AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಕೆಂಪು ಬೆಂಡೆ ಗೊತ್ತಾ?-ಆರೋಗ್ಯಕ್ಕೆ ತುಂಬ ಒಳ್ಳೆಯದಾದ ಈ ತರಕಾರಿ ಬೆಲೆ ಕಡಿಮೆ ಅಲ್ಲ !

Red Okra: ಹಸಿರು ಬೆಂಡೆಕಾಯಿ ಕೂಡ ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಈ ಕೆಂಪು ಬೆಂಡೆ ಮತ್ತೂ ಒಳ್ಳೆಯದು ಎನ್ನುತ್ತಾರೆ ಮಿಸ್ರಿಲಾಲ್ ರಜಪೂತ್.

ನಿಮಗೆ ಕೆಂಪು ಬೆಂಡೆ ಗೊತ್ತಾ?-ಆರೋಗ್ಯಕ್ಕೆ ತುಂಬ ಒಳ್ಳೆಯದಾದ ಈ ತರಕಾರಿ ಬೆಲೆ ಕಡಿಮೆ ಅಲ್ಲ !
ಕೆಂಪು ಬೆಂಡೆ
TV9 Web
| Updated By: Lakshmi Hegde|

Updated on: Sep 06, 2021 | 4:47 PM

Share

ಬೆಂಡೆಕಾಯಿ (LadyFinger) ಎಂದಾಕ್ಷಣ ಹಸಿರು ಬಣ್ಣದಲ್ಲಿ ಇರುತ್ತದೆ ಎಂದು ನಮ್ಮ ಅನಿಸಿಕೆ. ಆದರೆ ಮಧ್ಯಪ್ರದೇಶ (Madhya Pradesh) ದ ರೈತರೊಬ್ಬರು ಕೆಂಪು ಬೆಂಡೆಕಾಯಿ (Red Ladyfinger, Kashi Lalima) ಬೆಳೆಯುತ್ತಿದ್ದಾರೆ. ಭೋಪಾಲ್​ನ ಖಜೂರಿ ಕಲಾನ್ ಪ್ರದೇಶದ ಮಿಸ್ರಿಲಾಲ್​ ರಜಪೂತ್​ ತೋಟವೀಗ ಕೆಂಪು ಬೆಂಡೆಯ ಮೂಲಕ ಜನರ ಆಕರ್ಷಣೆಯ ಕೇಂದ್ರವಾಗಿದೆ. ತೋಟದಲ್ಲಿ ಕೆಂಪು ಬೆಂಡೆ ಬೀಜಗಳನ್ನು ಹಾಕಿದ್ದ ಮಿಸ್ರಿಲಾಲ್​ ಕೇವಲ 40ದಿನಗಳಲ್ಲಿ ಗಿಡ ಬೆಳೆದು, ಕಾಯಿಯೂ ಬಿಟ್ಟಿದೆ ಎಂದು ತಿಳಿಸಿದ್ದಾರೆ.

ಆರೋಗ್ಯಕ್ಕೆ ತುಂಬ ಒಳ್ಳೆಯದು ಹಸಿರು ಬೆಂಡೆಕಾಯಿ ಕೂಡ ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಈ ಕೆಂಪು ಬೆಂಡೆ ಮತ್ತೂ ಒಳ್ಳೆಯದು ಎನ್ನುತ್ತಾರೆ ಮಿಸ್ರಿಲಾಲ್ ರಜಪೂತ್. ಹಸಿರು ಬೆಂಡೆಕಾಯಿಯಲ್ಲಿ ಇರುವುದಕ್ಕಿಂತಲೂ ಜಾಸ್ತಿ ಪೌಷ್ಟಿಕಾಂಶ ಕೆಂಪು ಬೆಂಡೆಯಲ್ಲಿ ಇದೆ. ಅದರಲ್ಲೂ ರಕ್ತದೊತ್ತಡ ಮತ್ತು ಹೃದಯಸಂಬಂಧಿ ಕಾಯಿಲೆ, ಡಯಾಬಿಟಿಸ್​, ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೆಂಪು ಬೆಂಡೆಕಾಯಿ ಹೇಳಿಮಾಡಿಸಿದ ತರಕಾರಿ ಎಂದು ಹೇಳಿದ್ದಾರೆ.

ಭರ್ಜರಿ ಬೆಲೆ ಕೆಂಪು ಬೆಂಡೆಕಾಯಿ ಬೆಲೆ ಸ್ವಲ್ಪ ಜಾಸ್ತಿಯೇ ಇದೆ. ಮಿಸ್ರಿಲಾಲ್​ ರಜಪೂತ್ ಹೇಳುವ ಪ್ರಕಾರ ಅವರು 250 ಗ್ರಾಂ. ಕೆಂಪು ಬೆಂಡೆಯನ್ನು 75-80 ರೂಪಾಯಿಗೆ ಮಾರಾಟ ಮಾಡುತ್ತಾರೆ. ಹಾಗೇ, 500 ಗ್ರಾಂ.ಗೆ 300-400 ರೂ.ನಿಗದಿ ಮಾಡಿದ್ದಾರೆ. ಅಲ್ಲಿಗೆ 1 ಕೆಜಿ ಕೆಂಪುಬೆಂಡೆಯನ್ನು ಅವರ ಬಳಿ ಕೊಂಡರೆ 800 ರೂ. ನೀಡಬೇಕಾಗುತ್ತದೆ. ಮಾರುಕಟ್ಟೆ ಬೆಲೆ ಇರುವುದೇ ಹೀಗೆ ಎನ್ನುತ್ತಾರೆ ಮಿಸ್ರಿಲಾಲ್​. ತಾವು ಈ ಕೆಂಪು ಬೆಂಡೆ ಬೆಳೆಸಲು ಸ್ವಲ್ಪವೂ ವಿಷಕಾರಿ ಕ್ರಿಮಿ ನಾಶಕ ಬಳಸಲಿಲ್ಲ ಎಂದಿರುವ ಅವರು, ಒಂದು ಎಕರೆ ಜಾಗದಲ್ಲಿ ಕನಿಷ್ಠ 40-50 ಕ್ವಿಂಟಲ್​ ಮತ್ತು ಗರಿಷ್ಠ 70-80 ಕ್ವಿಂಟಲ್​ ಕೆಂಪು ಬೆಂಡೆ ಬೆಳೆಯಬಹುದು ಎಂದು ತಿಳಿಸಿದ್ದಾರೆ.

ಬೀಜ ಕೊಂಡಿದ್ದು ಎಲ್ಲಿಂದ? ತಾನು ಈ ಕೆಂಪು ಬೆಂಡೆಯ ಬೀಜವನ್ನು ವಾರಾಣಸಿಯ ಕೃಷಿ ಸಂಶೋಧನಾ ಸಂಸ್ಥೆ (ಇಂಡಿಯನ್​ ಇನ್​ಸ್ಟಿಟ್ಯೂಟ್ ಆಫ್​ ವೆಜಿಟೆಬಲ್​ ರಿಸರ್ಚ್​ ಸಂಸ್ಥೆ)ಯಿಂದ ಒಂದು ಕೆಜಿಯಷ್ಟು ತಂದಿದ್ದೆ ಎಂದು ರಜಪೂತ್ ತಿಳಿಸಿದ್ದಾರೆ. ಅಂದಹಾಗೆ ಈ ರಿಸರ್ಚ್ ಸಂಸ್ಥೆ ಭಾರತೀಯ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. 23 ವರ್ಷಗಳ ಸಂಶೋಧನೆ ನಂತರ 2019ರಲ್ಲಿ ಈ ಕೆಂಪು ಬೆಂಡೆಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಕಾಶಿ ಲಲಿಮಾ ಎಂದು ಅಧಿಕೃತವಾಗಿ ನಾಮಕರಣ ಮಾಡಿದೆ.

ಇದನ್ನೂ ಓದಿ: ರಾಮ್​ ಚರಣ್​ ಒಪ್ಪದಿದ್ದರೂ ಲಿಪ್​ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ

ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ; TOCIRA ಔಷಧ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ