ರಾಜಕೀಯಕ್ಕಾಗಿ ದೇಶದ ಆಂತರಿಕ ವಿಷಯವನ್ನು ಎಳೆದು ತರುವುದು ನಾಚಿಕೆಗೇಡಿನ ಸಂಗತಿ: ಕಿಶನ್ ರೆಡ್ಡಿ

ಒಂದೇ ಧ್ವನಿಯಲ್ಲಿ ಮಾತನಾಡುವ ಬದಲು, ರಾಹುಲ್ ಗಾಂಧಿ ವಿದೇಶಿ ಘಟಕಗಳಿಗೆ ಪ್ರತಿಕ್ರಿಯಿಸಲು ಆದ್ಯತೆ ನೀಡುತ್ತಾರೆ ಮತ್ತು ಅದಕ್ಕಾಗಿ ಖುಷಿ ಪಡುತ್ತಾರೆ. ರಾಜಕೀಯಕ್ಕಾಗಿ ದೇಶದ ರಕ್ಷಣಾ ಭದ್ರತೆಯನ್ನು ಎಳೆದು ತರುವುದು ಹೆಚ್ಚು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ರಾಜಕೀಯಕ್ಕಾಗಿ ದೇಶದ ಆಂತರಿಕ ವಿಷಯವನ್ನು ಎಳೆದು ತರುವುದು ನಾಚಿಕೆಗೇಡಿನ ಸಂಗತಿ: ಕಿಶನ್ ರೆಡ್ಡಿ
ಕಿಶನ್ ರೆಡ್ಡಿ
ರಶ್ಮಿ ಕಲ್ಲಕಟ್ಟ

Updated on: Jul 15, 2023 | 6:29 PM

 ದೆಹಲಿ ಜುಲೈ 15:  ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ (Rahul Gandhi) ಪ್ರಧಾನಿ ಮೋದಿಯನ್ನು (PM Modi) ಟೀಕಿಸಿರುವ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿಶನ್ ರೆಡ್ಡಿ (G Kishan Reddy) ನಿಜಕ್ಕೂ ನಾಚಿಕೆಗೇಡಿನ ಟ್ವೀಟ್ ಎಂದು ಹೇಳಿದ್ದಾರೆ. ಭಾರತದ ಆಂತರಿಕ ವಿಷಯಗಳ ಬಗ್ಗೆ ಹೊರಗಿನವರು ಕಾಮೆಂಟ್ ಮಾಡಬಾರದು. ಒಂದೇ ಧ್ವನಿಯಲ್ಲಿ ಮಾತನಾಡುವ ಬದಲು, ರಾಹುಲ್ ಗಾಂಧಿ ವಿದೇಶಿ ಘಟಕಗಳಿಗೆ ಪ್ರತಿಕ್ರಿಯಿಸಲು ಆದ್ಯತೆ ನೀಡುತ್ತಾರೆ ಮತ್ತು ಅದಕ್ಕಾಗಿ ಖುಷಿ ಪಡುತ್ತಾರೆ. ರಾಜಕೀಯಕ್ಕಾಗಿ ದೇಶದ ರಕ್ಷಣಾ ಭದ್ರತೆಯನ್ನು ಎಳೆದು ತರುವುದು ಹೆಚ್ಚು ನಾಚಿಕೆಗೇಡಿನ ಸಂಗತಿಯಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅವರ ಹೃದಯದಲ್ಲಿ ಭಾರತದ ಹಿತಾಸಕ್ತಿ ಬಗ್ಗೆ ಒಲವು ಇದೆಯೇ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿ ರಾಹುಲ್ ಗಾಂಧಿ ಮಾಡಿದ ಟ್ವೀಟ್ ಗೆ ಕೇಂದ್ರ ಸಚಿವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.


ಮಣಿಪುರ ಉರಿಯುತ್ತಿದೆ. ಯುರೋಪಿಯನ್ ಒಕ್ಕೂಟ ಸಂಸತ್ತು ಭಾರತದ ಆಂತರಿಕ ವಿಷಯವನ್ನು ಚರ್ಚಿಸುತ್ತದೆ. ಪ್ರಧಾನಿ ಒಂದೇ ಒಂದು ಮಾತನ್ನು ಆಡಿಲ್ಲ. ಏತನ್ಮಧ್ಯೆ, ರಫೇಲ್​​ನಿಂದಾಗಿ ಅವರಿಗೆ ಬಾಸ್ಟಿಲ್ ಡೇ ಪರೇಡ್‌ಗೆ ಟಿಕೆಟ್ ಸಿಗುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ “ಮೌನ”  ಪ್ರಶ್ನಿಸಿ ರಾಹುಲ್ ಗಾಂಧಿಯವರು ಶನಿವಾರ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, “ಅವರು ಹತಾಶೆಗೊಂಡ ರಾಜವಂಶಸ್ಥ” ಎಂದಿದ್ದಾರೆ. ಸ್ಮೃತಿ ಇರಾನಿಗೆ ತಿರುಗೇಟು ನೀಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ, ನಿಮ್ಮದು “ಹತಾಶೆಗೊಂಡ ಆತ್ಮ” ಎಂದಿದ್ದಾರೆ.

ಇದನ್ನೂ ಓದಿ: ಫ್ರಾನ್ಸ್ ಭೇಟಿ ನೆನಪಿನಲ್ಲಿ ಉಳಿಯುವಂತದ್ದು; ಬಾಸ್ಟಿಲ್ ಡೇ ಪರೇಡ್‌ನ ವಿಡಿಯೊ ಟ್ವೀಟ್ ಮಾಡಿದ ಪ್ರಧಾನಿ ಮೋದಿ

ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ ಸ್ಮೃತಿ ಇರಾನಿ ರಾಹುಲ್ ಗಾಂಧಿ ಅವರು ಭಾರತದ ಆಂತರಿಕ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಹಸ್ತಕ್ಷೇಪವನ್ನು ಬಯಸುತ್ತಿದ್ದಾರೆ ಎಂದು ಆರೋಪಿಸಿದರು. ‘ಮೇಕ್ ಇನ್ ಇಂಡಿಯಾ’ ಮಹತ್ವಾಕಾಂಕ್ಷೆಯನ್ನು ಹುಸಿಗೊಳಿಸಿದ ಹತಾಶೆಗೊಂಡ ರಾಜವಂಶವು ನಮ್ಮ ಪ್ರಧಾನಿಗೆ ರಾಷ್ಟ್ರೀಯ ಗೌರವವನ್ನು ಪಡೆದಾಗ ಭಾರತವನ್ನು ಅಣಕಿಸುತ್ತದೆ ಎಂದು ಇರಾನಿ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us