AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್​ ಚರಣ್​ ಒಪ್ಪದಿದ್ದರೂ ಲಿಪ್​ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ

ಸಮಂತಾ ಜೊತೆ ಲಿಪ್​ ಲಾಕ್​ ದೃಶ್ಯದಲ್ಲಿ ನಟಿಸಲು ರಾಮ್​ ಚರಣ್​ ಹಿಂದೇಟು ಹಾಕಿದ್ದರು. ಒಂದಲ್ಲ, ಎರಡಲ್ಲ, ಮೂರು ಬಾರಿ ತಿಳಿಸಿ ಹೇಳಿದರೂ ಅವರು ಅದಕ್ಕೆ ಒಪ್ಪಲಿಲ್ಲ. ಕಡೆಗೆ ನಿರ್ದೇಶಕರು ಬೇರೆ ಉಪಾಯ ಮಾಡಬೇಕಾಯಿತು.

ರಾಮ್​ ಚರಣ್​ ಒಪ್ಪದಿದ್ದರೂ ಲಿಪ್​ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ
ಸಮಂತಾ ಅಕ್ಕಿನೇನಿ, ರಾಮ್​ ಚರಣ್
TV9 Web
| Edited By: |

Updated on: Sep 06, 2021 | 4:39 PM

Share

ನಟಿ ಸಮಂತಾ ಅಕ್ಕಿನೇನಿ ಅವರು ಒಂದಿಲ್ಲೊಂದು ಕಾರಣಕ್ಕೆ ಈಗ ಸುದ್ದಿ ಆಗುತ್ತಿದ್ದಾರೆ. ಸಿನಿಮಾದ ಜೊತೆಜೊತೆಗೆ ಅವರ ವೈಯಕ್ತಿಕ ಜೀವನದ ವಿಚಾರಗಳೆಲ್ಲ ಹೊರಬರುತ್ತಿವೆ. ಪತಿ ನಾಗ ಚೈತನ್ಯ ಜೊತೆ ಅವರಿಗೆ ವೈಮನಸ್ಸು ಉಂಟಾಗಿದೆ ಎಂಬ ಗಾಸಿಪ್​ ಕೂಡ ಹಬ್ಬಿದೆ. ಈ ಸಮಯಕ್ಕೆ ಸರಿಯಾಗಿ ಅವರ ಒಂದು ಮುತ್ತಿನ ಕಥೆ ಬಹಿರಂಗ ಆಗಿದೆ. ಅದು ‘ರಂಗಸ್ಥಲಂ’ ಸಿನಿಮಾದ ಶೂಟಿಂಗ್​ ವೇಳೆ ನಡೆದಿದ್ದು. ಆ ವಿಚಾರ ಟಾಲಿವುಡ್​ ಅಂಗಳದಲ್ಲಿ ಜೀವ ಪಡೆದುಕೊಂಡಿದೆ.

‘ರಂಗಸ್ಥಲಂ’ ಸಿನಿಮಾಗೆ ಸುಕುಮಾರ್​ ನಿರ್ದೇಶನ ಮಾಡಿದ್ದರು. ಸಮಂತಾ ಮತ್ತು ರಾಮ್​ ಚರಣ್​ ವೃತ್ತಿಜೀವನಕ್ಕೆ ಆ ಚಿತ್ರದಿಂದ ದೊಡ್ಡ ಮೈಲೇಜ್​ ಸಿಕ್ಕಿತು. ಅದರಲ್ಲಿನ ಒಂದು ಲಿಪ್​ ಲಾಕ್​ ದೃಶ್ಯ ಸಿಕ್ಕಾಪಟ್ಟೆ ಹೈಲೈಟ್ ಆಗಿತ್ತು. ಆ ದೃಶ್ಯದ ಹಿಂದೆ ಒಂದು ಇಂಟರೆಸ್ಟಿಂಗ್​ ಕಥೆ ಇದೆ. ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಬಾಯಿಬಿಟ್ಟಿಲ್ಲವಾದರೂ ರಸವತ್ತಾದ ವಿವರಗಳು ಹರಿದಾಡುತ್ತಿರುವುದು ನಿಜ.

ನಾಯಕ-ನಾಯಕಿ ನಡುವೆ ಪ್ರೀತಿಯನ್ನು ತೋರಿಸಲು ಆ ಲಿಪ್​ ಲಾಕ್​ ದೃಶ್ಯ ನಿರ್ದೇಶಕರಿಗೆ ಮುಖ್ಯವಾಗಿತ್ತು. ಆದರೆ ರಾಮ್​ ಚರಣ್​ ಅವರು ಆ ದೃಶ್ಯದಲ್ಲಿ ನಟಿಸಲು ಹಿಂದೇಟು ಹಾಕಿದರು. ಒಂದಲ್ಲ, ಎರಡಲ್ಲ, ಮೂರು ಬಾರಿ ತಿಳಿಸಿ ಹೇಳಿದರೂ ಅವರು ಅದಕ್ಕೆ ಒಪ್ಪಲಿಲ್ಲ. ರಾಮ್​ ಚರಣ್​ ಪತ್ನಿ ಉಮಾಸನಾ ಅವರಿಗೆ ಇದೆಲ್ಲ ಇಷ್ಟ ಆಗುವುದಿಲ್ಲ ಎಂಬ ಕಾರಣಕ್ಕೆ ಮುತ್ತಿನ ದೃಶ್ಯಕ್ಕೆ ಅವರು ನೋ ಎಂದಿದ್ದರು.

ಇನ್ನೇನು ಚಿತ್ರೀಕರಣ ಮುಗಿಯುತ್ತಿದೆ ಎಂದಾಗ ನಿರ್ದೇಶಕ ಸುಕುಮಾರ್ ಒಂದು ಪ್ಲ್ಯಾನ್​ ಮಾಡಿದರಂತೆ. ‘ನೀವು ಕಿಸ್​ ಮಾಡುವುದು ಬೇಡ. ಸಮಂತಾ ಮತ್ತು ನೀವು ದೂರದಿಂದಲೇ ಲಿಪ್​ ಲಾಕ್​ ಮಾಡಿದಂತೆ ನಟಿಸಿ. ಗ್ರಾಫಿಕ್ಸ್​ ಮೂಲಕ ಅದನ್ನು ಲಿಪ್​ ಲಾಕ್​ ರೀತಿ ತೋರಿಸುತ್ತೇನೆ’ ಎಂದು ನಿರ್ದೇಶಕರು ಹೇಳಿದ ಬಳಿಕ ರಾಮ್​ ಚರಣ್​ ಒಪ್ಪಿಕೊಂಡರಂತೆ. ಆದರೆ ಅದರ ಚಿತ್ರೀಕರಣ ನಡೆಯುವಾಗ ಸಮಂತಾ ನಿಜವಾಗಿಯೇ ಲಿಪ್ ಲಾಕ್​ ಮಾಡಿಬಿಟ್ಟರು ಎಂಬ ಸುದ್ದಿ ಈಗ ಗಾಸಿಪ್​ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ. ಚಿತ್ರತಂಡದಿಂದ ಯಾರಾದರೊಬ್ಬರು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡುವವರೆಗೆ ಇದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ.

ಇದನ್ನೂ ಓದಿ:

ಮಗ-ಸೊಸೆಯ ಡಿವೋರ್ಸ್​ ವದಂತಿಯಿಂದ ಮುಖ್ಯ ನಿರ್ಧಾರ ತೆಗೆದುಕೊಂಡ ನಾಗಾರ್ಜುನ? ಹೆಚ್ಚಿತು ಸಂಶಯದ ಬೆಂಕಿ

ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ ಕೇಳಿ, ನಟನೆಯಿಂದ ಬ್ರೇಕ್​ ಪಡೆದ ಸಮಂತಾ ಅಕ್ಕಿನೇನಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್