Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನ: ಐಟಿ ಇಲಾಖೆ ದಾಳಿ; ಗಣಪತಿ ಪ್ಲಾಜಾದಲ್ಲಿ ರಾಯ್ರಾ ಸೇಫ್ಟಿ ವ್ಯಾಲೆಟ್ಸ್ ಲಾಕರ್ ಒಡೆದು ಲಕ್ಷಾಂತರ ನಗದು ವಶ

ಅಕ್ಟೋಬರ್ 17 ರಂದು ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಜೈಪುರದ ಗಣಪತಿ ಪ್ಲಾಜಾದ ಮೂರು ಲಾಕರ್‌ಗಳಿಂದ 1.25 ಕೋಟಿ ರೂಪಾಯಿ ನಗದು ಮತ್ತು 1 ಕೆಜಿ ಚಿನ್ನವನ್ನು ವಶಪಡಿಸಿಕೊಂಡರು. ಜೈಪುರದ ಗಣಪತಿ ಪ್ಲಾಜಾದೊಳಗೆ ಸುಮಾರು 1100 ಲಾಕರ್‌ಗಳನ್ನು ಪ್ಲಾಜಾದ ನೆಲದಡಿಯಲ್ಲಿ ನಿರ್ಮಿಸಲಾಗಿದೆ.

ರಾಜಸ್ಥಾನ: ಐಟಿ ಇಲಾಖೆ ದಾಳಿ; ಗಣಪತಿ ಪ್ಲಾಜಾದಲ್ಲಿ ರಾಯ್ರಾ ಸೇಫ್ಟಿ ವ್ಯಾಲೆಟ್ಸ್ ಲಾಕರ್ ಒಡೆದು ಲಕ್ಷಾಂತರ ನಗದು ವಶ
ರಾಜಸ್ಥಾನದಲ್ಲಿ ಐಟಿ ದಾಳಿ
Follow us
ರಶ್ಮಿ ಕಲ್ಲಕಟ್ಟ
|

Updated on: Nov 10, 2023 | 6:52 PM

ಜೈಪುರ ನವೆಂಬರ್ 10: ರಾಜಸ್ಥಾನ (Rajasthan )ವಿಧಾನಸಭೆ ಚುನಾವಣೆಗೆ ದಿನಗಳು ಬಾಕಿ ಇರುವಾಗಲೇ ಆದಾಯ ತೆರಿಗೆ (IT Raids) ಇಲಾಖೆಯು ಜೈಪುರದ (Jaipur) ಗಣಪತಿ ಪ್ಲಾಜಾದಲ್ಲಿ ಕಪ್ಪುಹಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸುತ್ತಿದೆ. ಈ ತನಿಖೆಯ ಭಾಗವಾಗಿ ಆದಾಯ ತೆರಿಗೆ ಅಧಿಕಾರಿಗಳು ಗಣಪತಿ ಪ್ಲಾಜಾದ ರಾಯಲ್ ಸೇಫ್ಟಿ ವ್ಯಾಲೆಟ್ಸ್ ಲಾಕರ್‌ನಲ್ಲಿರುವ ಅತ್ಯಂತ ಸೂಕ್ಷ್ಮ ಲಾಕರ್‌ಗಳನ್ನು ಒಡೆದಿದ್ದಾರೆ.ಇದರಲ್ಲಿ ಲಕ್ಷಗಟ್ಟಲೆ ನಗದು ಪತ್ತೆಯಾಗಿದ್ದು, ಎಣಿಕೆ ಕಾರ್ಯ ನಡೆಯುತ್ತಿದೆ. ಈ ಕಾರ್ಯಾಚರಣೆಯು ಅತಿ ಸೂಕ್ಷ್ಮ ಲಾಕರ್‌ಗಳಲ್ಲಿ ಚಿನ್ನದ ಸಂಗ್ರಹಿಸಲಾಗಿದೆ. ಬಹಿರಂಗಪಡಿಸದ ಸಂಪತ್ತಿನ ದೊಡ್ಡ ಪ್ರಮಾಣದ ಸಂಗ್ರಹವೂ ಇಲ್ಲಿದೆ. ಮೊದಲ ಹಂತದಲ್ಲಿ ಎರಡು ಲಾಕರ್‌ಗಳನ್ನು ತೆರೆಯಲಾಗಿದ್ದು, ಒಂದರಿಂದ ಲಕ್ಷ ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಎರಡನೇ ಲಾಕರ್‌ನಲ್ಲಿ ನೋಟು ತುಂಬಿದ ಮೂಟೆ ಪತ್ತೆಯಾಗಿದ್ದು, ಎಣಿಕೆ ಕಾರ್ಯ ನಡೆಯುತ್ತಿದೆ.

1.25 ಕೋಟಿ ನಗದು ಮತ್ತು 1 ಕೆಜಿ ಚಿನ್ನ ವಶ

ಅಕ್ಟೋಬರ್ 17 ರಂದು ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಜೈಪುರದ ಗಣಪತಿ ಪ್ಲಾಜಾದ ಮೂರು ಲಾಕರ್‌ಗಳಿಂದ 1.25 ಕೋಟಿ ರೂಪಾಯಿ ನಗದು ಮತ್ತು 1 ಕೆಜಿ ಚಿನ್ನವನ್ನು ವಶಪಡಿಸಿಕೊಂಡರು. ಜೈಪುರದ ಗಣಪತಿ ಪ್ಲಾಜಾದೊಳಗೆ ಸುಮಾರು 1100 ಲಾಕರ್‌ಗಳನ್ನು ಪ್ಲಾಜಾದ ನೆಲದಡಿಯಲ್ಲಿ ನಿರ್ಮಿಸಲಾಗಿದೆ.

500 ಕೋಟಿ ಕಪ್ಪುಹಣವನ್ನು ಲಾಕರ್‌ಗಳಲ್ಲಿ ಇರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಅಕ್ಟೋಬರ್ 13 ರಂದು ಬಿಜೆಪಿ ರಾಜ್ಯಸಭಾ ಸಂಸದ ಕಿರೋಡಿ ಮೀನಾ ಅವರು ಜೈಪುರದ 100 ಖಾಸಗಿ ಲಾಕರ್‌ಗಳಲ್ಲಿ ಸುಮಾರು 500 ಕೋಟಿ ರೂಪಾಯಿ ಕಪ್ಪು ಹಣ ಮತ್ತು 50 ಕೆಜಿ ಚಿನ್ನವನ್ನು ಇಡಲಾಗಿದೆ ಎಂದು ಆರೋಪಿಸಿದ್ದು ಅವುಗಳನ್ನು ತೆರೆಯುವಂತೆ ಪೊಲೀಸರಿಗೆ ಒತ್ತಾಯಿಸಿದರು.

ನಂತರ ಸಂಸ್ಥೆಯೊಂದರ ಕಚೇರಿಗೆ ತೆರಳಿದ ಅವರು, ಲಾಕರ್‌ಗಳು ಇವೆ ಎಂದು ಹೇಳಿಕೊಂಡಿದ್ದರು. ನಂತರ ದಿನದಲ್ಲಿ, ಆದಾಯ ತೆರಿಗೆ (ಐ-ಟಿ) ಇಲಾಖೆ ಮತ್ತು ಜಾರಿ ನಿರ್ದೇಶನಾಲಯ (ಇಡಿ) ತಂಡಗಳು ವಿಷಯವನ್ನು ಪರಿಶೀಲಿಸಲು ಸಂಸ್ಥೆಯನ್ನು ತಲುಪಿವೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಎರಡು ಏಜೆನ್ಸಿಗಳಿಂದ ತಕ್ಷಣದ ದೃಢೀಕರಣ ಸಿಕ್ಕಿಲ್ಲ. 50 ಲಾಕರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 10 ಕೆಲವು ಅಧಿಕಾರಿಗಳಿಗೆ ಸೇರಿದ್ದವು ಎಂದು ಮೀನಾ ಹೇಳಿದ್ದಾರೆ. ಸರ್ಕಾರಿ ನೇಮಕಾತಿ ಪತ್ರ ಸೋರಿಕೆ ಹಗರಣ, ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಹಗರಣ, ಜಲ ಜೀವನ್ ಮಿಷನ್ ಹಗರಣಗಳಿಂದ ಮಾಡಿದ ಕಪ್ಪುಹಣ ಲಾಕರ್‌ಗಳಲ್ಲಿದೆ ಎಂದು ಆರೋಪಿಸಿದರು.

ಎಂಐ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ (ಗಣಪತಿ ಪ್ಲಾಜಾ) ಸುಮಾರು ಎರಡು ಗಂಟೆಗಳ ಕಾಲ ಸಂಸ್ಥೆಯ ಕಚೇರಿಯಲ್ಲೇ ಉಳಿದುಕೊಂಡ ಅವರು, ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆಗಳು ಮತ್ತು ಇತರ ಏಜೆನ್ಸಿಗಳ ಅಧಿಕಾರಿಗಳು ಮಧ್ಯಪ್ರವೇಶಿಸಿ ಲಾಕರ್‌ಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ರಾಜಸ್ಥಾನ: ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ಗೆ ಹಿನ್ನಡೆ, ಗೆಹ್ಲೋಟ್​ ಆಪ್ತ ಬಿಜೆಪಿಗೆ ಸೇರ್ಪಡೆ

ರಾಜಸ್ಥಾನದಲ್ಲಿ ಪೇಪರ್ ಸೋರಿಕೆ ಪ್ರಕರಣ

ಇದಕ್ಕೂ ಮುನ್ನ, ಬಾಬುಲಾಲ್ ಕತಾರಾ ಅವರನ್ನು ರಾಜಸ್ಥಾನ ಲೋಕಸೇವಾ ಆಯೋಗದ (ಆರ್‌ಪಿಎಸ್‌ಸಿ) ಸದಸ್ಯರನ್ನಾಗಿ ನೇಮಕ ಮಾಡುವಲ್ಲಿ ಕಾಂಗ್ರೆಸ್ ಮುಖಂಡ ದಿನೇಶ್ ಖೋಡಾನಿಯಾ ಮತ್ತು ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್‌ಎಲ್‌ಪಿ) ನಾಯಕ ಸ್ಪರ್ಧಾ ಚೌಧರಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಸಂಸದರು ಆರೋಪಿಸಿದ್ದಾರೆ.

ಕತಾರಾ ಅವರು ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬುಲಾಲ್ ಕತಾರಾ ಅವರನ್ನು ಈಗಾಗಲೇ ಜಾರಿ ನಿರ್ದೇಶನಾಲಯ ಬಂಧಿಸಿ ವಿಚಾರಣೆ ನಡೆಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ