AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟ್ಟ ಇಲಿ 1 ಕೋಟಿ ನಷ್ಟಕ್ಕೆ ಕಾರಣವಾಗಿದೆ ಹೇಗೆ ಗೊತ್ತಾ?

ಹೈದರಾಬಾದ್: ಕನ್ನಡದ ಡಕೋಟ ಎಕ್ಸ್​ಪ್ರೆಸ್ ಸಿನಿಮಾದಲ್ಲಿ ಒಂದು ಪುಟ್ಟ ಇಲಿ ಸುಂದರನ್​ನ ಜೀವನದಲ್ಲಿ ಹೇಗೆ ಆಟ ಆಡಿದೆ ಎಂಬುವುದನ್ನು ನೋಡಿದ್ದೇವೆ. ಈಗ ಅದೇ ರೀತಿ ಇಲ್ಲೊಂದು ಇಲಿ 1 ಕೋಟಿ ನಷ್ಟಕ್ಕೆ ಕಾರಣವಾಗಿದೆ. ಗಣೇಶನ ವಾಹನ ಇಲಿ ಮಾಡಿದ ಚೇಷ್ಟೆಗೆ ಕಾರು ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 1 ಕೋಟಿ ನಷ್ಟವಾಗಿದೆ. ಇದೇ ವರ್ಷದ ಫೆಬ್ರವರಿ 8 ರಂದು ಹೈದರಾಬಾದ್‌ನ ಮುಶೀರಾಬಾದ್‌ನಲ್ಲಿರುವ ಕಾರು ಸೇವಾ ಕೇಂದ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾರುತಿ ನೆಕ್ಸಾ ಕಾರುಗಳ ಮಾರಾಟ ಮತ್ತು […]

ಪುಟ್ಟ ಇಲಿ 1 ಕೋಟಿ ನಷ್ಟಕ್ಕೆ ಕಾರಣವಾಗಿದೆ ಹೇಗೆ ಗೊತ್ತಾ?
ಆಯೇಷಾ ಬಾನು
|

Updated on: Aug 21, 2020 | 7:53 AM

Share

ಹೈದರಾಬಾದ್: ಕನ್ನಡದ ಡಕೋಟ ಎಕ್ಸ್​ಪ್ರೆಸ್ ಸಿನಿಮಾದಲ್ಲಿ ಒಂದು ಪುಟ್ಟ ಇಲಿ ಸುಂದರನ್​ನ ಜೀವನದಲ್ಲಿ ಹೇಗೆ ಆಟ ಆಡಿದೆ ಎಂಬುವುದನ್ನು ನೋಡಿದ್ದೇವೆ. ಈಗ ಅದೇ ರೀತಿ ಇಲ್ಲೊಂದು ಇಲಿ 1 ಕೋಟಿ ನಷ್ಟಕ್ಕೆ ಕಾರಣವಾಗಿದೆ. ಗಣೇಶನ ವಾಹನ ಇಲಿ ಮಾಡಿದ ಚೇಷ್ಟೆಗೆ ಕಾರು ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 1 ಕೋಟಿ ನಷ್ಟವಾಗಿದೆ.

ಇದೇ ವರ್ಷದ ಫೆಬ್ರವರಿ 8 ರಂದು ಹೈದರಾಬಾದ್‌ನ ಮುಶೀರಾಬಾದ್‌ನಲ್ಲಿರುವ ಕಾರು ಸೇವಾ ಕೇಂದ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾರುತಿ ನೆಕ್ಸಾ ಕಾರುಗಳ ಮಾರಾಟ ಮತ್ತು ಸೇವೆಗಳ ಬಗ್ಗೆ ವ್ಯವಹರಿಸುವ ಮಿತ್ರ ಮೋಟಾರ್ಸ್‌ನಲ್ಲಿ ಈ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಮೂರು ಕಾರುಗಳು ಸುಟ್ಟುಹೋಗಿದ್ದವು ಮತ್ತು 1 ಕೋಟಿ ರೂ. ನಷ್ಟವಾಗಿತ್ತು. ಆದರೆ ಘಟನೆಗೆ ಕಾರಣವೇನು ಎಂಬುವುದು ಯಾರಿಗೂ ತಿಳಿದಿರಲಿಲ್ಲ. ಈಗ ಆರು ತಿಂಗಳ ಬಳಿಕ ಬೆಂಕಿಗೆ ಕಾರಣವಾದದ್ದು ಅಂತಿಮವಾಗಿ ಬೆಳಕಿಗೆ ಬಂದಿದೆ.

ಕಂಪನಿಯ ಘಟನೆ ಸಂಭವಿಸಿದ ರಾತ್ರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಣ್ಣ ಇಲಿಯ ಚೇಷ್ಟೆಯಿಂದ ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ. ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪೊಲೀಸರು ಪ್ರಕರಣವನ್ನು ಮುಚ್ಚಿದ್ದರು, ಟ್ರೂತ್ ಲ್ಯಾಬ್ಸ್ ಎಂಬ ಖಾಸಗಿ ವಿಧಿವಿಜ್ಞಾನ ಸಂಸ್ಥೆ ಘಟನೆ ನಡೆದ ರಾತ್ರಿಯ ಸಿಸಿಟಿವಿ ಪರಿಶೀಲನೆ ನಡೆಸಿ ಬೆಂಕಿ ನಿಜವಾಗಿಯೂ ಹೇಗೆ ಹಬ್ಬತು ಎಂಬುದನ್ನು ಬಹಿರಂಗಪಡಿಸಿದೆ.

ಫೆಬ್ರವರಿ 7 ರಂದು ಉದ್ಯೋಗಿಯೊಬ್ಬರು ಬೆಳಿಗ್ಗೆ ಆರತಿ ಬೆಳಗಿ ಪೂಜೆ ಮಾಡಿದ್ದಾರೆ. ಹಾಗೂ ಕೋಣೆಯಲ್ಲಿ ಗಾಳಿ ಇಲ್ಲದ ಕಾರಣ, ದೀಪ ರಾತ್ರಿಯವರೆಗೆ ಬೆಳಗಿದೆ ಮತ್ತು ಆ ರಾತ್ರಿ 11:51 ರ ಸಮಯದಲ್ಲಿ ಇಲಿ ತನ್ನ ಚೇಷ್ಟೆ ಶುರು ಮಾಡಿದೆ. ಕೆಲವೇ ಸೆಕೆಂಡುಗಳ ನಂತರ, ಕ್ಯಾಮೆರಾ ಕಣ್ಣಿನಲ್ಲಿ ಕುರ್ಚಿಯ ಭಾಗದಲ್ಲಿ ಬೆಂಕಿ ಬೆಳಗಿಸುವ ದೃಶ್ಯ ಸೆರೆಯಾಗಿದೆ. 12.06ರ ಹೊತ್ತಿಗೆ ಬೆಂಕಿ ಎಲ್ಲೆಡೆ ಹಬ್ಬಲು ಶುರು ಮಾಡಿದೆ. ಈ ರೀತಿ ಪುಟ್ಟ ಇಲಿಯಿಂದ ಕಾರು ಸೇವಾ ಕಂಪನಿ ನಷ್ಟಕ್ಕೆ ಒಳಗಾಗಿದೆ.

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು