AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷಕ್ಕೆ ದೃಷ್ಟಿ ವಿಕಲಚೇತನರಿಗೆ ಆರ್​ಬಿಐನಿಂದ ವಿನೂತನ ಕೊಡುಗೆ!

ದೆಹಲಿ: ಹೊಸ ವರ್ಷಕ್ಕೆ ದೃಷ್ಟಿ ವಿಕಲಚೇತನರಿಗೆ ಆರ್​ಬಿಐ ವಿನೂತನ ಕೊಡುಗೆ ನೀಡಿದೆ. ಇನ್ಮುಂದೆ ಹಣವನ್ನು ಗುರುತಿಸಲು ಬೇರೆ ಯಾರ ಸಹಾಯ ಪಡೆಯದೆ ತಾವೆ ಗುರುತಿಸುವಂತ ಸೌಲಭ್ಯ ಕಲ್ಪಿಸಿದೆ. ಆರ್​ಬಿಐ ದೃಷ್ಟಿ ವಿಕಲಚೇತನರಿಗೆ ನೋಟು ಗುರುತಿಸಲು ಮನಿ ಎಂಬ ಆ್ಯಪ್​ ಬಿಡುಗಡೆ ಮಾಡಿದೆ. ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದ, ದೃಷ್ಟಿ ವಿಕಲಚೇತನರು ಮೊಬೈಲ್​ ಕ್ಯಾಮೆರಾದ ಮುಂದೆ ನೋಟನ್ನು ಇಟ್ಟು ಚಿತ್ರವನ್ನು ಸೆರೆಹಿಡಿಯುವ ಮೂಲಕ ಮಹಾತ್ಮ ಗಾಂಧಿ ಚಿತ್ರ ಹಾಗೂ ಮುಖಬೆಲೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. Mobile Aided Note Identifier- MANI […]

ಹೊಸ ವರ್ಷಕ್ಕೆ ದೃಷ್ಟಿ ವಿಕಲಚೇತನರಿಗೆ ಆರ್​ಬಿಐನಿಂದ ವಿನೂತನ ಕೊಡುಗೆ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 01, 2020 | 5:49 PM

Share

ದೆಹಲಿ: ಹೊಸ ವರ್ಷಕ್ಕೆ ದೃಷ್ಟಿ ವಿಕಲಚೇತನರಿಗೆ ಆರ್​ಬಿಐ ವಿನೂತನ ಕೊಡುಗೆ ನೀಡಿದೆ. ಇನ್ಮುಂದೆ ಹಣವನ್ನು ಗುರುತಿಸಲು ಬೇರೆ ಯಾರ ಸಹಾಯ ಪಡೆಯದೆ ತಾವೆ ಗುರುತಿಸುವಂತ ಸೌಲಭ್ಯ ಕಲ್ಪಿಸಿದೆ. ಆರ್​ಬಿಐ ದೃಷ್ಟಿ ವಿಕಲಚೇತನರಿಗೆ ನೋಟು ಗುರುತಿಸಲು ಮನಿ ಎಂಬ ಆ್ಯಪ್​ ಬಿಡುಗಡೆ ಮಾಡಿದೆ. ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದ, ದೃಷ್ಟಿ ವಿಕಲಚೇತನರು ಮೊಬೈಲ್​ ಕ್ಯಾಮೆರಾದ ಮುಂದೆ ನೋಟನ್ನು ಇಟ್ಟು ಚಿತ್ರವನ್ನು ಸೆರೆಹಿಡಿಯುವ ಮೂಲಕ ಮಹಾತ್ಮ ಗಾಂಧಿ ಚಿತ್ರ ಹಾಗೂ ಮುಖಬೆಲೆಯನ್ನು ಗುರುತಿಸಲು ಸಾಧ್ಯವಾಗುತ್ತದೆ.

Mobile Aided Note Identifier- MANI ಈ ಆ್ಯಪ್ ಉಚಿತವಾಗಿ ಎಲ್ಲಾ ಆಂಡ್ರಾಯ್ಡ್ ಮೊಬೈಲ್​ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಈ ಆಪ್ ಬಿಡುಗಡೆ ಮಾಡಿದರು. ಇದರ ಸಹಾಯದಿಂದ ದೃಷ್ಟಿ ವಿಕಲಚೇತನರು ಯಾರ ಸಹಾಯವಿಲ್ಲದೆ ತಮ್ಮ ಬಳಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

Published On - 5:28 pm, Wed, 1 January 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು