AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜೀವ ಗಾಂಧಿ ಹಂತಕನಿಂದ ಕೊವಿಡ್ ಫಂಡ್​ಗೆ 5 ಸಾವಿರ ದೇಣಿಗೆ

ಈ ಮಾಹಿತಿಯನ್ನು ರವಿಚಂದ್ರನ್ ಪರ ವಕೀಲ ಟಿ.ತಿರುಮುರುಗನ್ ಬಹಿರಂಗಪಡಿಸಿದ್ದಾರೆ. ಈ ಹಿಂದೆಯೂ ಆರ್.ಪಿ.ರವಿಚಂದ್ರನ್ ಗಾಜಾ ಚಂಡಮಾರುತದ ನಿರಾಶ್ರಿತರ ಪುನರ್ವಸತಿಗಾಗಿ 5 ಸಾವಿರ ಹಣವನ್ನು ದೇಣಿಗೆ ನೀಡಿದ್ದರು.

ರಾಜೀವ ಗಾಂಧಿ ಹಂತಕನಿಂದ ಕೊವಿಡ್ ಫಂಡ್​ಗೆ 5 ಸಾವಿರ ದೇಣಿಗೆ
ಸಾಂಕೇತಿಕ ಚಿತ್ರ
guruganesh bhat
|

Updated on: May 18, 2021 | 4:38 PM

Share

ಚೆನ್ನೈ: ರಾಜೀವ್ ಗಾಂಧಿ ಹತ್ಯೆಯ 7 ಆರೋಪಿಗಳಲ್ಲಿ ಓರ್ವ ಆರ್.ಪಿ.ರವಿಚಂದ್ರನ್, ಮಧುರೈಯ ಕೇಂದ್ರೀಯ ಕಾರಾಗೃಹದಲ್ಲಿದ್ದು, ಅಲ್ಲಿ ದುಡಿದ ಹಣದಲ್ಲಿ 5 ಸಾವಿರ ಹಣವನ್ನು ಆನ್​ಲೈನ್ ಮೂಲಕ ಕೊವಿಡ್ ಫಂಡ್​ಗೆ ನೀಡಿದ್ದಾರೆ. ಈ ಮಾಹಿತಿಯನ್ನು ರವಿಚಂದ್ರನ್ ಪರ ವಕೀಲ ಟಿ.ತಿರುಮುರುಗನ್ ಬಹಿರಂಗಪಡಿಸಿದ್ದಾರೆ. ಈ ಹಿಂದೆಯೂ ಆರ್.ಪಿ.ರವಿಚಂದ್ರನ್ ಗಾಜಾ ಚಂಡಮಾರುತದ ನಿರಾಶ್ರಿತರ ಪುನರ್ವಸತಿಗಾಗಿ 5 ಸಾವಿರ ಹಣವನ್ನು ದೇಣಿಗೆ ನೀಡಿದ್ದರು.

ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್ ಸೋಂಕಿನ ವಿರುದ್ಧ ಹೋರಾಡಲು ದೇಶದ ಖ್ಯಾತನಾಮರೂ ಸೇರಿದಂತೆ ಹಲವರು ದೇಣಿಗೆ ನೀಡುತ್ತಿದ್ದಾರೆ. ಕಳೆದ 28 ವರ್ಷಗಳಿಂದ ರಾಜೀವ್ ಗಾಂಧಿ ಹತ್ಯೆ ಆರೋಪದಲ್ಲಿ ಬಂಧಿತರಾಗಿರುವ ಏಳು ಜನರೂ ಸೇರಿ 5 ಸಾವಿರ ದೇಣಿಗೆ ನೀಡುತ್ತಿದ್ದುದ್ದಾಗಿ ಆರ್.ಪಿ.ರವಿಚಂದ್ರನ್ ತಿಳಿಸಿದಿದ್ದಾರೆ.

ವಿಶ್ವನಾಥ್ ಆನಂದ್ ದೇಣಿಗೆ ಈಗಾಗಲೇ ಚೆಸ್ ಮಾಂತ್ರಿಕ ವಿಶ್ವನಾಥ್ ಆನಂದ್ ಸಹ ಇತ್ತೀಚಿಗೆ ಕೊವಿಡ್ ಫಂಡ್​ಗೆ ದೇಣಿಗೆ ನೀಡಿದ್ದಾರೆ. ಕೊರೊನಾ ರಿಲೀಫ್ ಫಂಡ್‌ಗಾಗಿ ಹಣ ಸಂಗ್ರಹಿಸಲು ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮತ್ತು ಇತರ ನಾಲ್ಕು ಗ್ರಾಂಡ್‌ಮಾಸ್ಟರ್‌ಗಳು ಇತರ ಚೆಸ್ ಆಟಗಾರರೊಂದಿಗೆ ಗುರುವಾರ ಆನ್‌ಲೈನ್ ಚೆಸ್ ಪಂದ್ಯಗಳನ್ನು ಆಡಿದ್ದಾರೆ. ಚೇಸ್ ಡಾಟ್ ಕಾಮ್ ಬ್ಲಿಟ್ಜ್ ಹೊಂದಿರುವವರು ಅಥವಾ 2000 ಕ್ಕಿಂತ ಕಡಿಮೆ ಫಿಡಾ ರೇಟಿಂಗ್ ಹೊಂದಿರುವ ಆಟಗಾರರು ಸುಮಾರು 11000 ರೂಪಾಯಿಗಳನ್ನು ದಾನ ಮಾಡಬಹುದಾಗಿದೆ.

ಈ ಆನ್‌ಲೈನ್ ಪಂದ್ಯದಿಂದ ಆನಂದ್ 50 ಸಾವಿರ ಡಾಲರ್‌ಗಳನ್ನು ಅಂದರೆ ಸುಮಾರು 37 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ಈ ಕಾರ್ಯಕ್ರಮವನ್ನು ಚೆಸ್ ಡಾಟ್ ಕಾಮ್ ಆಯೋಜಿಸಿದೆ. ಅವರಲ್ಲದೆ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ, ಹರಿಕಾ ದ್ರೋಣವಾಲಿ, ನಿಹಾಲ್ ಸೈನಿ ಮತ್ತು ಪ್ರಜ್ಞಾ ರಮೇಶಬಾಬು ಮುಂತಾದ ಅನೇಕ ಆಟಗಾರರು ಭಾಗವಹಿಸಿದ್ದರು.

ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭಾರತೀಯ ಟೇಬಲ್ ಟೆನಿಸ್ ಆಟಗಾರ ಜಿ. ಸತ್ಯನ್ ಶುಕ್ರವಾರ ಹೇಳಿದ್ದಾರೆ.

ದೇಶದಲ್ಲಿ ನಡೆಯುತ್ತಿರುವುದನ್ನು ನೋಡಿ ಹೃದಯ ಆಘಾತಕ್ಕೊಳಗಾಗಿದೆ ಎಂದು ಜಿ. ಸತ್ಯನ್ ಟ್ವೀಟ್ ಮಾಡಿದ್ದಾರೆ. ಜನರು ತುಂಬಾ ತೊಂದರೆಯಲ್ಲಿದ್ದಾರೆ ಮತ್ತು ಪ್ರತಿದಿನ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ. ಪರಸ್ಪರ ಸಹಾಯ ಮಾಡುವ ಸಮಯ ಇದು. ನಾನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ.

ಇದನ್ನೂ ಓದಿ: ಕೊವಿಡ್ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ; ಬಿಹಾರ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ತರಾಟೆ

ಕೊವಿಡ್-19 ಮಹಾಮಾರಿ ವಯಸ್ಕರಲ್ಲಿ ಖಿನ್ನತೆ, ಹತಾಶೆ, ಒಂಟಿತನದಂಥ ಮಾನಸಿಕ ಅಸ್ವಸ್ಥತೆಗಳನ್ನು ಸೃಷ್ಟಿಸುತ್ತಿದೆ (Rajiv Gandhi Assassination convicts donated 5 thousand for covid fund)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ