AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಉತ್ತರಪ್ರದೇಶ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟವೂ ಈಗ ಕಿವಿಗೆ ಇಂಪು; ಒಂದರ ಬೆನ್ನಿಗೆ ಇನ್ನೊಂದು ಹಾಡುಗಳು ವೈರಲ್​

UP Assembly Election 2022: ರವಿ ಕಿಶನ್​ ತಮ್ಮ 5 ನಿಮಿಷಗಳ ಹಾಡಿನ ಮೂಲಕ ಹೊಗಳಿದ್ದಾರೆ. ಬಿಜೆಪಿಯನ್ನು ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಈ ಹಾಡಿನ ಮೂಲಕ ಮನವಿ ಮಾಡಿದ್ದಾರೆ. 

Video: ಉತ್ತರಪ್ರದೇಶ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟವೂ ಈಗ ಕಿವಿಗೆ ಇಂಪು; ಒಂದರ ಬೆನ್ನಿಗೆ ಇನ್ನೊಂದು ಹಾಡುಗಳು ವೈರಲ್​
ರವಿ ಕಿಶನ್​ ಮತ್ತು ನೇಹಾ ರಾಥೋಡ್​
TV9 Web
| Edited By: |

Updated on: Jan 18, 2022 | 9:14 AM

Share

ಉತ್ತರ ಪ್ರದೇಶ ಸೇರಿ ಒಟ್ಟು 5 ರಾಜ್ಯಗಳ ಚುನಾವಣೆ ಸಮೀಪಿಸುತ್ತಿದೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ವಾಗ್ದಾಳಿ-ಪ್ರತಿವಾಗ್ದಾಳಿಗಳೆಲ್ಲ ಸಾಮಾನ್ಯ. ಹೀಗಿರುವಾಗ ಉತ್ತರ ಪ್ರದೇಶಲ್ಲಿ ರಾಜಯಕೀಯ ಪಕ್ಷಗಳ ನಡುವೆ ಗಾಯನ ಸಮರ ಶುರುವಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕ, ಸಂಸದ ರವಿ ಕಿಶನ್​ ಅವರು ಉತ್ತರಪ್ರದೇಶ ಸರ್ಕಾರ, ಯೋಗಿ ಆದಿತ್ಯನಾಥ್​ ಅವರನ್ನು ಹೊಗಳಿ ಒಂದು ಹಾಡು ಹಾಡಿದ್ದರು. ಭೋಜಪುರಿ ನಟ, ಗಾಯಕರೂ ಆಗಿರುವ ರವಿ ಕಿಶನ್​ ಯುಪಿ ಮೆ ಸಬ್​ ಬಾ (ಉತ್ತರಪ್ರದೇಶದಲ್ಲಿ ಎಲ್ಲವೂ ಇದೆ) ಎಂಬ ಹಾಡನ್ನು ಹಾಡಿದ್ದರು. ಅದರಲ್ಲಿ, ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 5ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಉಲ್ಲೇಖವಿದೆ.  ಇತ್ತೀಚೆಗೆ ಉದ್ಘಾಟನೆಯಾದ ಕುಶಿನಗರ ಏರ್​ಪೋರ್ಟ್ ಮತ್ತು ಜಾವರ್​ ಏರ್​ಪೋರ್ಟ್​ಗಳ ಉಲ್ಲೇಖವೂ ಇದೆ.  ಅಷ್ಟೇ ಅಲ್ಲ, ಉತ್ತರಪ್ರದೇಶ ಸರ್ಕಾರ ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿ, ಕಾನೂನು ಸುವ್ಯವಸ್ಥೆ ಜಾರಿಗೊಳಿಸಿದ ರೀತಿಯಯನ್ನೂ ರವಿ ಕಿಶನ್​ ತಮ್ಮ 5 ನಿಮಿಷಗಳ ಹಾಡಿನ ಮೂಲಕ ಹೊಗಳಿದ್ದಾರೆ. ಬಿಜೆಪಿಯನ್ನು ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಈ ಹಾಡಿನ ಮೂಲಕ ಮನವಿ ಮಾಡಿದ್ದಾರೆ. 

ರವಿ ಕಿಶನ್​ ಹಾಡು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇನ್ನೊಬ್ಬರು ಭೋಜಪುರಿ ಗಾಯಕ ನೇಹಾ ರಾಥೋಡ್​ ಈ ಹಾಡಿಗೆ ಪ್ರತಿಯಾಗಿ ಒಂದು ಹಾಡು ಹಾಡಿದ್ದಾರೆ. ತಮ್ಮ ಹಾಡಿನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ತೆಗಳಿದ್ದಾರೆ. ಸದ್ಯ ಪ್ರತಿಪಕ್ಷಗಳು ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಯಾವೆಲ್ಲ ಆರೋಪ ಮಾಡುತ್ತಿವೆಯೋ, ಅದೆಲ್ಲವನ್ನೂ ಸೇರಿಸಿ ನೇಹಾ ಹಾಡು ಹಾಡಿದ್ದಾರೆ.

23 ವರ್ಷದ ನೇಹಾ ರಾಥೋಡ್​ ಇದೀಗ ಯುಪಿ ಮೆ ಕಾ ಬಾ (ಏನಿದೆ ಉತ್ತರಪ್ರದೇಶದಲ್ಲಿ) ಎಂಬ ಹಾಡನ್ನು ಟ್ವಿಟರ್​, ಯೂಟ್ಯೂಬ್​​ನಲ್ಲಿ ಹರಿಬಿಟ್ಟಿದ್ದಾರೆ. ಕೊವಿಡ್​ 19 ಎರಡನೇ ಅಲೆ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಶವಗಳು ಸಿಕ್ಕ ಬಗ್ಗೆ, ಹತ್ರಾಸ್​ ಅತ್ಯಾಚಾರ ಪ್ರಕರಣ ಮತ್ತು ಲಖಿಂಪುರದಲ್ಲಿ ರೈತರ ಕೊಲೆಯಾದ ಬಗ್ಗೆ ತಮ್ಮ ಹಾಡಿನ ಮೂಲಕವೇ ಸರ್ಕಾರವನ್ನು ಚುಚ್ಚಿದ್ದಾರೆ.  ಈ ಹಾಡನ್ನು ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಅಂದಹಾಗೇ, ಈ ಹಾಡಿನ ಸಮರ ಇಲ್ಲಿಗೇ ಮುಗಿದಿಲ್ಲ. ಬಿಜೆಪಿಯ ಮತ್ತೊಬ್ಬರು ಸಂಸದರಾದ ಮನೋಜ್​ ತಿವಾರಿ ಇನ್ನೊಂದು ಹಾಡನ್ನು ಹಾಡಿದ್ದಾರೆ. ಮಂದಿರ್ ಅಬ್​ ಬನಾನೆ ಎಂಬ ಹಾಡಿದು. ಅಂದರೆ ಮಂದಿರ (ಅಯೋಧ್ಯೆ ರಾಮಮಂದಿರ) ನಿರ್ಮಾಣ ಶುರುವಾಗಿದೆ, ಎಲ್ಲೆಲ್ಲೂ ಕೇಸರಿ ಎಂಬ ಅರ್ಥ ಸೂಸುವ ಹಾಡು.  ಫೆ.10ರಿಂದ ಶುರುವಾಗಲಿರುವ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಹಾಡಿನ ಮೂಲಕ ಸಮರ ಶುರುವಾಗಿದೆ.

ಇದನ್ನೂ ಓದಿ: ಮದುವೆಯ ಬಳಿಕವೂ ಸಂಬಂಧಿಕನ ಜೊತೆ ಪ್ರೀತಿ; ಬಾಡಿಗೆ ಮನೆಯಲ್ಲಿ ಪ್ರಿಯಕರನ ಜೊತೆ ಆತ್ಮಹತ್ಯೆಗೆ ಶರಣಾದ ಮಹಿಳೆ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್