ಉತ್ತರಾಖಂಡದಲ್ಲಿ ತಾತ್ಕಾಲಿಕ ಸೇತುವೆ ಕುಸಿತ; ಕೊಚ್ಚಿ ಹೋದ ಇಬ್ಬರು ಯಾತ್ರಾರ್ಥಿಗಳು

|

Updated on: Jul 05, 2024 | 10:18 PM

ಉತ್ತರಾಖಂಡದ ಗಂಗೋತ್ರಿ ಬಳಿ ತಾತ್ಕಾಲಿಕ ಸೇತುವೆ ಕುಸಿದು 30ರಿಂದ 40 ಯಾತ್ರಿಕರು ಸಿಲುಕಿಕೊಂಡಿದ್ದಾರೆ. ದೇವಗಡದಲ್ಲಿ ನದಿಯ ನೀರಿನಲ್ಲಿ ಹಠಾತ್ ಉಲ್ಬಣದಿಂದಾಗಿ ಇಬ್ಬರು ವ್ಯಕ್ತಿಗಳು ಕೊಚ್ಚಿಕೊಂಡು ಹೋಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) 16 ಯಾತ್ರಾರ್ಥಿಗಳನ್ನು ರಕ್ಷಿಸಿದೆ. ಉಳಿದವರನ್ನು ರಕ್ಷಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.

ಉತ್ತರಾಖಂಡದಲ್ಲಿ ತಾತ್ಕಾಲಿಕ ಸೇತುವೆ ಕುಸಿತ; ಕೊಚ್ಚಿ ಹೋದ ಇಬ್ಬರು ಯಾತ್ರಾರ್ಥಿಗಳು
ಉತ್ತರಾಖಂಡದಲ್ಲಿ ತಾತ್ಕಾಲಿಕ ಸೇತುವೆ ಕುಸಿತ
Follow us on

ಗಂಗೋತ್ರಿ: ಉತ್ತರಾಖಂಡದ ಗಂಗೋತ್ರಿ ಬಳಿ ತಾತ್ಕಾಲಿಕ ಸೇತುವೆ ಕುಸಿದು 30ರಿಂದ 40 ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ. ಉತ್ತರಾಖಂಡದ ದೇವಗಡದಲ್ಲಿ ನದಿಯ ನೀರಿನಲ್ಲಿ ಹಠಾತ್ ಉಲ್ಬಣದಿಂದಾಗಿ ಇಬ್ಬರು ವ್ಯಕ್ತಿಗಳು ಕೊಚ್ಚಿಕೊಂಡು ಹೋಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) 16 ಯಾತ್ರಾರ್ಥಿಗಳನ್ನು ರಕ್ಷಿಸಿದ್ದು, ಉಳಿದವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ.

ಕಾಲುದಾರಿಯಲ್ಲಿ ಗಂಗೋತ್ರಿಯಿಂದ ಸರಿಸುಮಾರು 8-9 ಕಿಮೀ ಮುಂದೆ ತಾತ್ಕಾಲಿಕ ಸೇತುವೆ ಕುಸಿದು 30-40 ಯಾತ್ರಿಕರು ಸಿಲುಕಿಕೊಂಡಿದ್ದರು. ಇಂದು ದೇವಗಡದಲ್ಲಿ ಹಠಾತ್ ನದಿ ನೀರಿನ ಹರಿವಿನಿಂದ ಇಬ್ಬರು ವ್ಯಕ್ತಿಗಳು ಕೊಚ್ಚಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Assam Flood: ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ವ್ಯಕ್ತಿ

ಈ ಬಗ್ಗೆ ಮಾಹಿತಿ ಪಡೆದ ನಂತರ, ಎಸ್‌ಡಿಆರ್‌ಎಫ್ ತಂಡವು ತಕ್ಷಣವೇ ಸ್ಥಳಕ್ಕೆ ತಲುಪಿತು. ಸಿಕ್ಕಿಬಿದ್ದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ನದಿ ದಾಟಲು ಸಹಾಯ ಮಾಡಿತು. ಇದುವರೆಗೆ 16 ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದ್ದು, ಇತರರ ರಕ್ಷಣೆಗಾಗಿ ಪ್ರಯತ್ನ ಮುಂದುವರಿದಿದೆ.

ಎಸ್‌ಡಿಆರ್‌ಎಫ್ ಈ ಹಿಂದೆ ಡೆಹ್ರಾಡೂನ್‌ನ ರಾಬರ್ಸ್ ಗುಹೆ (ಗುಚುಪಾನಿ) ಬಳಿಯ ದ್ವೀಪದಲ್ಲಿ ಸಿಲುಕಿದ್ದ 10 ಯುವಕರನ್ನು ಗುರುವಾರ ರಕ್ಷಿಸಿತ್ತು. ಹರಿದ್ವಾರದಲ್ಲಿ ಇತ್ತೀಚಿನ ಭಾರೀ ಮಳೆಯಿಂದಾಗಿ ಭಾರೀ ಪ್ರವಾಹ ಉಂಟಾಗಿದೆ. ಗಂಗಾ ನದಿಯ ಮಟ್ಟವು ಏರುತ್ತಿದೆ, ರಸ್ತೆಗಳು ಮತ್ತು ವಾಹನಗಳು ಮುಳುಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ