AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಉತ್ತರಪ್ರದೇಶ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟವೂ ಈಗ ಕಿವಿಗೆ ಇಂಪು; ಒಂದರ ಬೆನ್ನಿಗೆ ಇನ್ನೊಂದು ಹಾಡುಗಳು ವೈರಲ್​

UP Assembly Election 2022: ರವಿ ಕಿಶನ್​ ತಮ್ಮ 5 ನಿಮಿಷಗಳ ಹಾಡಿನ ಮೂಲಕ ಹೊಗಳಿದ್ದಾರೆ. ಬಿಜೆಪಿಯನ್ನು ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಈ ಹಾಡಿನ ಮೂಲಕ ಮನವಿ ಮಾಡಿದ್ದಾರೆ. 

Video: ಉತ್ತರಪ್ರದೇಶ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟವೂ ಈಗ ಕಿವಿಗೆ ಇಂಪು; ಒಂದರ ಬೆನ್ನಿಗೆ ಇನ್ನೊಂದು ಹಾಡುಗಳು ವೈರಲ್​
ರವಿ ಕಿಶನ್​ ಮತ್ತು ನೇಹಾ ರಾಥೋಡ್​
TV9 Web
| Edited By: |

Updated on: Jan 18, 2022 | 9:14 AM

Share

ಉತ್ತರ ಪ್ರದೇಶ ಸೇರಿ ಒಟ್ಟು 5 ರಾಜ್ಯಗಳ ಚುನಾವಣೆ ಸಮೀಪಿಸುತ್ತಿದೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ವಾಗ್ದಾಳಿ-ಪ್ರತಿವಾಗ್ದಾಳಿಗಳೆಲ್ಲ ಸಾಮಾನ್ಯ. ಹೀಗಿರುವಾಗ ಉತ್ತರ ಪ್ರದೇಶಲ್ಲಿ ರಾಜಯಕೀಯ ಪಕ್ಷಗಳ ನಡುವೆ ಗಾಯನ ಸಮರ ಶುರುವಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕ, ಸಂಸದ ರವಿ ಕಿಶನ್​ ಅವರು ಉತ್ತರಪ್ರದೇಶ ಸರ್ಕಾರ, ಯೋಗಿ ಆದಿತ್ಯನಾಥ್​ ಅವರನ್ನು ಹೊಗಳಿ ಒಂದು ಹಾಡು ಹಾಡಿದ್ದರು. ಭೋಜಪುರಿ ನಟ, ಗಾಯಕರೂ ಆಗಿರುವ ರವಿ ಕಿಶನ್​ ಯುಪಿ ಮೆ ಸಬ್​ ಬಾ (ಉತ್ತರಪ್ರದೇಶದಲ್ಲಿ ಎಲ್ಲವೂ ಇದೆ) ಎಂಬ ಹಾಡನ್ನು ಹಾಡಿದ್ದರು. ಅದರಲ್ಲಿ, ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 5ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಉಲ್ಲೇಖವಿದೆ.  ಇತ್ತೀಚೆಗೆ ಉದ್ಘಾಟನೆಯಾದ ಕುಶಿನಗರ ಏರ್​ಪೋರ್ಟ್ ಮತ್ತು ಜಾವರ್​ ಏರ್​ಪೋರ್ಟ್​ಗಳ ಉಲ್ಲೇಖವೂ ಇದೆ.  ಅಷ್ಟೇ ಅಲ್ಲ, ಉತ್ತರಪ್ರದೇಶ ಸರ್ಕಾರ ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿ, ಕಾನೂನು ಸುವ್ಯವಸ್ಥೆ ಜಾರಿಗೊಳಿಸಿದ ರೀತಿಯಯನ್ನೂ ರವಿ ಕಿಶನ್​ ತಮ್ಮ 5 ನಿಮಿಷಗಳ ಹಾಡಿನ ಮೂಲಕ ಹೊಗಳಿದ್ದಾರೆ. ಬಿಜೆಪಿಯನ್ನು ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಈ ಹಾಡಿನ ಮೂಲಕ ಮನವಿ ಮಾಡಿದ್ದಾರೆ. 

ರವಿ ಕಿಶನ್​ ಹಾಡು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇನ್ನೊಬ್ಬರು ಭೋಜಪುರಿ ಗಾಯಕ ನೇಹಾ ರಾಥೋಡ್​ ಈ ಹಾಡಿಗೆ ಪ್ರತಿಯಾಗಿ ಒಂದು ಹಾಡು ಹಾಡಿದ್ದಾರೆ. ತಮ್ಮ ಹಾಡಿನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ತೆಗಳಿದ್ದಾರೆ. ಸದ್ಯ ಪ್ರತಿಪಕ್ಷಗಳು ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಯಾವೆಲ್ಲ ಆರೋಪ ಮಾಡುತ್ತಿವೆಯೋ, ಅದೆಲ್ಲವನ್ನೂ ಸೇರಿಸಿ ನೇಹಾ ಹಾಡು ಹಾಡಿದ್ದಾರೆ.

23 ವರ್ಷದ ನೇಹಾ ರಾಥೋಡ್​ ಇದೀಗ ಯುಪಿ ಮೆ ಕಾ ಬಾ (ಏನಿದೆ ಉತ್ತರಪ್ರದೇಶದಲ್ಲಿ) ಎಂಬ ಹಾಡನ್ನು ಟ್ವಿಟರ್​, ಯೂಟ್ಯೂಬ್​​ನಲ್ಲಿ ಹರಿಬಿಟ್ಟಿದ್ದಾರೆ. ಕೊವಿಡ್​ 19 ಎರಡನೇ ಅಲೆ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಶವಗಳು ಸಿಕ್ಕ ಬಗ್ಗೆ, ಹತ್ರಾಸ್​ ಅತ್ಯಾಚಾರ ಪ್ರಕರಣ ಮತ್ತು ಲಖಿಂಪುರದಲ್ಲಿ ರೈತರ ಕೊಲೆಯಾದ ಬಗ್ಗೆ ತಮ್ಮ ಹಾಡಿನ ಮೂಲಕವೇ ಸರ್ಕಾರವನ್ನು ಚುಚ್ಚಿದ್ದಾರೆ.  ಈ ಹಾಡನ್ನು ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಅಂದಹಾಗೇ, ಈ ಹಾಡಿನ ಸಮರ ಇಲ್ಲಿಗೇ ಮುಗಿದಿಲ್ಲ. ಬಿಜೆಪಿಯ ಮತ್ತೊಬ್ಬರು ಸಂಸದರಾದ ಮನೋಜ್​ ತಿವಾರಿ ಇನ್ನೊಂದು ಹಾಡನ್ನು ಹಾಡಿದ್ದಾರೆ. ಮಂದಿರ್ ಅಬ್​ ಬನಾನೆ ಎಂಬ ಹಾಡಿದು. ಅಂದರೆ ಮಂದಿರ (ಅಯೋಧ್ಯೆ ರಾಮಮಂದಿರ) ನಿರ್ಮಾಣ ಶುರುವಾಗಿದೆ, ಎಲ್ಲೆಲ್ಲೂ ಕೇಸರಿ ಎಂಬ ಅರ್ಥ ಸೂಸುವ ಹಾಡು.  ಫೆ.10ರಿಂದ ಶುರುವಾಗಲಿರುವ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಹಾಡಿನ ಮೂಲಕ ಸಮರ ಶುರುವಾಗಿದೆ.

ಇದನ್ನೂ ಓದಿ: ಮದುವೆಯ ಬಳಿಕವೂ ಸಂಬಂಧಿಕನ ಜೊತೆ ಪ್ರೀತಿ; ಬಾಡಿಗೆ ಮನೆಯಲ್ಲಿ ಪ್ರಿಯಕರನ ಜೊತೆ ಆತ್ಮಹತ್ಯೆಗೆ ಶರಣಾದ ಮಹಿಳೆ

Follow Us
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ