AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಥಳೀಯ ಸಂಸ್ಥೆಯ ಅಧಿಕಾರಿಗಳೊಂದಿಗೆ ಜಗಳ; ಜೈಪುರ್ ಮೇಯರ್ ಅಮಾನತು

Jaipur Mayor Somya Gurjar: ಕಸ ಸಂಗ್ರಹಣೆಗೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಸಿಂಗ್‌ ದಿಯೊ ಮತ್ತು ಗುರ್ಜರ್ ನಡುವೆ ಜಗಳ ನಡೆದಿದೆ. ಇಲ್ಲೀಗ ಕಸ ಸಂಗ್ರಹಣೆಯ ಕಾರ್ಯವನ್ನು ನಿರ್ವಹಿಸುವ ಬಿವಿಜಿ ಮುಷ್ಕರದಲ್ಲಿದೆ.

ಸ್ಥಳೀಯ ಸಂಸ್ಥೆಯ ಅಧಿಕಾರಿಗಳೊಂದಿಗೆ ಜಗಳ; ಜೈಪುರ್ ಮೇಯರ್ ಅಮಾನತು
ಸೋಮ್ಯಾ ಗುರ್ಜರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 08, 2021 | 12:08 PM

ಜೈಪುರ್: ರಾಜಸ್ಥಾನ ಸರ್ಕಾರ ಭಾನುವಾರ ತಡರಾತ್ರಿ ಜೈಪುರ ಮುನ್ಸಿಪಲ್ ಕಾರ್ಪೊರೇಶನ್ ಗ್ರೇಟರ್ ಮೇಯರ್ ಸೋಮ್ಯಾ ಗುರ್ಜರ್ ಅವರನ್ನು ಅಮಾನತುಗೊಳಿಸಿದೆ. ಗುರ್ಜರ್ ಅವರ ಸಮ್ಮುಖದಲ್ಲಿ ಜೆಎಂಸಿ-ಗ್ರೇಟರ್ ಕಮಿಷನರ್ ಯಜ್ಞ ಮಿತ್ರ ಸಿಂಗ್‌ ದಿಯೊ ಅವರನ್ನು ಮೂವರು ಕೌನ್ಸಿಲರ್‌ಗಳು ಶುಕ್ರವಾರ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕಸ ಸಂಗ್ರಹಣೆಗೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಸಿಂಗ್‌ ದಿಯೊ ಮತ್ತು ಗುರ್ಜರ್ ನಡುವೆ ಜಗಳ ನಡೆದಿದೆ. ಇಲ್ಲೀಗ ಕಸ ಸಂಗ್ರಹಣೆಯ ಕಾರ್ಯವನ್ನು ನಿರ್ವಹಿಸುವ ಬಿವಿಜಿ ಮುಷ್ಕರದಲ್ಲಿದೆ.

ಗುರ್ಜರ್ ಅವರು ಸಿಂಗ್‌ ದಿಯೊ ಅವರನ್ನು ಮಾತಿನಿಂದ ನಿಂದಿಸಿದ್ದಾರೆ, ಅವರ ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅಡ್ಡಿಯಾಗಿದ್ದಾರೆ. ಗುರ್ಜರ್ ಸಮ್ಮುಖದಲ್ಲಿಯೇ ಮೂರು ಕೌನ್ಸಿಲರ್‌ಗಳು ಆಯುಕ್ತರ ಮೇಲೆ ನಿಂದನೆ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಇಲಾಖೆಗೆ ದೂರು ಬಂದಿದೆ ಎಂದು ಸ್ಥಳೀಯ ಸಂಸ್ಥೆಗಳ ನಿರ್ದೇಶಕ ದೀಪಕ್ ನಂದಿ ಭಾನುವಾರ ನೀಡಿರುವ ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

2009 ರ ರಾಜಸ್ಥಾನ ಪುರಸಭೆಯ ಕಾಯ್ದೆಯ ಸೆಕ್ಷನ್ 39 ರ ಅಡಿಯಲ್ಲಿ ಗುರ್ಜರ್ ತಪ್ಪಿತಸ್ಥರೆಂದು ಕಂಡುಬಂದ ಉಪ ನಿರ್ದೇಶಕ ಮಟ್ಟದ ಅಧಿಕಾರಿಯೊಬ್ಬರು ದೂರನ್ನು ತನಿಖೆ ಮಾಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರವು ಸದಸ್ಯರನ್ನು ತೆಗೆದುಹಾಕುವ ಬಗ್ಗೆ ಈ ವಿಭಾಗವು ಪಟ್ಟಿ ಮಾಡುತ್ತದೆ. ಅದೇ ವಿಭಾಗದ ಅಡಿಯಲ್ಲಿ, ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ಇಲಾಖೆಯು ತನ್ನನ್ನು ಕೇಳದೆ ಏಕಪಕ್ಷೀಯ ನಿರ್ಧಾರವನ್ನು ನೀಡಿದೆ ಎಂದು ಗುರ್ಜರ್ ಹೇಳಿದ್ದಾರೆ ಕೌನ್ಸಿಲರ್‌ಗಳಾದ ಅಜಯ್ ಸಿಂಗ್ ಚೌಹಾನ್ (39), ಪರಸ್ ಕುಮಾರ್ ಜೈನ್ (72), ಶಂಕರ್ ಶರ್ಮಾ (103) ಅವರನ್ನು ಅಮಾನತು ಮಾಡಲಾಗಿದೆ. ನಾಲ್ವರನ್ನು ಅಮಾನತುಗೊಳಿಸಿದ ಅವಧಿಯನ್ನು ಆದೇಶದಲ್ಲಿ ಹೇಳಿಲ್ಲ.

“ಡಾ. ಸೋಮ್ಯಾ ಗುರ್ಜರ್ ಜೆಎಂಸಿ ಗ್ರೇಟರ್ ನ ಮೇಯರ್ ಮತ್ತು 87 ನೇ ವಾರ್ಡ್‌ನ ಕೌನ್ಸಿಲರ್ ಆಗಿರುವುದರಿಂದ ಮತ್ತು ಅವರ ವಿರುದ್ಧದ ಆರೋಪಗಳು ಗಂಭೀರವಾಗಿರುವುದರಿಂದ, ಅವರು ಮೇಯರ್ ಆಗಿ ಮುಂದುವರಿದರೆ ನ್ಯಾಯಾಂಗ ತನಿಖೆಯ ಮೇಲೆ ಪ್ರಭಾವ ಬೀರುವ ಸಂಪೂರ್ಣ ಸಾಧ್ಯತೆಯಿದೆ” ಎಂದು ಆದೇಶ ಹೇಳುತ್ತದೆ. ಗುರ್ಜರ್ ಅವರನ್ನು ಮೇಯರ್ ಮತ್ತು ಕೌನ್ಸಿಲರ್ ಆಗಿ 87 ನೇ ವಾರ್ಡ್ ನಿಂದ “ತಕ್ಷಣದ ಅಮಾನತು”ಮಾಡಲಾಗಿದೆ ಎಂದು ಅಮಾನತು ಆದೇಶ ನೀಡಲಾಗಿದೆ.

“ಸತ್ಯದ ಹಾದಿ ಕಷ್ಟ ಎಂದು ನಾನು ಓದಿದ್ದೆ , ಆದರೆ ಈಗ ನಾನು ಅದಕ್ಕೂ ಸಾಕ್ಷಿಯಾಗಿದ್ದೇನೆ. ಆದರೆ ನಾನು ತಲೆಬಾಗುವುದಿಲ್ಲ ಮತ್ತು ಸತ್ಯದ ದಾರಿಯಲ್ಲಿ ಮುಂದುವರಿಯುವೆ, ”ಎಂದು ಗುರ್ಜರ್ ಹೇಳಿದರು. ನಾನು ಅವರು ಭ್ರಷ್ಟಾಚಾರದ ವಿಷಯ ಎತ್ತಿದ್ದೇನೆ ಮತ್ತು ಅದನ್ನು ಮುಂದುವರಿಸಲಿದ್ದೇನೆ ಎಂದು ಅವರು ಹೇಳಿದರು.

ಗ್ರೇಟರ್ ಮೇಯರ್ ಸೋಮ್ಯಾ ಗುರ್ಜರ್ ಅವರನ್ನು ಭಾನುವಾರ ತಡರಾತ್ರಿ ವಜಾಗೊಳಿಸುವುದರ ವಿರುದ್ಧ ರಾಜ್ಯ ಬಿಜೆಪಿ ಸೋಮವಾರ ಜೈಪುರ್ ಗ್ರೇಟರ್ ಮತ್ತು ಜೈಪುರ ಹೆರಿಟೇಜ್ ಪುರಸಭೆಯ ಎಲ್ಲಾ 250 ಪುರಸಭೆ ಸ್ಥಾನಗಳಲ್ಲಿ ಪ್ರತಿಭಟನೆ ನಡೆಸಿತು.

ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಅವರು , “ಇದು ರಾಜ್ಯದ ಇತಿಹಾಸದಲ್ಲಿ ಇಂತಹ ಮೊದಲ ನಿರ್ಧಾರ. ಕಾಂಗ್ರೆಸ್ ದ್ವೇಷದ ರಾಜಕೀಯವನ್ನು ಮಾಡುತ್ತದೆ ಮತ್ತು ಚುನಾಯಿತ ಮಹಿಳಾ ಮೇಯರ್ ಅವರನ್ನು ಈ ರೀತಿ ಅವಮಾನಿಸುವುದು ಇದೇ ಮೊದಲು. ಜೂನ್ ತಿಂಗಳಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು ಮತ್ತು ಕಾಂಗ್ರೆಸ್ ಅವನತಿ ಪ್ರಾರಂಭವಾಯಿತು. ಜೈಪುರ ಗ್ರೇಟರ್ ಮೇಯರ್ ಅವರನ್ನು ಅಮಾನತುಗೊಳಿಸುವುದು ದುರದೃಷ್ಟಕರ ಮತ್ತು ಇದು ರಾಜಸ್ಥಾನದಲ್ಲಿ ಪಕ್ಷದ ಪತನಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಸೋಮವಾರ, ಬಿಜೆಪಿ ಕೌನ್ಸಿಲರ್ ಮಾಜಿ ಮೇಯರ್ ಶೀಲ್ ಧಾಬಾಯ್ ಅವರನ್ನು ಜೆಎಂಸಿ ಗ್ರೇಟರ್ ಹಂಗಾಮಿ ಮೇಯರ್ ಆಗಿ ಸರ್ಕಾರ ನೇಮಕ ಮಾಡಿತು. ಆದೇಶದ ಪ್ರಕಾರ, ಜೆಎಂಸಿ ಗ್ರೇಟರ್‌ನ ಮೇಯರ್ ಹುದ್ದೆಯನ್ನು ಒಬಿಸಿ (ಮಹಿಳೆ) ಗಾಗಿ ಕಾಯ್ದಿರಿಸಲಾಗಿದೆ ಮತ್ತು ಆದ್ದರಿಂದ ಧಾಬಾಯ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರ ಹಿರಿತನ, ಅನುಭವ ಮತ್ತು ಪಕ್ಷದ ಬಹುಮತವನ್ನು ಇಲ್ಲಿ ಪರಿಗಣಿಸಲಾಗಿದೆ.

ಇದನ್ನೂ ಓದಿ: Black Fungus: ರಾಜಸ್ಥಾನದಲ್ಲಿ ಹೆಚ್ಚಿದ ಕಪ್ಪು ಶಿಲೀಂಧ್ರ ಪ್ರಕರಣ, ಚುಚ್ಚುಮದ್ದು ಕೊರತೆಯಿಂದ ಜನ ಕಂಗಾಲು; ಏರಿಕೆಯಾಗುತ್ತಿದೆ ದೃಷ್ಟಿ ಕಳೆದುಕೊಂಡವರ ಸಂಖ್ಯೆ

Published On - 12:05 pm, Tue, 8 June 21