ಭಾರತದ ಪರಿಸರ ಹದಗೆಟ್ಟಿದೆ, ವಿದೇಶದಲ್ಲಿ ನೆಲೆಸಲು ಮಕ್ಕಳಿಗೆ ಸಲಹೆ ನೀಡಿದ್ದೇನೆ: ವಿವಾದಾತ್ಮಕ ಹೇಳಿಕೆ ನೀಡಿದ ಆರ್​ಜೆಡಿ ನಾಯಕ

ಭಾರತದ ಪರಿಸರ ಹದಗೆಟ್ಟಿದೆ ಹಾಗಾಗಿ ನನ್ನ ಮಕ್ಕಳಿಗೆ ವಿದೇಶದಲ್ಲಿ ನೆಲೆಸಲು ಸಲಹೆ ನೀಡಿದ್ದೇನೆ ಎಂದು ಆರ್​ಜೆಡಿ ನಾಯಕ ಅಬ್ದುಲ್ ಸಿದ್ದಿಕಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾರತದ ಪರಿಸರ ಹದಗೆಟ್ಟಿದೆ, ವಿದೇಶದಲ್ಲಿ ನೆಲೆಸಲು ಮಕ್ಕಳಿಗೆ ಸಲಹೆ ನೀಡಿದ್ದೇನೆ: ವಿವಾದಾತ್ಮಕ ಹೇಳಿಕೆ ನೀಡಿದ ಆರ್​ಜೆಡಿ ನಾಯಕ
Abdul Bari Siddiqui
Follow us
| Updated By: ನಯನಾ ರಾಜೀವ್

Updated on: Dec 23, 2022 | 9:53 AM

ಭಾರತದ ಪರಿಸರ ಹದಗೆಟ್ಟಿದೆ ಹಾಗಾಗಿ ನನ್ನ ಮಕ್ಕಳಿಗೆ ವಿದೇಶದಲ್ಲಿ ನೆಲೆಸಲು ಸಲಹೆ ನೀಡಿದ್ದೇನೆ ಎಂದು ಆರ್​ಜೆಡಿ ನಾಯಕ ಅಬ್ದುಲ್ ಸಿದ್ದಿಕಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ನನ್ನ ಗಂಡು ಹೆಣ್ಣು ಮಕ್ಕಳಿಗೆ ವಿದೇಶದಲ್ಲಿ ಇರುವಂತೆ ಹೇಳಿದ್ದೇನೆ ಎಂದು ಹೇಳಿದ್ದಾರೆ. ಬಿಹಾರದ ಲಾಲು ಯಾದವ್ ಪಕ್ಷದ ಆರ್‌ಜೆಡಿಯ ಹಿರಿಯ ನಾಯಕರೊಬ್ಬರು ತಮ್ಮ ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ಮಾಡಿ, ಸಾಧ್ಯವಾದರೆ ಅಲ್ಲಿಯೇ ನೆಲೆಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಬಾರಿ ಸಿದ್ದಿಕಿ ಅವರು ದೇಶದಲ್ಲಿ ಮುಸ್ಲಿಮರ ವಿರುದ್ಧ ಪಕ್ಷಪಾತ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಆರ್‌ಜೆಡಿ ನಾಯಕ ‘ಭಾರತ ವಿರೋಧಿ’ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಹಾಗಾದರೆ ಪಾಕಿಸ್ತಾನಕ್ಕೆ ತೆರಳಿ ಎಂದು ಸಲಹೆ ನೀಡಿದೆ.

ಮತ್ತಷ್ಟು ಓದಿ: Lalu Prasad Yadav: ಕಿಡ್ನಿ ಕಸಿಗೆ ಸಿಂಗಾಪುರಕ್ಕೆ ತೆರಳಿದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್

ಸಿದ್ದಿಕಿ ಅವರ ಹೇಳಿಕೆಗಳು ಭಾರತ ವಿರೋಧಿಯಾಗಿದೆ. ಅವರು ತುಂಬಾ ಉಸಿರುಗಟ್ಟುತ್ತಿದ್ದರೆ, ಅವರು ರಾಜಕೀಯ ನಾಯಕರಾಗಿ ಇಲ್ಲಿ ಅನುಭವಿಸುತ್ತಿರುವ ಸವಲತ್ತುಗಳನ್ನು ತ್ಯಜಿಸಿ ಪಾಕಿಸ್ತಾನಕ್ಕೆ ಹೋಗಬೇಕು. ಯಾರೂ ಅವರನ್ನು ತಡೆಯುವುದಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್ ಟೀಕಿಸಿದರು.

ಸಿದ್ಧಿಕಿ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಆಪ್ತ ಸಹಾಯಕರಾಗಿದ್ದಾರೆ ಮತ್ತು ಅವರ ಮಾತುಗಳು ಅವರ ಪಕ್ಷದ ಮುಸ್ಲಿಂ ತುಷ್ಟೀಕರಣದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಬಿಜೆಪಿ ಹೇಳಿದೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ