ರಾಜಸ್ಥಾನದಲ್ಲಿ 11 ಮಂದಿಯಲ್ಲಿ ಕಪ್ಪಾ ರೂಪಾಂತರಿ ವೈರಸ್​; ನಿರ್ಲಕ್ಷ್ಯ ಮಾಡುವ ವಿಚಾರವಲ್ಲವೆಂದ ಆರೋಗ್ಯ ಸಚಿವ

ಕಪ್ಪಾ ರೂಪಾಂತರಿ ವೈರಸ್​ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು 2020ರ ಅಕ್ಟೋಬರ್​​ನಲ್ಲಿ. ಇದು ಕೊರೊನಾದ ಎರಡು ಬಾರಿ ರೂಪಾಂತರಗೊಂಡ ತಳಿಯಾಗಿದೆ. ಡೆಲ್ಟಾದಷ್ಟು ಅಪಾಯಕಾರಿ ಅಲ್ಲದಿದ್ದರೂ ನಿರ್ಲಕ್ಷ್ಯ ಮಾಡುವಂಥದ್ದಲ್ಲ.

ರಾಜಸ್ಥಾನದಲ್ಲಿ 11 ಮಂದಿಯಲ್ಲಿ ಕಪ್ಪಾ ರೂಪಾಂತರಿ ವೈರಸ್​; ನಿರ್ಲಕ್ಷ್ಯ ಮಾಡುವ ವಿಚಾರವಲ್ಲವೆಂದ ಆರೋಗ್ಯ ಸಚಿವ
ಪ್ರಾತಿನಿಧಿಕ ಚಿತ್ರ
Follow us
| Updated By: Lakshmi Hegde

Updated on: Jul 14, 2021 | 8:59 AM

ಜೈಪುರ: ಕೊವಿಡ್-19 (Covid 19) ಸೋಂಕಿನ ಒಂದೊಂದೇ ರೂಪಾಂತರಿ ವೈರಸ್​ಗಳು ಹೊರಬರುತ್ತಲೇ ಇದ್ದು, ಆತಂಕ ಸೃಷ್ಟಿಸುತ್ತಿವೆ. ಕೊವಿಡ್​ 19 ರೂಪಾಂತರಿಗಳಲ್ಲಿ ಒಂದಾದ ಕಪ್ಪಾ ಹಾವಳಿ ಶುರುವಾಗಿದ್ದು, ರಾಜಸ್ಥಾನದಲ್ಲಿ 11 ಜನರಲ್ಲಿ ಈ ಕಪ್ಪಾ ವೈರಸ್​ (Kappa Variant) ಕಾಣಿಸಿಕೊಂಡಿದೆ. ಈ ವಿಚಾರವನ್ನು ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.

11 ಜನರಲ್ಲಿ ಕಪ್ಪಾ ಸೋಂಕು ಕಾಣಿಸಿಕೊಂಡಿದೆ, ಅವರಲ್ಲಿ ಇಬ್ಬರು ಅಳ್ವಾರ್​ನವರು, ಇಬ್ಬರು ಜೈಪುರದವರು, ಇಬ್ಬರು ಬಾರ್ಮರ್​ ಮತ್ತು ಒಬ್ಬ ಭಿಲ್ವಾರಾದವರು ಎಂದು ರಘು ಶರ್ಮಾ ತಿಳಿಸಿದ್ದಾರೆ. ಈ ಹನ್ನೊಂದು ಮಂದಿಯಲ್ಲಿ 9 ಮಂದಿಯ ಮಾದರಿಯನ್ನು ದೆಹಲಿಯ ಐಜಿಐಬಿ ಪ್ರಯೋಗಾಲಯ ತಪಾಸಣೆ ಮಾಡಿ, ಕಪ್ಪಾ ಸೋಂಕು ತಗುಲಿದ್ದನ್ನು ದೃಢಪಡಿಸಿತ್ತು. ಹಾಗೇ ಇನ್ನಿಬ್ಬರ ಮಾದರಿಗಳನ್ನು ಜೈಪುರದ ಎಸ್​ಎಂಎಸ್​ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ. ಕಪ್ಪಾ ರೂಪಾಂತರಿ ವೈರಸ್​ ಡೆಲ್ಟಾಕ್ಕೆ ಹೋಲಿಸಿದರೆ ಸ್ವಲ್ಪ ಸೌಮ್ಯವಾಗಿದೆ. ಆದರೆ ನಿರ್ಲಕ್ಷಿಸುವಂತಿಲ್ಲ. ಸಾರ್ವಜನಿಕರು ಕೊವಿಡ್​ 19 ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ರಘು ಶರ್ಮಾ ಹೇಳಿದ್ದಾರೆ.

ಕಪ್ಪಾ ರೂಪಾಂತರಿ ವೈರಸ್​ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು 2020ರ ಅಕ್ಟೋಬರ್​​ನಲ್ಲಿ. ಇದು ಕೊರೊನಾದ ಎರಡು ಬಾರಿ ರೂಪಾಂತರಗೊಂಡ ತಳಿಯಾಗಿದೆ. ಡೆಲ್ಟಾದಷ್ಟು ಅಪಾಯಕಾರಿ ಅಲ್ಲದಿದ್ದರೂ ನಿರ್ಲಕ್ಷ್ಯ ಮಾಡುವಂಥದ್ದಲ್ಲ. ಲಸಿಕೆ ತೆಗೆದುಕೊಂಡವರಿಗೆ ಇದು ಅಷ್ಟಾಗಿ ಬಾಧಿಸಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ರಾಜಸ್ಥಾನದಲ್ಲಿ 107 ಮಂದಿಯಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್ ಪತ್ತೆಯಾಗಿದೆ.

ಇದನ್ನೂ ಓದಿ: Safe Driving Tips: ಮಳೆಗಾಲದಲ್ಲಿ ವಾಹನ ಚಲಾಯಿಸುವುದು ಅಷ್ಟು ಸುಲಭವಲ್ಲ; ಸಂಚರಿಸುವಾಗ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

(Rajasthan Records 11 Cases Of Kappa Variant)

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?