AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ರಣಾಲಯದಿಂದಲೇ 500 ರೂಪಾಯಿ ಗರಿಗರಿ ನೋಟುಗಳ 10 ಬಂಡಲ್ ನಾಪತ್ತೆ​; ಬಿಗಿಭದ್ರತೆ ನಡುವೆಯೂ ಮಹಾಮೋಸ

ನಾಸಿಕ್​ನಲ್ಲಿ ವರ್ಷಕ್ಕೆ 200ರಿಂದ 250 ಕೋಟಿ ರೂಪಾಯಿ ಮೌಲ್ಯದ ನಗದು ಮುದ್ರಣವಾಗುತ್ತದೆ. ಈ ಕಾರಣದಿಂದ ವರ್ಷದ 365ದಿನಗಳಲ್ಲೂ ದಿನದ 24 ಗಂಟೆ ಅತ್ಯಂತ ಬಿಗಿ ಭದ್ರತೆ ಇರುತ್ತದೆ. ಹೀಗಾಗಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮುದ್ರಣಾಲಯದಿಂದಲೇ 500 ರೂಪಾಯಿ ಗರಿಗರಿ ನೋಟುಗಳ 10 ಬಂಡಲ್ ನಾಪತ್ತೆ​; ಬಿಗಿಭದ್ರತೆ ನಡುವೆಯೂ ಮಹಾಮೋಸ
ಸಾಂಕೇತಿಕ ಚಿತ್ರ
TV9 Web
| Updated By: Skanda|

Updated on: Jul 14, 2021 | 8:37 AM

Share

ಮುಂಬೈ: ಆಗಷ್ಟೇ ಮುದ್ರಣಗೊಂಡಿದ್ದ 500ರೂಪಾಯಿ ಮೌಲ್ಯದ ನೋಟಿನ 10 ಬಂಡಲ್​ಗಳು ಮಾಯವಾಗಿರುವ ಘಟನೆ ಮುಂಬೈನ ನಾಸಿಕ್​ನಲ್ಲಿ (Nashik) ನಡೆದಿದೆ. ನಾಸಿಕ್​ನಲ್ಲಿರುವ ನೋಟು ಮುದ್ರಣಾಲಯದಿಂದ ಗರಿಗರಿ ನೋಟುಗಳು ಕಾಣೆಯಾಗಿದ್ದು, ಅತ್ಯಂತ ಭದ್ರತೆಯಿದ್ದರೂ ಹಣ ನಾಪತ್ತೆಯಾಗಿದ್ದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಪ್ರಕರಣದ ಬಗ್ಗೆ ಮುದ್ರಣಾಲಯದ (Currency note Press) ಅಧಿಕಾರಿಗಳು ಹೆಚ್ಚುವರಿ ಮಾಹಿತಿಯನ್ನು ನೀಡಿಲ್ಲ. ಸದ್ಯ ನಾಸಿಕ್​ ಪೊಲೀಸರಿಗೆ (Nashik Police) ಈ ಬಗ್ಗೆ ವಿಷಯ ಮುಟ್ಟಿಸಲಾಗಿದೆ ಎನ್ನುವುದು ತಿಳಿದುಬಂದಿದೆ.

ಕಾಣೆಯಾಗಿರುವ ನೋಟುಗಳು ಹೊಸದಾಗಿ ಮುದ್ರಣಗೊಂಡವುಗಳಾಗಿದ್ದು, ಮುದ್ರಣಾಲಯದಿಂದ ಹೊರಬರುವ ಮುನ್ನವೇ ಅವುಗಳು ಯಾರದ್ದೋ ಪಾಲಾಗಿವೆ. 500 ರೂಪಾಯಿ ಮುಖಬೆಲೆಯ 10 ಬಂಡಲ್​ ಎಂದರೆ ಒಟ್ಟು 5 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಕಣ್ಮರೆಯಾಗಿದ್ದು, ದಿನದ 24 ಗಂಟೆಯೂ ನೀಡಲಾಗುವ ಭಾರೀ ಭದ್ರತೆಯ ನಡುವೆ ಇವುಗಳನ್ನು ಯಾರು ತೆಗೆದುಕೊಂಡು ಹೋಗಲು ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಸಾಧಾರಣವಾಗಿ ನೋಟು ಮುದ್ರಿಸುವ ಮುದ್ರಣಾಲಯಗಳಿಗೆ ಅತ್ಯಂತ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತದೆ. ಯಾರೂ ಸಹ ಸುಖಾಸುಮ್ಮನೆ ಮುದ್ರಾಣಾಲಯಗಳಿಗೆ ಹೋಗುವಂತಿಲ್ಲ. ಅಲ್ಲದೇ, ನೋಟು ಅಮಾನ್ಯೀಕರಣದಂತಹ ಸಂದರ್ಭದಲ್ಲೂ ಈ ರೀತಿಯ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ. ಅಲ್ಲಿನ ಸಿಬ್ಬಂದಿ ಸಹ ಸಾಕಷ್ಟು ನಿಯಮಾವಳಿಗಳನ್ನು ಪಾಲಿಸಿಯೇ ಕೆಲಸ ಮಾಡಬೇಕಾದ್ದರಿಂದ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಹೊರ ಹೋಗುವುದು ಸಾಧ್ಯವಿಲ್ಲ.

ಸದ್ಯ ಈ ಘಟನೆ ಮುದ್ರಣಾಲಯದ ಹಿರಿಯ ಸಿಬ್ಬಂದಿಗೂ ಅಚ್ಚರಿ ಮೂಡಿಸಿದ್ದು, ಸೋಮವಾರ ನಾಸಿಕ್​ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಸಾಕಷ್ಟು ಸಂದೇಹಗಳಿದ್ದು ಬೇರೆ ಬೇರೆ ಆಯಾಮಗಳಲ್ಲಿ ಪ್ರಕರಣದ ಬಗ್ಗೆ ಯೋಚಿಸುವಂತಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಸದರಿ ಘಟನೆಗೆ ಮುದ್ರಣಾಲಯದ ಸಿಬ್ಬಂದಿ ನಿರ್ಲಕ್ಷತನವೇ ಕಾರಣವೇ, ಭದ್ರತಾ ಸಿಬ್ಬಂದಿ ಲೋಪವೇ ಎಂದು ಹೇಳುವುದು ಸಾಧ್ಯವಾಗುತ್ತಿಲ್ಲ.

ನಾಸಿಕ್​ನಲ್ಲಿ ವರ್ಷಕ್ಕೆ 200ರಿಂದ 250 ಕೋಟಿ ರೂಪಾಯಿ ಮೌಲ್ಯದ ನಗದು ಮುದ್ರಣವಾಗುತ್ತದೆ. ಈ ಕಾರಣದಿಂದ ವರ್ಷದ 365ದಿನಗಳಲ್ಲೂ ದಿನದ 24 ಗಂಟೆ ಅತ್ಯಂತ ಬಿಗಿ ಭದ್ರತೆ ಇರುತ್ತದೆ. ಹೀಗಾಗಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಯಾವ ರೀತಿ ಇದಕ್ಕೆ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: Old Coin Auction: ಹಳೇ ಕಾಲದ ನೋಟು, ನಾಣ್ಯ ಇದ್ದರೆ ಲಕ್ಷಗಟ್ಟಲೆ ಸಂಪಾದಿಸಿ; ಆನ್​ಲೈನ್​ ವ್ಯವಹಾರ ಮಾಡುವಾಗ ಎಚ್ಚರವೂ ಇರಲಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ