್ತೀಚೆಗೆ ಸರ್ಕಾರಗಳು ಸಾಕಷ್ಟು ಆರ್ಥಿಕ ಪ್ಯಾಕೇಜ್​ಗಳನ್ನು ಘೋಷಿಸಿವೆ. ಇದೂ ಆರ್ಥಿಕ ಚೇತರಿಗೆ ನೆರವಾಗಲಿದೆ. ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿ ದೀಪಾವಳಿ ವರೆಗೂ ಉಚಿತ ಆಹಾರ ಸಾಮಗ್ರಿ ವಿತರಿಸುವುದಾಗಿ ಪ್ರಕಟಿಸಿದ್ದಾರೆ. ಇದರಿಂದ ಸುಮಾರು 80 ಕೋಟಿ ಫಲಾನುಭವಿಗಳು ಆಹಾರ ಉತ್ಪನ್ನಗಳ ಹೊರತಾಗಿ ಇತರೆ ಸರಕುಗಳ ಖರೀದಿಗೆ ಮುಂದಾಗುತ್ತಾರೆ ಎಂಬುದು ಉತ್ಪಾದನಾ ಕಂಪನಿಗಳ ಎಣಿಕೆಯಾಗಿದೆ. ಇದೀಗ ದೇಶ ಅನ್​ ಲಾಕ್​​ ನತ್ತ ಮುಖ ಮಾಡಿರುವುದರಿಂದ ಆರ್ಥಿಕ ಚಟುವಟಿಕೆಳೂ ಸಹ ಗರಿಗೆದರಲಿವೆ ಎಂಬ ಆಶಾಭಾವ ಎಲ್ಲೆಡೆ ಮನೆ ಮಾಡಿವೆ.

(good Monsoon 2021 to increase FMCG rural consumption despite coronavirus pandemic havoc)

Karnataka Weather: ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಒಂದು ವಾರ ಗುಡುಗು ಸಿಡಿಲು ಸಹಿತ ಮಳೆ